ಹರೀಶ್‌ ಬಂಗೇರ ನಕಲಿ ಖಾತೆ ಪ್ರಕರಣ: ಕ್ಷಿಪ್ರಗತಿಯಲ್ಲಿ ಪ್ರಕರಣ ಭೇದಿಸಿದ್ದ ಸೆನ್‌ ಪೊಲೀಸರು


Team Udayavani, Aug 27, 2021, 7:50 AM IST

ಹರೀಶ್‌ ಬಂಗೇರ ನಕಲಿ ಖಾತೆ ಪ್ರಕರಣ: ಕ್ಷಿಪ್ರಗತಿಯಲ್ಲಿ  ಪ್ರಕರಣ ಭೇದಿಸಿದ್ದ ಸೆನ್‌ ಪೊಲೀಸರು

ಕುಂದಾಪುರ: ಸಾಮಾನ್ಯವಾಗಿ ಸೈಬರ್‌ ಪ್ರಕರಣದಲ್ಲಿ ಮಾಹಿತಿ ಕಲೆ ಹಾಕುವುದು ಮತ್ತು ಆರೋಪ ಪಟ್ಟಿ ಸಲ್ಲಿಸುವುದೇ ಕ್ಲಿಷ್ಟಕರ. ಅದರಲ್ಲಿ ಯಶಸ್ವಿ ಯಾದರೆ ಅರ್ಧ ಯಶಸ್ವಿಯಾದಂತೆ. ವಿನಾಕಾರಣ 20 ತಿಂಗಳ ಕಾಲ ಸೌದಿ ಅರೇಬಿಯಾ ದ ಜೈಲ್ಲಿನದ್ದ ಬೀಜಾಡಿಯ ಹರೀಶ್‌ ಬಂಗೇರ ಪ್ರಕರಣದಲ್ಲೂ ಇದೇ ನೆರವಿಗೆ ಬಂದಿದ್ದು.

ಉಡುಪಿ ಸೆನ್‌ ಪೊಲೀಸರು ಈ ನೆಲೆಯಲ್ಲಿ ಯಶಸ್ವಿಯಾದದ್ದು ಹರೀಶ್‌ ಬಂಗೇರರ ಬಿಡುಗಡೆ ಯಲ್ಲಿ ಮಹತ್ವದ ಪಾತ್ರ ವಹಿಸಿತು ಎನ್ನಲಾಗಿದೆ.

ಹರೀಶ್‌ ಬಂಗೇರ ದೋಷಮುಕ್ತರಾಗಿ ಆ. 17 ರಂದು ಬಿಡುಗಡೆಯಾಗಿ ತಾಯ್ನಾಡಿಗೆ ಮರಳಿದ್ದಾರೆ. ರಾಷ್ಟ್ರ ಮಟ್ಟದ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಅವರ ಬಿಡುಗಡೆಗೆ ನಡೆದ ವಿವಿಧ ಪ್ರಯತ್ನಗಳಲ್ಲಿ ಸೆನ್‌ ಪೊಲೀಸರ ಕ್ಷಿಪ್ರಗತಿಯ ತನಿಖೆಯೂ ಸೇರಿದೆ.

ಸೌದಿ ದೊರೆ ಹಾಗೂ ಮೆಕ್ಕಾಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿಯಾಗಿ ಫೇಸ್‌ಬುಕ್‌ನಲ್ಲಿ ಬರೆದ ಆರೋಪದಲ್ಲಿ ದೇಶದ್ರೋಹ ಪ್ರಕರಣದಡಿ ಹರೀಶ್‌ ಅವರನ್ನು ಸೌದಿ ಪೊಲೀಸರು ಬಂಧಿಸಿದ್ದರು. ವಾಸ್ತವವಾಗಿ ಇಬ್ಬರು ಕಿಡಿಗೇಡಿಗಳು ಹರೀಶ್‌ ಹೆಸರಲ್ಲಿ  ನಕಲಿ ಖಾತೆ ಸೃಷ್ಟಿಸಿ ಸಂದೇಶವನ್ನು ಹಾಕಿದ್ದರು. ಪ್ರಕರಣದ ಕೂಲಂಕಷ ತನಿಖೆ ನಡೆಸಿ ನಿಜ ವಿಚಾರವನ್ನು ಬೆಳಕಿಗೆ ತಂದವರು ಉಡುಪಿಯ ಸೆನ್‌ ಪೊಲೀಸರು.

ಈ ಪ್ರಕರಣ ಹೊರ ದೇಶದ್ದಾಗಿದ್ದರಿಂದ ನಕಲಿ ಖಾತೆ ತೆರೆದವರ ಪತ್ತೆ ಮತ್ತಷ್ಟು ಕಷ್ಟಕರವಾಗಿತ್ತು. ಆದರೂ ಪೊಲೀಸರು, ತನಿಖೆ ಕೈಗೆತ್ತಿಕೊಂಡು ನಕಲಿ ಖಾತೆಯ ಯುಆರ್‌ಎಲ್‌ ಲಿಂಕ್‌ ಹುಡುಕಿ, ಐಪಿ ಅಡ್ರೆಸ್‌ ಕಲೆಹಾಕಿ, ಫೇಸ್‌ಬುಕ್‌ಗೆ ಕಳುಹಿಸಿದ್ದರು.

8 ತಿಂಗಳ ಬಳಿಕ ಅಲ್ಲಿಂದ ಬಂದ ಮಾಹಿತಿ ಯಂತೆ ನಕಲಿ ಖಾತೆಯನ್ನು ತೆರೆದ ವರು ಯಾರು, ಯಾವ ಮೊಬೈಲ್‌ನಿಂದ ತೆರೆಯಲಾಗಿತ್ತು,  ಯಾವ ಮೊಬೈಲ್‌ ಟವರ್‌ನಿಂದ ಈ ಪೋಸ್ಟ್‌  ರವಾನೆಯಾಗಿದೆ ಇತ್ಯಾದಿ ಮಾಹಿತಿ  ಪೊಲೀಸರ ಕೈಸೇರಿತು. ಮೊಬೈಲ್‌ ಲೊಕೇಶನ್‌ ಪತ್ತೆ ಮಾಡಿ ಆರೋಪಿಗಳಾದ ಮೂಡುಬಿದಿರೆ ಮೂಲದ ಸಹೋದರರಾದ ಅಬ್ದುಲ್‌ ಹುಯೇಸ್‌ ಮತ್ತು ಅಬ್ದುಲ್‌ ತುವೇಸ್‌ನನ್ನು ಪೊಲೀಸರು ಬಂಧಿಸಿದರು.

ಹತ್ತೇ ತಿಂಗಳಲ್ಲಿ ಆರೋಪ ಪಟ್ಟಿ:

ಸಾಮಾನ್ಯವಾಗಿ ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ ಪ್ರಕ್ರಿಯೆ. ಒಂದೂವರೆ- 2 ವರ್ಷ ಆದದ್ದಿದೆ. ಆದರೆ ಈ ಪ್ರಕರಣದಲ್ಲಿ ಕೇವಲ 10 ತಿಂಗಳಲ್ಲೇ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ, ಚಾರ್ಜ್‌ ಶೀಟ್‌ ಸಲ್ಲಿಸಿದ್ದರು. 2019ರ ಡಿ. 21ರಂದು ಸೌದಿ ಪೊಲೀಸರು ಹರೀಶ್‌ ಅವರನ್ನು ಬಂಧಿಸಿದ್ದು, ಡಿ. 22ಕ್ಕೆ ಸೆನ್‌ ಠಾಣೆಯಲ್ಲಿ ಪತ್ನಿ ಸುಮನಾ ದೂರು ದಾಖಲಿಸಿದ್ದರು. 2020ರ ಸೆ. 8ಕ್ಕೆ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಸವಾಲಿನ ಪ್ರಕರಣ ನಿಭಾಯಿಸುವಲ್ಲಿ ಆಗಿನ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಪಿ. ಜೇಮ್ಸ್‌, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಸೆನ್‌ ಠಾಣಾಧಿಕಾರಿ ಸೀತಾರಾಮ್‌ ಕಾರ್ಯ ಪ್ರವೃತ್ತರಾಗಿದ್ದರು. ಈಗಿನ ಎಸ್ಪಿ ಎನ್‌. ವಿಷ್ಣುವರ್ಧನ್‌ ಮಾರ್ಗದರ್ಶನದಲ್ಲಿ, ಈಗಿನ ಸೆನ್‌ ಠಾಣಾಧಿಕಾರಿ ರಾಮಚಂದ್ರ ನಾಯಕ್‌ ನೇತೃತ್ವದ ತಂಡದ ಪಾತ್ರ ಪ್ರಮುಖವಾಗಿತ್ತು.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.