2.65 ಲಕ್ಷ ರೂ. ಮೌಲ್ಯದ ಸಾಮಗ್ರಿ ಕಳ್ಳತನ; ಮೂವರ ಸೆರೆ
Team Udayavani, Apr 21, 2022, 11:14 AM IST
ಹುಬ್ಬಳ್ಳಿ: ಅಮರಾವತಿ ಕಾಲೋನಿ ರೈಲ್ವೆ ನಿಲ್ದಾಣದಲ್ಲಿ ಉತ್ತರ ಗೂಮ್ಟಿ ರೀಲೆ ಕೋಣೆಯ ಮುಖ್ಯ ಬಾಗಿಲು ಮುರಿದು ರಿಲೇಗಳು, ಸಿಸಿಟಿವಿ ಕ್ಯಾಮರಾ ಸೇರಿದಂತೆ ಅಂದಾಜು 2,65,880ರೂ. ಮೌಲ್ಯದ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಹಾಗೂ ಖರೀದಿಸಿದ್ದ ಓರ್ವನನ್ನು ದಾವಣಗೆರೆಯ ರೈಲ್ವೆ ಸುರಕ್ಷಾ ದಳ ಸಿಬ್ಬಂದಿ ಸಾಮಗ್ರಿಗಳೊಂದಿಗೆ ಬಂಧಿಸಿದ್ದಾರೆ.
ದಾವಣಗೆರೆ ನಿವಾಸಿಗಳಾದ ರೆಹಾನ ಎ., ಮೊಹಮ್ಮದ ಅಲ್ತಾಫ ಎ. ಹಾಗೂ ಗುಜರಿ ಅಂಗಡಿ ಮಾಲಿಕ ಮುಬಾರಖ ಬಿ. ಬಂಧಿತರಾದವರು.
ಶುಕ್ರವಾರ ರಾತ್ರಿ ರೆಹಾನ ಮತ್ತು ಮೊಹಮ್ಮದ ಗೂಮ್ಟಿ ರಿಲೇ ಕೋಣೆಯಲ್ಲಿ 33 ರಿಲೇಗಳು, 4 ಸಿಸಿಟಿವಿ ಕ್ಯಾಮೆರಾಗಳು, ಒಂದು ಸ್ವಿಚ್ ಬೋರ್ಡ್, ಎರಡು ಎಸ್ ಆ್ಯಂಡ್ ಟಿ ಸಾಮಗ್ರಿ, ನವ್ತಾಲ್ ಬೀಗಗಳನ್ನು ಕಳ್ಳತನ ಮಾಡಿದ್ದರು. ಇದರಿಂದ ರೂಟ್ ರಿಲೇ ಇಂಟರ್ಲಾಕಿಂಗ್ ಸಿಸ್ಟಮ್ ಪ್ಯಾನೆಲ್ ಮೇಲೆ ಪರಿಣಾಮವಾಗಿತ್ತು. ದಾವಣಗೆರೆಯ ಆರ್ಪಿಎಫ್ ಸಬ್ ಇನ್ಸ್ ಪೆಕ್ಟರ್, ಕಾನಸ್ಟೇಬಲ್ ಮತ್ತು ಸಿಗ್ನಲ್ ಆ್ಯಂಡ್ ಟೆಲಿಕಮ್ಯುನಿಕೇಷನ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು, ಒಂದು ವಿಶೇಷ ತಂಡ ರಚಿಸಿ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳ ಆಧಾರ ಮೇಲೆ ವಿಚಾರಣೆ ನಡೆಸಿದ್ದರು.
ಖಚಿತ ಮಾಹಿತಿ ಮೇರೆಗೆ ಆರ್ಪಿಎಫ್ ತಂಡವು ಗೂಡ್ಸ್ ಶೆಡ್ ಪ್ರದೇಶದಲ್ಲಿ ಬೈಕ್ನಲ್ಲಿ ಕಳ್ಳತನದ ಸಾಮಗ್ರಿಗಳೊಂದಿಗೆ ತೆರಳುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ಅವರಿಂದ ಕಳುವು ಮಾಡಿದ್ದ ರೈಲ್ವೆಯ 15 ರಿಲೇಗಳನ್ನು ವಾಹನ ಸಮೇತ ವಶಪಡಿಸಿಕೊಂಡು ವಿಚಾರಿಸಿದಾಗ, ದಾವಣಗೆರೆ ಬೇತೂರು ಲಿಂಕ್ ರಸ್ತೆ, ಮಂಡಕ್ಕಿಬಟ್ಟಿ, ಡಬಲ್ ರೋಡ್ದ ಗುಜರಿ ಅಂಗಡಿಗೆ ಕಳ್ಳತನ ಮಾಡಿರುವ 18ರಿಲೇ ಬಾಕ್ಸ್, 4 ಸಿಸಿಟಿವಿ ಕ್ಯಾಮೆರಾಗಳು, ಒಂದು ಸ್ವಿಚ್ ಮೋಡೆಮ್ ಮತ್ತು ಎರಡು ನವಾ¤ಲ್ ಲಾಕ್ಗಳನ್ನು 1400 ರೂ.ಗೆ ಮಾರಾಟ ಮಾಡಿದ್ದಾಗಿ ಒಪ್ಪಿದ್ದರು. ಗುಜರಿ ಅಂಗಡಿಯ ಮಾಲೀಕನ ಸ್ವಾಧೀನದಲ್ಲಿದ್ದ ರೈಲ್ವೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
MUST WATCH
ಹೊಸ ಸೇರ್ಪಡೆ
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ