ದಕ್ಷಿಣ ಕನ್ನಡ : ಸುಬ್ರಹ್ಮಣ್ಯೇಶ್ವರ ರಾವ್ ನೂತನ ಪೊಲೀಸ್ ಆಯುಕ್ತ
11 IPS ಅಧಿಕಾರಿಗಳ ವರ್ಗಾವಣೆ
Team Udayavani, Aug 1, 2019, 9:13 PM IST
ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ನೇತೃತ್ವದ ನೂತನ ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನಡೆದಿದೆ. 11 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮಂಗಳೂರಿನಲ್ಲಿ ಪೊಲೀಸ್ ಆಯುಕ್ತರಾಗಿದ್ದ ಸಂದೀಪ್ ಪಾಟೀಲ್ ಅವರನ್ನು ಬೆಂಗಳೂರು ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಪಾಟೀಲ್ ಅವರಿಂದ ತೆರವಾದ ಸ್ಥಾನಕ್ಕೆ ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ನೇಮಿಸಲಾಗಿದೆ.
ವರ್ಗಾವಣೆಗೊಂಡವರ ಮಾಹಿತಿ:
-ಅಮರ್ ಕುಮಾರ್ ಪಾಂಡೆ ಎಡಿಜಿಪಿ, ಕಾನೂನು ಸುವ್ಯವಸ್ಥೆ
-ಕಮಲ್ ಪಂತ್ ಎಡಿಜಿಪಿ, ಗುಪ್ತಚರ ಇಲಾಖೆ
-ಬಿ.ದಯಾನಂದ್ ಐಜಿಪಿ, ಕೆಎಸ್ಆರ್ಪಿ
-ಎಂ.ಚಂದ್ರಶೇಖರ್ ಐಜಿಪಿ, ಎಸಿಬಿ
-ಸುಬ್ರಹ್ಮಣ್ಯೇಶ್ವರ ರಾವ್ ಐಜಿಪಿ ಮಂಗಳೂರು
-ಸಂದೀಪ್ ಪಾಟೀಲ್ DIG ಜಂಟಿ ಪೊಲೀಸ್ ಆಯುಕ್ತ ಅಪರಾಧ ವಿಭಾಗ, ಬೆಂಗಳೂರು
-ಅನೂಪ್ ಶೆಟ್ಟಿಎಸ್ಪಿ, ರಾಮನಗರ
– ಸಿದ್ದರಾಮಪ್ಪ ಆಯುಕ್ತರು, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗ
– ಚೇತನ್ ಸಿಂಗ್ ರಾಥೋಡ್ ಡಿಸಿಪಿ, ಬೆಂಗಳೂರು ಕೇಂದ್ರ ವಿಭಾಗ
– ಕೆ.ಎಂ.ಶಾಂತರಾಜು ಎಸ್ಪಿ, ಶಿವಮೊಗ್ಗ ಜಿಲ್ಲೆ
– ಹನುಮಂತರಾಯ ಎಸ್ಪಿ, ದಾವಣಗೆರೆ ಜಿಲ್ಲೆ