ಕೋವಿಡ್ ನಿಂದ ಚೌತಿ ಕಳಾಹೀನ: ಹಬ್ಬಕ್ಕೆಂದು ಬೆಳೆದ ಕಬ್ಬಿಗಿಲ್ಲ ಬೇಡಿಕೆ

ದರವೂ ಕಡಿಮೆ; ಕೆಲಸಕ್ಕೆ ಹೊರ ರಾಜ್ಯದ ಕಾರ್ಮಿಕರೂ ಇಲ್ಲ

Team Udayavani, Aug 21, 2020, 6:00 AM IST

ಕೋವಿಡ್ ನಿಂದ ಚೌತಿ ಕಳಾಹೀನ: ಹಬ್ಬಕ್ಕೆಂದು ಬೆಳೆದ ಕಬ್ಬಿಗಿಲ್ಲ ಬೇಡಿಕೆ

ಚೌತಿ ಹಬ್ಬಕ್ಕೆಂದು ಕಬ್ಬಿನ ಕಟಾವಿನಲ್ಲಿ ತೊಡಗಿರುವ ಶೀನಪ್ಪ ಪೂಜಾರಿ.

ಕುಂದಾಪುರ: ಚೌತಿ ಹಬ್ಬದಲ್ಲಿ ಕಬ್ಬಿಗೆ ವಿಶೇಷ ಪ್ರಾಶಸ್ತ್ಯ. ಹೆಮ್ಮಾಡಿ ಗ್ರಾಮದ ಸಂತೋಷ ನಗರ ಸಮೀಪದ ಬುಗುರಿಕಡು ಎನ್ನುವ ಊರಲ್ಲಿ ಗೌರಿ ಹಬ್ಬ, ಚೌತಿ, ನವರಾತ್ರಿ, ತುಳಸಿ ಹಬ್ಬಕ್ಕೆಂದೇ ಕಬ್ಬು ಬೆಳೆಯುತ್ತಾರೆ. ಆದರೆ ಕೊರೊನಾದಿಂದಾಗಿ ಚೌತಿ ಆಚರಣೆ ಈ ಬಾರಿ ಕಳೆಗುಂದಿರುವುದರಿಂದ ಕಬ್ಬಿಗೂ ಬೇಡಿಕೆ ಇಲ್ಲದಾಗಿದ್ದು ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ.

ಬುಗುರಿಕಡುವಿನಲ್ಲಿ ಹಿಂದೆ ಅನೇಕರು ಹಬ್ಬಕ್ಕೆಂದು ಗದ್ದೆಗಳಲ್ಲಿ ಕಬ್ಬು ಬೆಳೆಯುತ್ತಿದ್ದರು. ಆದರೆ ಈಗ ಅಷ್ಟೊಂದು ಲಾಭದಾಯಕ ಅಲ್ಲವಾಗಿರುವುದರಿಂದ, ನೀರಿನ ಸಮಸ್ಯೆಯೂ ಇರುವುದರಿಂದ ಬುಗುರಿ ಕಡುವಿನಲ್ಲಿ ಶೀನಪ್ಪ ಪೂಜಾರಿ ಹಾಗೂ ಗೋಪಾಲ ಮೊಗವೀರ ಮಾತ್ರ ಕಬ್ಬು ಬೆಳೆಯುತ್ತಿದ್ದಾರೆ. ಬೆಳೆದ ಕಬ್ಬನ್ನು ಕುಂದಾಪುರ, ಗಂಗೊಳ್ಳಿ, ಮರವಂತೆ ಮತ್ತಿತರ ಭಾಗಗಳ ಅನೇಕ ಕಡೆಗಳಲ್ಲಿ ನಡೆಯುವ ಗಣೇಶೋತ್ಸವಕ್ಕೆ ಕೊಂಡೊಯ್ಯುತ್ತಾರೆ.

ಬೇಡಿಕೆ ಕುಂಠಿತ
ಪ್ರತಿ ವರ್ಷ ಒಂದು ಎಕರೆ ಗದ್ದೆಯಲ್ಲಿ ಕಬ್ಬು ಬೆಳೆಯುತ್ತಿದ್ದು, ಚೌತಿಗೆ 1,500 ಕಬ್ಬಿನ ಜೊಲ್ಲೆ ಕೊಡುತ್ತಿದ್ದರು. ಆದರೆ ಈ ಬಾರಿ ಈವರೆಗೆ ಕೇವಲ 700 – 800ರ ವರೆಗೆ ಮಾತ್ರ ಬೇಡಿಕೆ ಬಂದಿದೆ. 1 ಕಬ್ಬಿನ ಜೊಲ್ಲೆಯನ್ನು ಕಳೆದ ವರ್ಷ 30 ರೂ.ನಲ್ಲಿ ನಾವು ಕೊಡುತ್ತಿದ್ದರೆ, ಈ ಬಾರಿ 25 ರೂ. ದರದಲ್ಲಿ ಕೊಡುತ್ತಿದ್ದೇವೆ. ಇನ್ನು ಕಬ್ಬು ಕಟಾವು ಮತ್ತಿತರ ಕೆಲಸಗಳಿಗಾಗಿ ಕಬ್ಬಿನ ಜೊಲ್ಲೆ ಕಟಾವಿಗೆ ಹೊರ ರಾಜ್ಯದ ಕಾರ್ಮಿಕರೇ ಹೆಚ್ಚಾಗಿ ಬರುತ್ತಿದ್ದರು. ಈ ಬಾರಿ ಕೊರೊನಾದಿಂದಾಗಿ ತಮ್ಮ ತಮ್ಮ ಊರಿಗೆ ತೆರಳಿದವರು ವಾಪಸು ಬರಲಿಲ್ಲ ಎನ್ನುತ್ತಾರೆ ಶೀನಪ್ಪ ಪೂಜಾರಿ.
ಸಾಮಾನ್ಯವಾಗಿ ಕಬ್ಬು ಬೆಳೆಯಲು ಆರಂಭಿಸುವುದು ಫೆಬ್ರವರಿಯಲ್ಲಿ. ಆಗಸ್ಟ್‌ನಿಂದ ಕಬ್ಬು ಕಟಾವು ಆರಂಭ. ಆದರೆ ಕೊರೊನಾ ತೊಂದರೆ ಕೊಡಬಹುದು ಎನ್ನುವ ಅರಿವಿಲ್ಲದೆ ಪ್ರತಿ ವರ್ಷದಷ್ಟೇ ಕಬ್ಬು ಬೆಳೆದಿದ್ದಾರೆ.

ಅರ್ಧಕ್ಕರ್ಧ ಕಡಿಮೆ
ಈ ಬಾರಿ ಕೊರೊನಾದಿಂದಾಗಿ ಕಬ್ಬಿಗೆ ಅರ್ಧಕ್ಕರ್ಧ ಬೇಡಿಕೆ ಕಡಿಮೆಯಾಗಿದೆ. ಬೆಲೆಯೂ ಕಡಿಮೆ. ನಾವೂ ಸ್ವಲ್ಪ ಮಟ್ಟಿಗೆ ಕಡಿಮೆ ಬೆಲೆಯಲ್ಲಿಯೇ ಕೊಡುತ್ತಿದ್ದೇವೆ. ಹೊರ ರಾಜ್ಯದ ಕಾರ್ಮಿಕರಿಲ್ಲ ದಿರುವುದರಿಂದ ಕೆಲಸಕ್ಕೂ ಜನ ಕೊರತೆಯಾಗಿದ್ದು, ನಮ್ಮ ಮನೆಯವರೇ ಸೇರಿ ಮಾಡುತ್ತಿದ್ದೇವೆ.
– ಶೀನಪ್ಪ ಪೂಜಾರಿ, ಕಬ್ಬು ಬೆಳೆಗಾರರು

ನೀರಿನ ಸಮಸ್ಯೆ
ಮೊದಲ 3-4 ತಿಂಗಳು ಕಬ್ಬು ಬೆಳೆಗೆ ಹೆಚ್ಚು ನೀರು ಬೇಕಾಗುತ್ತದೆ. ಆದರೆ ಇಲ್ಲಿ ಮಾರ್ಚ್‌, ಎಪ್ರಿಲ್‌, ಮೇ ಯಲ್ಲಿ ನೀರಿನ ಅಭಾವ ಹೆಚ್ಚಿರುವುದರಿಂದ ಕಷ್ಟವಾಗುತ್ತದೆ. ನಾವು ಬೇರೆ ಕಡೆಯಿಂದ ದುಡ್ಡು ಕೊಟ್ಟು ನೀರು ತಂದು ಹಾಕುತ್ತಿದ್ದೇವೆ. ನೀರಿನ ಅಭಾವ ಹಾಗೂ ಕೊರೊನಾ ಕಾರಣದಿಂದ ಈ ಬಾರಿ ಹೆಚ್ಚಿನ ಕಬ್ಬು ಬೆಳೆದಿಲ್ಲ.
– ಗೋಪಾಲ ಮೊಗವೀರ ಬುಗುರಿಕಡು, ಕಬ್ಬು ಬೆಳೆಗಾರರು

ಟಾಪ್ ನ್ಯೂಸ್

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?

dandeli

Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

3-dandeli

Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

State Government School; ದಸರಾ ರಜೆ ಕ್ರಿಸ್ಮಸ್‌ಗೆ ಹೊಂದಿಸಲು ಅವಕಾಶ

State Government School; ದಸರಾ ರಜೆ ಕ್ರಿಸ್ಮಸ್‌ಗೆ ಹೊಂದಿಸಲು ಅವಕಾಶ

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?

dandeli

Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

3-dandeli

Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.