ಜೂ. 21ರಂದು ಮತ್ತೆ ಸೂರ್ಯಗ್ರಹಣ


Team Udayavani, Jun 5, 2020, 10:44 AM IST

ಜೂ. 21ರಂದು ಮತ್ತೆ ಸೂರ್ಯಗ್ರಹಣ

ಸಾಂದರ್ಭಿಕ ಚಿತ್ರ

ಉಡುಪಿ: ಕೋವಿಡ್ ಸೋಂಕು ಆರಂಭಕ್ಕೆ ನಾಲ್ಕು ದಿನಗಳ ಮುನ್ನ ಡಿ. 26ರಂದು ಕಂಕಣ ಸೂರ್ಯಗ್ರಹಣ ಗೋಚರವಾಗಿದ್ದರೆ, ಈಗ ಜೂ. 21ರಂದು ಖಂಡಗ್ರಾಸ ಸೂರ್ಯಗ್ರಹಣ ನಡೆಯಲಿದೆ. ಜೂ. 21ರ ಸೂರ್ಯಗ್ರಹಣ10.04ಕ್ಕೆ ಆರಂಭವಾಗಿ ಅಪರಾಹ್ನ 1.22ಕ್ಕೆ ಕೊನೆಗೊಳ್ಳಲಿದೆ. ಮುಂದಿನ ಸೂರ್ಯಗ್ರಹಣ ದಿಲ್ಲಿ ಸಹಿತ
ಉತ್ತರ ಭಾರತ, ಪಾಕಿಸ್ಥಾನ ಮೊದಲಾದ ಭಾಗಗಳಲ್ಲಿ ಕಂಕಣಗ್ರಹಣವಾಗಿದ್ದರೆ, ದಕ್ಷಿಣ ಭಾರತದಲ್ಲಿ ಪಾರ್ಶ್ವಗ್ರಹಣವಾಗಲಿದೆ. ಮುಂದಿನ ಬಾರಿ ಸೂರ್ಯಗ್ರಹಣದ ಸಂದರ್ಭ ಐದಾರು ಗ್ರಹಗಳು ಒಂದೇ ರಾಶಿಯಲ್ಲಿ ಸೇರುತ್ತವೆ. ಇದನ್ನು ಷಡ್ಗ್ರಹ ಯೋಗ ಎನ್ನುತ್ತಾರೆ.

ಗ್ರಹಣ ಅವಲಕ್ಷಣ ಎಂಬ ನಂಬಿಕೆ ಇದೆ. ವಿಶೇಷವಾಗಿ ಸೂರ್ಯಗ್ರಹಣದಿಂದ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ. ಇದರ ಬಗ್ಗೆ ಇತ್ತೀಚಿನ ಪಂಚಾಂಗದಲ್ಲಿಯೂ ಹಿಂದಿನ ಬಾರಿಯ ಪಂಚಾಂಗದಲ್ಲಿಯೂ ಉಲ್ಲೇಖೀಸಿದ್ದೇನೆ ಎನ್ನುತ್ತಾರೆ ಉಡುಪಿ ಶ್ರೀಕೃಷ್ಣ ಪಂಚಾಂಗದ ಗಣಕರು, ಉಡುಪಿ ಸಂಸ್ಕೃತ ಕಾಲೇಜಿನ ಜೋತಿಷ ವಿಭಾಗದ ನಿವೃತ್ತ ಪ್ರಾಧ್ಯಾಪಕ, ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಅರ್ಚಕರಾದ ಪ್ರೊ| ಸಾಲಿಗ್ರಾಮ ಶ್ರೀನಿವಾಸ ಅಡಿಗ. 2019ರ ಡಿ. 31ರಂದು ಕೋವಿಡ್ ಸೋಂಕು ಚೀನದಲ್ಲಿ ಆರಂಭ ವಾಯಿತು. ಡಿ. 26ರಂದು ಕಂಕಣ ಸೂರ್ಯಗ್ರಹಣ ಸಂಭವಿಸಿತ್ತು. ಡಿ. 20ರಿಂದ ಚಿಕಿತ್ಸೆಯಲ್ಲಿದ್ದ ಪೇಜಾವರ ಶ್ರೀ ಆರೋಗ್ಯ ಡಿ. 26 ರಿಂದಲೇ ಕ್ಷೀಣಿಸಲು ಆರಂಭವಾಗಿ ಡಿ. 29ರಂದು ಇಹಲೋಕ ತ್ಯಜಿಸಿದ್ದರು. ಈ ಗ್ರಹಣದ ಬಳಿಕ ವಿಶ್ವದಲ್ಲಿ ಕೋವಿಡ್ ವೈರಸ್‌ ಹುಟ್ಟಿತೆ ಎಂಬ ಚರ್ಚೆಗಳು ನಡೆಯುತ್ತಿವೆ. ಈಗ ಆರು ತಿಂಗಳ ಬಳಿಕ ಜೂ. 21ರಂದು ಸೂರ್ಯಗ್ರಹಣ ಸಂಭವಿಸುತ್ತಿದೆ. ಇದು ಕೋವಿಡ್ ಅಪಾಯವನ್ನು ಹೆಚ್ಚಿಸಬಹುದೆ ಅಥವಾ ಹಿಂದಿನ ಗ್ರಹಣದ ಬಳಿಕ ಉಂಟಾದ ಕೋವಿಡ್ ಪ್ರಭಾವವನ್ನು ತಗ್ಗಿಸಬಹುದೆ ಎಂಬ ಜಿಜ್ಞಾಸೆ ಇದೆ. “ಸಾಮಾನ್ಯವಾಗಿ ಗ್ರಹಣದ ಫ‌ಲ ಆರು ತಿಂಗಳು ಇರುತ್ತದೆ ಎನ್ನುತ್ತಾರೆ ಶ್ರೀನಿವಾಸ ಅಡಿಗ ಅವರು.

ಇಂದು ಛಾಯಾ ಚಂದ್ರಗ್ರಹಣ
ಶುಕ್ರವಾರ (ಜೂ. 5) ಆಗಸದಲ್ಲಿ ಛಾಯಾ  ಚಂದ್ರಗ್ರಹಣ ಸಂಭವಿಸಲಿದೆ. ಚಂದ್ರನ ಬಣ್ಣ ಸ್ವಲ್ಪ ಮಾತ್ರ ಮಸುಕಾಗಲಿದ್ದು, ಇದನ್ನು ವೈಜ್ಞಾನಿಕವಾಗಿಯೂ ಶಾಸ್ತ್ರೀಯವಾಗಿಯೂ ಗ್ರಹಣವಾಗಿ ಪರಿಗಣಿಸುವುದಿಲ್ಲ. ಇದು ವಿಶ್ವದ ಹೆಚ್ಚಿನ ಕಡೆ ಗೋಚರಿಸುವುದಿಲ್ಲ ಎಂದು ಖಗೋಳ ವೀಕ್ಷಕ ಡಾ| ಎ.ಪಿ. ಭಟ್‌ ಅವರು ತಿಳಿಸಿದ್ದಾರೆ. ಈ ವರ್ಷ ಒಟ್ಟು ನಾಲ್ಕು ಚಂದ್ರ, ಒಂದು ಸೂರ್ಯ ಛಾಯಾಗ್ರಹಣ ಸಂಭವಿಸಲಿವೆ.

ಜೂ. 21ರ ಸೂರ್ಯಗ್ರಹಣವು ಕರ್ನಾಟಕದಲ್ಲಿ ಶೇ. 40 ಮಾತ್ರ ಗೋಚರವಾಗುತ್ತದೆ.  ಡಿ. 14ರಂದು ಸೂರ್ಯಗ್ರಹಣವಾದರೂ ಅದು ಛಾಯಾಗ್ರಹಣವಾಗಿದೆ. ಈ ಸಾಲಿನಲ್ಲಿ ಭಾರತಕ್ಕೆ ಗೋಚರಿಸುವ ಏಕೈಕ ಗ್ರಹಣ ಜೂ. 21ರ ಸೂರ್ಯಗ್ರಹಣ.
– ಡಾ| ಎ.ಪಿ. ಭಟ್‌, ಖಗೋಳ ವೀಕ್ಷಕರು, ಉಡುಪಿ

ಗ್ರಹಣದ ಫ‌ಲ ಆರು ತಿಂಗಳು ಇರುತ್ತದೆ ಎಂಬ ನಂಬಿಕೆ ಇದೆ. ಹಿಂದಿನ ಪಂಚಾಂಗದಲ್ಲಿ, ಈ ವರ್ಷದ ಪಂಚಾಂಗದಲ್ಲಿ ವರ್ಷಫ‌ಲದ ಜತೆ ಗ್ರಹಣ ಫ‌ಲವೂ ಸೇರಿ ಕೊಂಡು ಅನಾರೋಗ್ಯದ ಮುನ್ಸೂಚನೆಯನ್ನು ಉಲ್ಲೇಖೀಸಿದ್ದೆ.
– ಪ್ರೊ| ಸಾಲಿಗ್ರಾಮ ಶ್ರೀನಿವಾಸ ಅಡಿಗ, ಪಂಚಾಂಗ ಗಣಕರು

ಟಾಪ್ ನ್ಯೂಸ್

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.