![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
ಗೋಪಾಡಿ-ಮೂಡುಗೋಪಾಡಿ ರಸ್ತೆಯಲ್ಲಿ ಸ್ಫೋಟದ ಸದ್ದು?
Team Udayavani, Jul 9, 2018, 11:18 AM IST
![blast.png](https://www.udayavani.com/wp-content/uploads/2018/07/9/blast.png)
ಕೋಟೇಶ್ವರ: ಗೋಪಾಡಿಯ ತಿರುವಿನಿಂದ ಮೂಡುಗೋಪಾಡಿ ಹಾಗೂ ಹೂವಿನಕೆರೆ ರಸ್ತೆಯ ಬಳಿ ಶುಕ್ರವಾರ ಮಧ್ಯರಾತ್ರಿಯ ಅನಂತರ ಭಾರೀ ಸರಣಿ ಸ್ಫೋಟದ ಸದ್ದು ಆ ಭಾಗದ ನಿವಾಸಿಗಳಿಗೆ ಕೇಳಿ ಬಂದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಹೆದ್ದಾರಿ 66ರ ಮಾರ್ಗ ವಾಗಿ ಗೋಪಾಡಿಯಿಂದ ವಕ್ವಾಡಿ ಹಾಗೂ ಮೂಡುಗೋಪಾಡಿಗೆ ಸಾಗುವ ಮುಖ್ಯ ರಸ್ತೆಯ ಮೂರು ಕಡೆಗಳಲ್ಲಿ ಈ ಸ್ಫೋಟದ ಸದ್ದು ಕೇಳಿ ಬಂದಿರುವುದಾಗಿ ಅಲ್ಲಿನ ನಿವಾಸಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ. ಸ್ಫೋಟ ಸದ್ದು ಕೇಳಿಬಂದ ಅನಂತರ ಎಚ್ಚೆತ್ತ ನಿವಾಸಿಗಳು ಭಯಭೀತ ರಾಗಿ ದೂರವಾಣಿಯ ಮೂಲಕ ಆಸುಪಾಸಿನವರೊಡನೆ ಅನುಭವವನ್ನು ಹಂಚಿಕೊಂಡಿದ್ದರು.
ಏನಿದು ಸದ್ದು?: ಶುಕ್ರವಾರ ರಾತ್ರಿ ಭಾರೀ ಗಾಳಿ ಮಳೆ ಇದ್ದರೂ ಪ್ರಕೃತಿಯ ವಿಕೋಪದ ಯಾವುದೇ ಹಾನಿಕರ ಘಟನೆ ವರದಿಯಾಗಿಲ್ಲ. ಹಾಗಿದ್ದಲ್ಲಿ ಈ ಸ್ಫೋಟ ಸದ್ದಿನ ಮೂಲವೇನು ಎನ್ನುವುದು ಪ್ರಶ್ನಾರ್ಥಕವಾಗಿ ಉಳಿದಿದೆ. ಇದು ಸಾರ್ವ ಜನಿಕರನ್ನು ಭಯಭೀತಿ ಗೊಳಿಸುವ ಹುನ್ನಾರವೇ ಅಥವಾ ಮೋಜಿನ ಯುವಕರ ಕುಕೃತ್ಯವೇ ಎನ್ನುವ ಸಂದೇಹವೂ ವ್ಯಕ್ತವಾಗಿದೆ. ಗೋಪಾಡಿ ಮೂಡು ಗೋಪಾಡಿ, ವಕ್ವಾಡಿ ಪರಿಸರದಲ್ಲಿ ಕಳ್ಳರ ಹಾವಳಿಯ ದೂರು ಕೇಳಿ ಬರುತ್ತಿದ್ದು, ಕಳ್ಳರ ಹಾವಳಿ ಸಹಿತ ಸ್ಫೋಟ ಸದ್ದಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.