Kundapura: ಎರಡು ಬೈಕ್ಗಳ ನಡುವೆ ಅಪಘಾತ; ಇಬ್ಬರಿಗೆ ಗಾಯ
Team Udayavani, Aug 6, 2023, 9:49 PM IST
ಕುಂದಾಪುರ: ಇಲ್ಲಿನ ಸಂಗಮ್ ಜಂಕ್ಷನ್ ಬಳಿ ಮೊಹಮ್ಮದ್ ಫಾರೂಕ್ ಅವರ ಬೈಕ್ ಚಿಕ್ಕನ್ಸಾಲ್ ಅಡ್ಡ ರಸ್ತೆಯಿಂದ ಹೆದ್ದಾರಿಗೆ ಹೋದಾಗ, ಕುಂದಾಪುರ ಕಡೆಯಿಂದ ತಲ್ಲೂರು ಕಡೆಗೆ ರಾಜೀವ ಶೆಟ್ಟಿ ಹೋಗುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಿದೆ.
ಪರಿಣಾಮ ರಾಜೀವ ಶೆಟ್ಟಿ ಗಾಯವಾಗಿ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮೊಹಮದ್ ಫಾರೂಕ್ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.