Kundapura; ಬೈಕ್ಗಳೆರಡು ಢಿಕ್ಕಿ : ಸವಾರಗೆ ಗಾಯ
Team Udayavani, Sep 2, 2023, 8:25 PM IST
ಕುಂದಾಪುರ: ಬಸ್ರೂರು ಮೂರುಕೈನ ಅಂಡರ್ಪಾಸ್ ಬಳಿ ಬೈಕ್ಗಳೆರಡು ಢಿಕ್ಕಿಯಾಗಿ ಬೈಕ್ ಸವಾರ ಸದಾನಂದ (54) ಗಾಯಗೊಂಡ ಘಟನೆ ಸೆ. 1ರಂದು ಮಧ್ಯಾಹ್ನ 1.20 ರ ಸುಮಾರಿಗೆ ಸಂಭವಿಸಿದೆ.
ಗಾಯಗೊಂಡ ಸದಾನಂದ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೋಟೇಶ್ವರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತೋರ್ವ ಬೈಕ್ ಸವಾರ ಸುಬ್ರಹ್ಮಣ್ಯ ವಿರುದ್ಧ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.