ಪ್ರಾಮಾಣಿಕರಿಗೆ ನಿಶ್ಚಿಂತೆ: ಸಚಿವ ಪ್ರಮೋದ್
Team Udayavani, Aug 5, 2017, 9:10 AM IST
ಉಡುಪಿ: ಪ್ರಾಮಾಣಿಕ ಮಂತ್ರಿ, ಶಾಸಕರು ನಿಶ್ಚಿಂತೆಯಿಂದ ನಿದ್ದೆ ಮಾಡಬಹುದು. ತೆರಿಗೆ ಸರಿಯಾಗಿ ಪಾವತಿ ಮಾಡುವವರು ಚಿಂತಿಸಬೇಕಾಗಿಲ್ಲ – ಇದು ಸಚಿವ ಪ್ರಮೋದ್ ಮಧ್ವರಾಜ್ ಪ್ರತಿಕ್ರಿಯೆ.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಐಟಿ ದಾಳಿ ತಪ್ಪಲ್ಲ. ವಿರೋಧ ಪಕ್ಷದ ಮೇಲೆ ಮಾತ್ರ ದಾಳಿ ಸರಿಯಲ್ಲ. ಒಂದೆರಡು ಬಿಜೆಪಿ ಮಂತ್ರಿಗಳ ಮೇಲೂ ದಾಳಿ ಮಾಡಿ ಎಂದು ಆದಾಯ ತೆರಿಗೆ ಇಲಾಖೆಗೆ ಸಲಹೆ ನೀಡಿದರು.
ಇದು ರಾಜಕೀಯ ಪ್ರೇರಿತ, ದುರುದ್ದೇಶಪೂರಿತ ದಾಳಿ. ಅಧಿಕಾರಿ ತಂಡ ದಾಳಿ ಮಾಡಿದ ಸಮಯ ಸರಿಯಿಲ್ಲ. ಗುಜರಾತ್ ಶಾಸಕರು ಇಲ್ಲಿರುವಾಗ ದಾಳಿ ಬೇಡವಾಗಿತ್ತು. ಬಿಜೆಪಿಗೆ ಇರಿಸುಮುರಿಸು ಉಂಟಾಗಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಸಾಧ್ಯತೆಯಿದೆ ಎಂದರು.
ಐಟಿ ದಾಳಿಗೆ ಸಿಎಂ ಸಿದ್ದರಾಮಯ್ಯ ಕಾರಣ ಎಂದು ಡಿಕೆಶಿ ತಾಯಿ ಮಾಡಿದ ಟೀಕೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಶಿವಕುಮಾರ್ ತಾಯಿ ಗೌರಮ್ಮ ಎಷ್ಟು ಪರಿಪಕ್ವತೆ ಹೊಂದಿದ್ದಾರೋ ಗೊತ್ತಿಲ್ಲ. ಅವರಿಗೆ ರಾಜಕೀಯ ಎಷ್ಟು ಗೊತ್ತಿದೆ? ಹೀಗಾಗಿ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ