Kundapura ಅಂದರ್ಬಾಹರ್: ಐವರು ವಶಕ್ಕೆ
Team Udayavani, Feb 25, 2024, 12:19 AM IST
ಕುಂದಾಪುರ: ಬಸ್ರೂರು ಮೂರುಕೈ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ಬಾಹರ್ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ವೃತ್ತ ನಿರೀಕ್ಷಕ ನಂದ ಕುಮಾರ್ ನೇತೃತ್ವದ ಕುಂದಾಪುರ ಪೊಲೀಸರ ತಂಡ ಐವರನ್ನು ವಶಕ್ಕೆ ಪಡೆದಿದೆ.
ವಡೇರಹೋಬಳಿಯ ಸುಬ್ರಹ್ಮಣ್ಯ (34), ಕೋಟೇಶ್ವರದ ಸಚಿನ್ (32), ಬೀಜಾಡಿಯ ಪ್ರಸಾದ್ (30), ಸಾಗರದ ಮೊಹಮ್ಮದ್ ಅನ್ನೀಶಾ (31) ಹಾಗೂ ಮರವಂತೆಯ ಮೊಹಮ್ಮದ್ ಅಕºರ್(26) ಆರೋಪಿಗಳು. ಆಟಕ್ಕೆ ಬಳಸಿದ ಪರಿಕರ, 42,500 ರೂ. ಹಣವನ್ನು ಸಹ ವಶಪಡಿಸಿಕೊಂಡಿದ್ದಾರೆ.
ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.