“ಕಲಾ ರಸಿಕರ ಮನ ತಣಿಸಲು ಮುಂದಾದ ನಾವಡರ ನಡೆ ಅನನ್ಯ’
ತೆಕ್ಕಟ್ಟೆ: ಕಾಳಿಂಗ ನಾವಡರ ಸಂಸ್ಮರಣಾ ಕಾರ್ಯಕ್ರಮ
Team Udayavani, May 27, 2020, 9:50 PM IST
ತೆಕ್ಕಟ್ಟೆ: ಯಕ್ಷ ಮಾಣಿಕ್ಯ ಭಾಗವತ ಕಾಳಿಂಗ ನಾವಡರು ಒಳ್ಳೆಯ ಕವಿ, ಸಹೃದಯರು. ಸ್ವತಃ ಅವರ ತಂದೆ ಸಾವಿನ ಮಂಚದಲ್ಲಿದ್ದಾಗಲೂ ತನ್ನ ಮೇಳದ ಪ್ರದರ್ಶನಕ್ಕೆ ಭಂಗ ಬರಬಾರದೆಂಬ ಕಾಳಜಿಯಿಂದ ನೋವಿ ನಲ್ಲಿಯೂ ಕಲಾ ರಸಿಕರ ಮನ ತಣಿಸಲು ಮುಂದಾದ ನಾವಡರ ನಡೆ ಅನನ್ಯ ಎಂದು ದಿ| ಜಿ.ಆರ್. ಕಾಳಿಂಗ ನಾವಡರ ಜೀವದ ಗೆಳೆಯ ಗಂಪು ಪೈ ಸಾಲಿಗ್ರಾಮ ಅವರು ಹೇಳಿದರು. ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪ ದಲ್ಲಿ ಮೇ 27 ರಂದು ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಇದರ ಆಶ್ರಯದಲ್ಲಿ ಜಿಲ್ಲಾಧಿಕಾರಿ ಹಾಗೂ ಕೋಟ ಪೊಲೀಸ್ ಠಾಣೆಯ ನಿರೀಕ್ಷರ ಅನುಮತಿಯೊಂದಿಗೆ ಆಯೋಜಿಸಿದ 3ನೇ ವರ್ಷದ ಗಾನ ಗಂಧರ್ವ ಕರಾವಳಿಯ ಕೋಗಿಲೆ ಜಿ.ಆರ್. ಕಾಳಿಂಗ ನಾವಡರ ಸಂಸ್ಮರಣಾ ತಾಳಮದ್ದಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹೃದಯ ಶ್ರೀಮಂತಿಕೆ
ಅತೀ ಚಿಕ್ಕ ವಯಸ್ಸಿನಲ್ಲಿ ಕಲೆಯ ಉತ್ತುಂಗ ಶಿಖರವನ್ನೇರಿದರೂ ಒಂದಿಷ್ಟೂ ಅಹಂ ಇಲ್ಲದ ಸರಳ ಸಜ್ಜನಿಕೆಯ ಹೃದಯ ಶ್ರೀಮಂತಿಕೆಯ ಭಾಗವತ ನಾವಡರು. ಕಲೆಯ ಬಗೆಗಿನ ಬದ್ಧತೆ, ಸಹ ಕಲಾವಿದರ ಕುರಿತಾದ ಪ್ರೀತಿ ಅನುಕಂಪ ಮೆಚ್ಚುವಂಥದ್ದು. ಕಲೆಯನ್ನು ಆರಾಧಿಸುವ ಮೂಲಕ ಅಪಾರವಾದ ಪ್ರಸಿದ್ಧಿ, ಯಶಸ್ಸು ಅವರನ್ನು ಹಿಂಬಾಲಿಸಿ ಬಂದಿದೆ ಹೊರತು, ಅವರು ಎಂದೂ ಕೀರ್ತಿ ಮೆಚ್ಚುಗೆಯನ್ನು ಅರಸಿ ಹೊರಟವರಲ್ಲ ಎಂದು ಅವರು ಹೇಳಿದರು.
ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಇದರ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗ, ಯಕ್ಷ ಪ್ರಾಚಾರ್ಯ ಕೆ.ಪಿ. ಹೆಗಡೆ, ಗುರು ಕೊçಕೂರು ಸೀತಾರಾಮ ಶೆಟ್ಟಿ, ಕೋಟ ಸುದರ್ಶನ ಉರಾಳ, ಕಾರ್ಯದರ್ಶಿ ವೆಂಕಟೇಶ ವೈದ್ಯ ಕೊಮೆ ಪುಷ್ಪನಮನ ಸಲ್ಲಿಸಿದರು.
ಭಾಗವತ ಲಂಬೋದರ ಹೆಗಡೆ ಸ್ವಾಗತಿಸಿ, ಉಪನ್ಯಾಸಕ ಸುಜಯೀಂದ್ರ ಹಂದೆ ನಿರೂಪಿಸಿ, ಪ್ರಶಾಂತ ಮಲ್ಯಾಡಿ ವಂದಿಸಿದರು. ಬಳಿಕ ಪ್ರಾಚಾರ್ಯ ಕೆ.ಪಿ. ಹೆಗಡೆ, ನಿಟ್ಟೂರು ಲಂಬೋದರ ಹೆಗಡೆ, ಎನ್.ಜಿ. ಹೆಗಡೆ, ಸುದೀಪ ಉರಾಳ ಹಿಮ್ಮೇಳದಲ್ಲಿ ಮಲ್ಪೆ ವಾಸುದೇವ ಸಾಮಗ, ವಾಸುದೇವ ರಂಗ ಭಟ್, ಹಳ್ಳಾಡಿ ಜಯರಾಮ ಶೆಟ್ಟಿ, ಸುಜಯೀಂದ್ರ ಹಂದೆ, ಪ್ರದೀಪ ವಿ. ಸಾಮಗ ಇವರ ಮುಮ್ಮೇಳದಲ್ಲಿ “ಭೀಷ್ಮ ವಿಜಯ’ ತಾಳಮದ್ದಳೆಯ ಸಾಮಾಜಿಕ ಜಾಲತಾಣ ಮೂಲಕ ನೇರ ಪ್ರಸಾರದ ಕಾರ್ಯಕ್ರಮ ಸಂಪನ್ನಗೊಂಡಿತು.
ಕಲಾವಿದರನ್ನು ಸಮ್ಮಾನಿಸುವ ಸಂಕಲ್ಪ
“ಮೇ 27 ಯಕ್ಷಗಾನದ ಕಲಾ ಸಹೃದಯರು ಪ್ರತೀ ವರ್ಷ ಕಾಳಿಂಗ ನಾವಡರನ್ನು ನೆನಪಿಸಿಕೊಳ್ಳಲೇ ಬೇಕಾದ ಪುಣ್ಯದ ದಿವಸ. ರಸ್ತೆ ಅಪಘಾತದಲ್ಲಿ ಆಕಸ್ಮಿಕ ಮರಣಕ್ಕೆ ತುತ್ತಾದ ಕಾಳಿಂಗ ನಾವಡರು ಈಗಲೂ ನಮ್ಮ ಮೈ-ಮನಗಳಲ್ಲಿ ತುಂಬಿಕೊಂಡಿದ್ದಾರೆ. ಸರಕಾರ, ನಾವಡರ ಅಭಿಮಾನಿಗಳು ಪ್ರತೀ ವರ್ಷ ನಾವಡರ ಹೆಸರಿನಲ್ಲಿ ಸುಮಾರು ಒಂದು ಲಕ್ಷ ರೂ. ಮೊತ್ತವನ್ನು ನೀಡಿ ಶ್ರೇಷ್ಠ ಕಲಾವಿದನೊಬ್ಬನನ್ನು ಗುರುತಿಸಿ ಸಮ್ಮಾನಿಸುವ ಸಂಕಲ್ಪ ಮಾಡಲಿ’ ಎಂದು ಗಂಪು ಪೈ ಸಾಲಿಗ್ರಾಮ ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Theft; 13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ