ಹಳೇ ಕಾಲದ ಶಿಲಾಶಾಸನ ಪತ್ತೆ
Team Udayavani, May 22, 2020, 5:33 AM IST
ಉಡುಪಿ: ಆತ್ರಾಡಿ ಮೂಲಕ ಮೂಡುಬೆಳ್ಳೆಗೆ ವಾಹನದಲ್ಲಿ ಸಂಚರಿಸುವಾಗ ರಸ್ತೆ ಪಕ್ಕದ ಮೈಲುಗಲ್ಲಿನಲ್ಲಿ ಕಿ.ಮೀ. ಪರಿಶೀಲಿಸುವ ಸಾರ್ವಜನಿಕರಿಗೆ ಗುಂಡುಪಾದೆಯ ಬಸ್ ನಿಲ್ದಾಣದ ಬಳಿ ಶಿಲಾಶಾಸನಕ್ಕೆ ಬಿಳಿ ಬಣ್ಣ ಹಚ್ಚಿರುವುದು ಕಂಡುಬಂದಿದೆ.
ಈ ಶಾಸನದ ಮೇಲ್ಭಾಗದಲ್ಲಿ ಸೂರ್ಯ ಚಂದ್ರ, ಮಧ್ಯದಲ್ಲಿ ದೊಡ್ಡದಾದ ಶಿವಲಿಂಗ ಕಂಡುಬಂದಿದ್ದರೂ ಶಾಸನದಲ್ಲಿ ಬರೆಯುವ ಭಾಗದಲ್ಲಿ ಸಿಮೆಂಟ್ ಹಚ್ಚಿದಂತೆ ಕಾಣಿಸುವುದರಿಂದ ಸರಿಯಾದ ಚಿತ್ರಣ ಕಾಣದಂತಾಗಿದೆ. ಈ ಶಿಲಾಶಾಸನವು ಸುಮಾರು ಎರಡೂವರೆ ಅಡಿ ಉದ್ದ, ಒಂದೂವರೆ ಅಡಿ ಅಗಲ ಹೊಂದಿದೆ.
ಈ ಶಾಸನವು ಮುಂದಿನ ದಿನಗಳಲ್ಲಿ ಮೈಲುಗಲ್ಲಾಗಿ ಪರಿವರ್ತನೆಯಾಗುವ ಸಾಧ್ಯತೆ ಇದ್ದು, ಗತಕಾಲದ ಶಿಲಾಶಾಸನವೊಂದು ರಸ್ತೆಬದಿಯಲ್ಲಿ ಮೈಲುಗಲ್ಲಾಗಿ ಪರಿವರ್ತನೆಯಾಗದೇ ಮುಂದಿನ ಪೀಳಿಗೆಗೆ ಇದರ ಮಾಹಿತಿ ತಿಳಿಯುವಂತಾಗಬೇಕು ಹಾಗೂ ಶಾಸನದ ರಕ್ಷಣೆಯಾಗಬೇಕು ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಗಮನಹರಿಸಬೇಕು ಎನ್ನುವುದು ಹಲವರ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ