ಟೆಂಗಳಿ ರಸ್ತೆ ನಿರ್ಮಿಸಲು ಆಗ್ರಹಿಸಿ ಪ್ರತಿಭಟನೆ
Team Udayavani, Jul 8, 2022, 3:10 PM IST
ಕಾಳಗಿ: ತಾಲೂಕಿನ ಟೆಂಗಳಿ ಗ್ರಾಮದಿಂದ ಟೆಂಗಳಿ ಕ್ರಾಸ್ ವರೆಗೆ ಸಂಪೂರ್ಣ ಹದಗೆಟ್ಟಿರುವ ರಸ್ತೆ ಕಾಮಗಾರಿಯನ್ನು ಶೀಘ್ರವೇ ಆರಂಭಿಸಬೇಕು ಎಂದು ತಾಲೂಕು ಕರವೇ(ಟಿ.ಎ ನಾರಾಯಣಗೌಡ್ರು ಬಣ) ಕಾರ್ಯಕರ್ತರು ಟೆಂಗಳಿ ಕ್ರಾಸ್ ರಸ್ತೆ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ತಾಲೂಕು ಕರವೇ ಅಧ್ಯಕ್ಷ ಜಾವೀದಮಿಯ್ಯ ಆಫಖಾನ್ ಮಾತನಾಡಿ, ಚಿಂಚೋಳಿ ಹಾಗೂ ಚಿತ್ತಾಪುರ ಮತಕ್ಷೇತ್ರದ ಗಡಿಭಾಗ ಹೊಂದಿರುವ ಟೆಂಗಳಿ ಗ್ರಾಮದಿಂದ ಟೆಂಗಳಿ ಕ್ರಾಸ್ ವರೆಗಿನ ರಸ್ತೆ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿದೆ. ಈ ರಸ್ತೆ ಕೆಟ್ಟು ಸುಮಾರು ಎಂಟು ವರ್ಷಗಳೇ ಕಳೆದಿವೆ. ಈ ಕುರಿತು ಅನೇಕ ಬಾರಿ ಶಾಸಕರು, ಸಂಸದರು, ಸಂಬಂಧಿಸಿದ ಅಕಾರಿಗಳ ಗಮನಕ್ಕೂ ತರಲಾಗಿದೆ. ಆದರೂ ಪ್ರಯೋಮನವಾಗಿಲ್ಲ ಎಂದರು.
ಟೆಂಗಳಿ ಗ್ರಾಮದಿಂದ ಟೆಂಗಳಿ ಕ್ರಾಸ್ ವರೆಗಿನ ರಸ್ತೆಯಲ್ಲಿ ತಗ್ಗು, ಗುಂಡಿಗಳು ಬಿದ್ದಿರುವುದರಿಂದ ತಾಲೂಕಿನ ಮಂಗಲಗಿ, ಕೊಡದೂರ, ಸಾಲಹಳ್ಳಿ, ಮಳಗ(ಕೆ), ಡೊಣ್ಣೂರ, ಅರಜಂಬಗಾ, ಮಲಘಾಣ, ತೊನಸನಳ್ಳಿ(ಟಿ), ಕಾಳಗಿ, ಕಲಗುರ್ತಿ ಸೇರಿದಂತೆ ಅನೇಕ ಗ್ರಾಮಗಳ ಜನರು, ವಿದ್ಯಾರ್ಥಿಗಳು ಚಿತ್ತಾಪುರ, ಕಲಬುರಗಿ ನಗರಕ್ಕೆ ದಿನನಿತ್ಯ ಕಚೇರಿ ಕೆಲಸ ಹಾಗೂ ಶಾಲೆ, ಕಾಲೇಜುಗಳಿಗೆ ಹೋಗಲು ತೊಂದರೆ ಅನುಭವಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಕಾಳಗಿ ತಹಶೀಲ್ದಾರ್ ನಾಗನಥ ತರಗೆ, ಚಿತ್ತಾಪುರ ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರಿಗೆ ಮನವಿ ಸಲ್ಲಿಸಿದರು. ತಾಲೂಕು ಕರವೇ ಅಧ್ಯಕ್ಷ ಜಾವೀದಮಿಯ್ಯ ಅಫಖಾನ್, ಉಪಾಧ್ಯಕ್ಷ ಕಾಳಶೆಟ್ಟಿ ಬೆಳಗುಂಪಿ, ಚಿತ್ತಾಪುರ ತಾಲೂಕು ಕರವೇ ಅಧ್ಯಕ್ಷ, ಮಲ್ಲಿಕಾರ್ಜುನ ಅಲ್ಲೂರಕರ್, ಸೇಡಂ ಕರವೇ ಅಧ್ಯಕ್ಷ ಅಂಬರೀಶ ಉಡಗಿ, ಕಾರ್ಯಕರ್ತರಾದ ಫಿರೋಜ ಸಿಕಲಗರ್, ಈರಣ್ಣ ಕೊಳ್ಳಿ, ಸಂತೋಷ ಕೊಂಕನಳ್ಳಿ, ಜಗನ್ನಾಥ ಕೊಂಕನಳ್ಳಿ, ಭಾಗೇಶ ಕೊಳಕೊರ, ಮೈನೋದ್ದಿನ ತೊನಸಳ್ಳಿ, ಸಿದ್ಧು ಉಗೋರ, ವಿಜಯಕುಮಾರ ಕೊಣಿನ, ಟೆಂಗಳಿ ಗ್ರಾಪಂ ಅಧ್ಯಕ್ಷ ಮೆಹಬೂಬ್ ಪಟೇಲ, ಸದಸ್ಯ ಹಣಮಂತ ಡೊಣ್ಣೂರ, ಗ್ರಾಮದ ಮುಖಂಡರಾದ ಓಂಪ್ರಕಾಶ ಹೆಬ್ಟಾಳ, ಮಲ್ಲಿಕಾರ್ಜುನ ನೈಕೊಡಿ, ಮೈಬು ಟೇಲರ್, ಮಲ್ಲಿಕಾರ್ಜುನ ಕೇಶ್ವರ ಪಾಲ್ಗೊಂಡಿದ್ದರು. ಪಿಎಸ್ಐ ಹುಲಿಯಪ್ಪ ಗೌಡಗೊಂಡ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ