Kundapura ಗೂಡ್ಸ್ ವಾಹನ ಢಿಕ್ಕಿ ; ಗಾಯ
Team Udayavani, Mar 11, 2024, 12:47 AM IST
ಕುಂದಾಪುರ: ಇಲ್ಲಿನ ಸಂತೆ ಮಾರುಕಟ್ಟೆಯ ರಸ್ತೆಯಲ್ಲಿ ಗೂಡ್ಸ್ ಲಾರಿಯಿಂದ ತರಕಾರಿಗಳನ್ನು ಇಳಿಸುತ್ತಿದ್ದ ವಿಜಯ ಕುಮಾರ್ (50) ಕೋಟ ಅವರಿಗೆ ಸಂತೋಷ್ ಅವರು ಚಲಾಯಿಸುತ್ತಿದ್ದ ಗೂಡ್ಸ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಗಾಯ ಗೊಂಡ ಘಟನೆ ಮಾ. 8ರಂದು ರಾತ್ರಿ 10.30ರ ಸುಮಾರಿಗೆ ಸಂಭವಿಸಿದೆ.
ಗಾಯಗೊಂಡ ವಿಜಯ ಕುಮಾರ್ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.