ಮಂಗಳೂರು: ಮಾಜಿ ಕಾರ್ಪೊರೇಟರ್ ಮಧುಕಿರಣ್ ನಿಧನ
Team Udayavani, Oct 6, 2019, 12:19 PM IST
ಮಂಗಳೂರು: ಮಂಗಳೂರು ಪಾಲಿಕೆಯ ಮಾಜಿ ಕಾರ್ಪೊರೇಟರ್ ಮಧುಕಿರಣ್ ಅಲ್ಪ ಕಾಲದ ಅಸೌಖ್ಯದಿಂದಾಗಿ ರವಿವಾರ ಮುಂಜಾನೆ ನಿಧನ ಹೊಂದಿದ್ದಾರೆ.
ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದ ಇವರು, ಕೆಲವು ದಿನಗಳ ಅಸೌಖ್ಯದ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅಂತಿಮ ದರ್ಶನ ಇಂದು ಸಂಜೆ 4 ಗಂಟೆಗೆ ಕಾವೂರು ಗಾಂಧಿನಗರದ ಸ್ವಗೃಹದಲ್ಲಿ ನಡೆಯಲಿದೆ.