ಬಿಸಿಲ ತಾಪ ತಾಳದೆ ಬಾಯಾರಿದ ಜನ-ಜಾನುವಾರು

ಮಾರ್ಚ್‌ ಆರಂಭದಲ್ಲೇ 38 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ

Team Udayavani, Mar 4, 2021, 5:18 PM IST

Heat

ವಾಡಿ: ಭೀಕರ ಭೀಮಾ ಮತ್ತು ಕಾಗಿಣಾ ನದಿಗಳ ಮಹಾ ಪ್ರವಾಹದಿಂದ ತತ್ತರಿಸಿದ್ದ ಸಿಮೆಂಟ್‌ ನಾಡಿನಲ್ಲೀಗ ರಣಬಿಸಿಲಿನ ಆರ್ಭಟ ಆರಂಭವಾಗಿದ್ದು, ಬಿಸಿಲ ತಾಪ ತಾಳಲಾಗದೆ ಜನರು ತಂಪು ನೀರಿನ ಮೊರೆ ಹೋಗುತ್ತಿದ್ದಾರೆ. ಗಾಳಿ-ನೆರಳಿಗಾಗಿ ಪರಿತಪಿಸುತ್ತ ಬಿಸಿಯುಸಿರು ಹೊರಹಾಕುತ್ತಿದ್ದಾರೆ.

ಸಿಮೆಂಟ್‌ ಕಾರ್ಖಾನೆಗಳಿರುವ ಕಾರಣಕ್ಕೆ ನೂರಾರು ಕಲ್ಲು ಗಣಿಗಳನ್ನು ಹೊಂದಿರುವ ಕಲಬುರಗಿ ಉದರದಲ್ಲೀಗ ಬಿಸಿಲ ಬೆಂಕಿಯ ಉಗ ಹಾರುತ್ತಿದೆ. ವಾಡಿ, ಚಿತ್ತಾಪುರ, ಶಹಾಬಾದ ನಗರ ಪ್ರದೇಶಗಳ ವ್ಯಾಪ್ತಿಯ ನೆಲದಲ್ಲಿ ಪದರುಗಲ್ಲಿನ ಹಾಸಿಗೆ ಹರಡಿಕೊಂಡಿದ್ದು, ಬಿಸಿಲ ತಾಪ ಏರಿಕೆಯಾಗಲು ಪ್ರಮುಖ ಕಾರಣ ಎನ್ನಬಹುದು. ಮಾರ್ಚ್‌ ಆರಂಭದಲ್ಲೇ 38 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ಏಪ್ರಿಲ್‌ ಮತ್ತು ಮೇ ತಿಂಗಳ ಬಿಸಿಲ ಭೀಕರತೆ ಹೇಗಿರಬಹುದು ಎನ್ನುವುದನ್ನು ಮನಗಾಣಬಹುದಾಗಿದೆ.

ನದಿ ದಂಡೆ ಊರುಗಳು ಮುಳುಗಡೆ ಆಗುವಷ್ಟು ಜಲಾಕ್ರೋಶ ಭುಗಿಲೆದ್ದ ಪರಿಸರದಲ್ಲೀಗ ಬಿಸಿಲು ಕೆಂಡ ಕಾರುತ್ತಿದೆ. ಬಾಯಾರಿಕೆ ನೀಗಿಸಿಕೊಳ್ಳಲು ಉಳ್ಳವರು ಫ್ರಿಡ್ಜ್ ನೀರಿನ ಮೊರೆ ಹೋಗುತ್ತಿದ್ದರೆ, ಬಡವರ ಮನೆಗಳಲ್ಲಿ ಗೋಣಿ ಚೀಲ ಮತ್ತು ಬಳಕೆಯಾಗದ ಬಟ್ಟೆಗಳಿಂದ ಬಿಗಿದ ಪ್ಲಾಸ್ಟಿಕ್‌ ಕೊಡ, ಸ್ಟೀಲ್‌ ಪಾತ್ರೆ ಹಾಗೂ ಮಣ್ಣಿನ ಮಡಿಕೆಗಳು ನೀರು ತಂಪಾಗಿಸುವ ಫ್ರಿಡ್ಜ್ ಗಳಾಗಿ ಬಳಕೆಯಾಗುತ್ತಿವೆ. ಒಟ್ಟಾರೆ ಬಿಸಿಲಬೇಗೆ ದೇಹದ ಬೆವರಿಳಿಸಲು ಮುಂದಾದರೆ, ಮನೆಯ ಮಡಿಕೆಗಳಿಂದ ತಂಪಾಗುತ್ತಿರುವ ನೀರು ಬಡವರ ಒಡಲು ತಣ್ಣಗಾಗಿಸುತ್ತಿದೆ.

ಬಿಸಿಲು ಹೆಚ್ಚಾಗುತ್ತಿದ್ದಂತೆ ಬಿಸಿಗಾಳಿ ಬೀಸುತ್ತಿದೆ. ಈ ಬಾರಿ ಮಳೆ ಹೆಚ್ಚಾಗಿದ್ದರಿಂದ ಬೇಸಿಗೆ ತಾಪಮಾನ ಭಯಂಕರವಾಗಿರುವ ಮುನ್ಸೂಚನೆ ನೀಡಿದೆ. ಈಗಲೇ
ಬೆಳಗ್ಗೆ 8 ಗಂಟೆಗೆ ಪ್ರಖರವಾದ ಬಿಸಿಲು ಬಂದಿರುತ್ತದೆ. ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಅಧಿಕಾರಿಗಳು ಮುಂದಾಗಬೇಕು. ಕೆಂಡ ಕಾರುತ್ತಿರುವ ಕಾಂಕ್ರಿಟ್‌ ರಸ್ತೆಗಳಿಗೆ ನೀರು ಸಿಂಪರಣೆ ಮಾಡಲು ಪುರಸಭೆ ಆಡಳಿತ ಮುಂದಾಗಬೇಕು. ವ್ಯವಹಾರ, ಆಸ್ಪತ್ರೆ, ಸರಕಾರಿ ಕಚೇರಿಗಳಿಗೆಂದು ನಗರಕ್ಕೆ ಬರುವ ಸಾರ್ವಜನಿಕರಿಗೆ ಪ್ರಮುಖ ವೃತ್ತಗಳಲ್ಲಿ ಕುಡಿಯುವ ತಂಪು ನೀರಿನ ವ್ಯವಸ್ಥೆ ಮಾಡಲು ಪುರಸಭೆ ಕ್ರಮ ಕೈಗೊಳ್ಳಬೇಕು.
ವಿ.ಕೆ. ಕೆದಿಲಾಯ, ನಗರದ ಹಿರಿಯ ನಾಗರಿಕ

*ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.