Fraud: ಸೊಸೈಟಿಯಿಂದ 2.11 ಕೋ.ರೂ. ವಂಚನೆ


Team Udayavani, Dec 21, 2023, 11:50 PM IST

FRAUD

ಕುಂದಾಪುರ: ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೊಸೈಟಿ ಒಂದರಲ್ಲಿ ಗ್ರಾಹಕರು ಇಟ್ಟಿದ್ದ ನಿರಖು ಠೇವಣಿ ದುರುಪಯೋಗಕ್ಕೊಳಗಾಗಿ 2.11 ಕೋ.ರೂ. ವಂಚನೆಯಾಗಿದೆ.
ವರ್ಷಗಳ ಹಿಂದೆ ನಗರದಲ್ಲಿ ಆರಂಭವಾದ ಸೊಸೈಟಿಯೊಂದು ಗ್ರಾಹಕರಿಂದ ಮಾಸಿಕ ಬಡ್ಡಿ ನೀಡುವ ನಿಬಂಧನೆಯಲ್ಲಿ ನಿರಖು ಠೇವಣಿಗಳನ್ನು ಸಂಗ್ರಹಿಸಿತ್ತು. ಆದರೆ ಕಳೆದ 6 ತಿಂಗಳಿನಿಂದ ಗ್ರಾಹಕರಿಗೆ ಠೇವಣಿ ಹಣ ಕೇಳಿದರೂ ಮರುಪಾವತಿಸುತ್ತಿರಲಿಲ್ಲ.

ಇದರಿಂದ ಅನುಮಾನಗೊಂಡ ಗ್ರಾಹಕರು ಒಟ್ಟಾಗಿ ವಿಚಾರಿಸಿದಾಗಲೂ ಸಮರ್ಪಕ ಮಾಹಿತಿ ದೊರೆಯಲಿಲ್ಲ.

ಗುರುವಾರ ಸಹಕಾರಿ ಇಲಾಖೆಯ ಉಡುಪಿಯ ಸೌಹಾರ್ದ ಸೊಸೈಟಿಗಳ ಸಂಯೋಜಕ ಅಧಿಕಾರಿ ವಿಜಯ್‌ ಅವರು ಸಂಸ್ಥೆಗೆ ಆಗಮಿಸಿ ತನಿಖೆ ನಡೆಸಿದಾಗ ವಂಚನೆ ಬೆಳಕಿಗೆ ಬಂದಿದೆ. ಸುಮಾರು 30 ಮಂದಿಗೆ 2.11 ಕೋ.ರೂ. ಪಾವತಿಗೆ ಬಾಕಿ ಇರುವುದಾಗಿ ಲೆಕ್ಕ ದೊರೆತಿದೆ.

ಗ್ರಾಹಕರು ಠೇವಣಿ ಇಟ್ಟ ಹಣವನ್ನು ಶೇ. 90ರಷ್ಟು ನಕಲಿ ಖಾತೆಗಳನ್ನು ತೆರೆದು ಸಾಲದ ರೂಪದಲ್ಲಿ ವಿತರಿಸಲಾಗಿದೆ. ಸಂಸ್ಥೆಯ ಅಧ್ಯಕ್ಷರು ಕಾಲಾವಕಾಶ ಕೋರಿದ್ದು ಮರುಪಾವತಿಸುವುದಾಗಿ ಭರವಸೆ ನೀಡಿದ್ದಾರೆ.

ಮಹಿಳೆಯೊಬ್ಬರು ಮಗುವಿನ ಚಿಕಿತ್ಸೆಗಾಗಿ ಕೂಡಿಟ್ಟ ಹಣ, ಹಿರಿಯ ನಾಗರಿಕರು ನಿವೃತ್ತಿ ವೇಳೆ ದೊರೆತ ಇಡುಗಂಟು ಸೇರಿದಂತೆ ಒಂದಷ್ಟು ಮಂದಿ ಬೇರೆ ಬೇರೆ ಕಷ್ಟದ ಹಣವನ್ನು ಇಲ್ಲಿ ಮಾಸಿಕ ಬಡ್ಡಿಯ ಆಧಾರದಲ್ಲಿ ಇಟ್ಟಿದ್ದರು. 6 ತಿಂಗಳಿಂದ ಬೇಡಿಕೆ ಇಡುತ್ತಿರುವ ಠೇವಣಿದಾರರು ಸ್ವಲ್ಪ ಸ್ವಲ್ಪವಾದರೂ ಮರುಪಾವತಿಸಿ, ಏಕಕಾಲದಲ್ಲಿ ಕೊಡಬೇಕಿಲ್ಲ ಎಂದು ಮನವಿ ಮಾಡಿದ್ದರು. ಚಿನ್ನಾಭರಣ ಅಡವು ಕುರಿತಂತೆಯೂ ಗ್ರಾಹಕರಿಗೆ ಸಂಶಯ ಇದ್ದು, ತನಿಖೆ ಬಳಿಕ ವಂಚನೆ ಇದ್ದರೆ ದೃಢಪಡಲಿದೆ. ಠೇವಣಿ ಹಣ ದುರುಪಯೋಗವಾಗಿದೆ, ಅಧ್ಯಕ್ಷರು ಹಾಗೂ ನಿರ್ದೇಶಕರು ಇದಕ್ಕೆ ಜವಾಬ್ದಾರರಾಗಿದ್ದು, ಇಲಾಖೆಗೆ ವರದಿ ಮಾಡಲಾಗುವುದು. ಅಲ್ಲಿಂದ ಟಾಸ್ಕ್ಫೋರ್ಸ್‌ ಆಗಮಿಸಿ ಕೂಲಂಕಷ ತನಿಖೆ ನಡೆಯಲಿದೆ ಎಂದು ಅಧಿಕಾರಿ ವಿಜಯ್‌ ಅವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಟಾಪ್ ನ್ಯೂಸ್

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

1-wddsa-das

Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?

kore

KLE ಸಂಸ್ಥೆ ಬೆಳೆದಿದ್ದು ದಾನಿಗಳಿಂದ, ಕಾಂಗ್ರೆಸ್‍ನಿಂದ ಅಲ್ಲ‌: ಪ್ರಭಾಕರ ಕೋರೆ

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

Fraud: ಬೆಳಪು; ಹಣ ಪಡೆದು ಕಾಯಿಲ್‌ ನೀಡದೆ ವಂಚನೆ; ದೂರು ದಾಖಲು

22

Udupi: ಆಕಸ್ಮಿಕವಾಗಿ ಬಾವಿಗೆ ಬಿದ್ದವರ ರಕ್ಷಣೆ

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

1-qweqweq

CNG ಇಂಧನ ನಿರಂತರ ಪೂರೈಕೆಗೆ ಕೇಂದ್ರಕ್ಕೆ ಯಶ್ ಪಾಲ್ ಸುವರ್ಣ ಮನವಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

1-CKDY

Chikkodi:ಅಮಿತ್ ಶಾ ಸಮ್ಮುಖದಲ್ಲಿ ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.