44.12 ಮಿಲಿಯನ್ ಟನ್ ಸರಕು ಸಾಗಣೆ
ಕಳೆದ ವರ್ಷಕ್ಕಿಂತ ಶೇ.15.5 ಹೆಚ್ಚಿನ ಸರಕು ಸಾಗಾಟ
Team Udayavani, Apr 2, 2022, 11:23 AM IST
ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ 2021-22ರ ಹಣಕಾಸು ವರ್ಷದಲ್ಲಿ 44.12 ಮಿಲಿಯನ್ ಟನ್ ಸರಕು ಸಾಗಣೆ ಮಾಡುವ ಮೂಲಕ ಕಳೆದ ಹಣಕಾಸು ವರ್ಷಕ್ಕಿಂತ ಶೇ. 15.5 ಹೆಚ್ಚಳ ದಾಖಲಿಸಿದೆ ಎಂದು ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಹೇಳಿದರು.
ನೈಋತ್ಯ ರೈಲ್ವೆ ಪ್ರಧಾನ ಕಚೇರಿಯಲ್ಲಿ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗಗಳ ಇಲಾಖೆಗಳ ಪ್ರಧಾನ ಮುಖ್ಯಸ್ಥರು ಮತ್ತು ವಿಭಾಗೀಯ ರೈಲ್ವೆ ವ್ಯವಸ್ಥಾಪಕರೊಂದಿಗೆ ಶುಕ್ರವಾರ ಸಭೆ ನಡೆಸಿ ಮಾತನಾಡಿದ ಅವರು, ಲೋಡ್ ಮಾಡಲಾದ ಸರಕುಗಳಲ್ಲಿ 17.04 ಮಿಲಿಯನ್ ಟನ್ ಕಬ್ಬಿಣದ ಅದಿರು, 9.13 ಮಿಲಿಯನ್ ಟನ್ ಕಲ್ಲಿದ್ದಲು, 9.05 ಮಿಲಿಯನ್ ಟನ್ ಪಿಗ್ ಐರನ್ ಮತ್ತು ಫಿನಿಶ್ಡ್ ಸ್ಟೀಲ್, 0.77 ಮಿಲಿಯನ್ ಟನ್ ಆಹಾರ ಧಾನ್ಯಗಳು, 0.98 ಮಿಲಿಯನ್ ಟನ್ ಸಿಮೆಂಟ್ ಇತ್ಯಾದಿ ಆಗಿದೆ. 2021-22ರಲ್ಲಿ ಸರಕು ಆದಾಯವು 4,160 ಕೋಟಿ ರೂ. ಆಗಿದ್ದು, ಇದು 2020-21ರ ಹಣಕಾಸು ವರ್ಷಕ್ಕಿಂತ ಶೇ.28.72 ಹೆಚ್ಚು. 2021-22ರಲ್ಲಿ ಪಾರ್ಸೆಲ್ ಆದಾಯವು 121.56 ಕೋಟಿ ರೂ. ಗಳಾಗಿದೆ. 2021-22ರ ಹಣಕಾಸು ವರ್ಷದಲ್ಲಿ 238 ಆಟೋಮೊಬೈಲ್ ರೇಕ್ಗಳನ್ನು ಲೋಡ್ ಮಾಡಿದೆ. ವಿವಿಧ ಬಗೆಯ ಗಳಿಕೆಯು ಶೇ.71.52 ಹೆಚ್ಚಳದೊಂದಿಗೆ 275.7 ಕೋಟಿ ರೂ. ಆಗಿದೆ. ನೈಋತ್ಯ ರೈಲ್ವೆಯು 138.04 ಕೋಟಿ ರೂ. ಮೌಲ್ಯದ ಸ್ಕ್ರ್ಯಾಪ್ ಮಾರಾಟ ಮಾಡಿದೆ ಮತ್ತು ರೈಲ್ವೆ ಮಂಡಳಿಯು ನಿಗದಿಪಡಿಸಿದ ಗುರಿ ಮೀರಿದೆ ಎಂದರು.
ನೈಋತ್ಯ ರೈಲ್ವೆಯು 2021-22ರಲ್ಲಿ 187 ಕಿಮೀ ಡಬ್ಲಿಂಗ್ ಮತ್ತು 22 ಕಿಮೀ ಹೊಸ ಮಾರ್ಗಗಳು ಮತ್ತು 511.7 ರೂಟ್ ಕಿಮೀ ವಿದ್ಯುದೀಕರಣ ಪೂರ್ಣಗೊಳಿಸಿದೆ. 26 ರೈಲುಗಳನ್ನು ಎಲೆಕ್ಟ್ರಿಕ್ ಟ್ರಾಕ್ಷನ್ದಲ್ಲಿ ಚಲಿಸುವಂತೆ ಪರಿವರ್ತಿಸಿದೆ. ಡೀಸೆಲ್ ಬಳಕೆ ಕಡಿಮೆ ಮಾಡುವ ಎಚ್ಒಜಿ ಪವರ್ ಕಾರ್ ಗಳ 40 ರೈಲುಗಳನ್ನು ಓಡಿಸುತ್ತಿದೆ. ಹಸಿರು ಉಪಕ್ರಮವಾಗಿ ವಲಯವು ತನ್ನ ವ್ಯಾಪ್ತಿಯಾದ್ಯಂತ 70 ಸಾವಿರ ಮರಗಳನ್ನು ಬೆಳೆಸಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು