Dhruvastra: 45,000 ಕೋಟಿ ರೂ. ಶಸ್ತ್ರಾಸ್ತ್ರ ಖರೀದಿಗೆ ಅಸ್ತು
- ಶೀಘ್ರದಲ್ಲೇ ಸೇನೆಗೆ ಧ್ರುವಾಸ್ತ್ರ ಕ್ಷಿಪಣಿ
Team Udayavani, Sep 15, 2023, 11:53 PM IST
ಹೊಸದಿಲ್ಲಿ: ಧ್ರುವಾಸ್ತ್ರ ಕ್ಷಿಪಣಿ, 12 ಎಸ್ಯು-30 ಎಂಕೆಐ ಯುದ್ಧ ವಿಮಾನ ಸೇರಿದಂತೆ ವಿವಿಧ ಶಸ್ತ್ರಾಸ್ತ್ರ ವ್ಯವಸ್ಥೆಗಳು ಸದ್ಯದಲ್ಲೇ ಭಾರತೀಯ ಸೇನೆಯ ಕೈಸೇರಲಿವೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಶುಕ್ರವಾರ ಒಟ್ಟು 45,000 ಕೋಟಿ ರೂ. ಮೊತ್ತದ ರಕ್ಷಣಾ ಸಾಧನಗಳನ್ನು ಖರೀದಿಸಲು ಅನುಮತಿ ನೀಡಿಗೆ. ಈ ಬಗ್ಗೆ ಸಚಿವಾಲಯ ಅಧಿಕೃತ ಆದೇಶವನ್ನು ಹೊರಡಿಸಿದೆ.
ಲಘುವ್ಯಾಪ್ತಿಯ ಆಕಾಶದಿಂದ ಭೂಮಿಗೆ ಅಪ್ಪಳಿಸುವ ಧ್ರುವಾಸ್ತ್ರ ಕ್ಷಿಪಣಿಗಳು, 12 ಎಸ್ಯು-30 ಎಂಕೆಐ ಯುದ್ಧವಿಮಾನಗಳು, ಹೈ ಮೊಬಿಲಿಟಿ ವಾಹನಗಳು, ಗನ್ ಅಳವಡಿಸಲಾಗಿರುವ ವಾಹನಗಳು, ಮುಂದಿನ ತಲೆಮಾರಿನ ನಿಗಾ ನೌಕೆಗಳ ಖರೀದಿ ಸೇರಿದಂತೆ ಒಟ್ಟು 9 ಬೇಡಿಕೆಗಳಿಗೆ ಡಿಎಸಿ ಒಪ್ಪಿಗೆ ನೀಡಿದೆ. ಇವೆಲ್ಲವನ್ನೂ ಭಾರತೀಯ ಕಂಪೆನಿಗಳಿಂದಲೇ ಖರೀದಿಸಲಾಗುತ್ತದೆ. ಬೈ ಯೋಜನೆಯಡಿ ಭಾರತೀಯ ಕಂಪೆನಿಗಳಿಂದಲೇ ಖರೀದಿಸುವುದರಿಂದ ಆತ್ಮನಿರ್ಭರ ಭಾರತದ ಗುರಿ ಮುಟ್ಟಲು ಸಹಾಯಕವಾಗುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ರಕ್ಷಣಾ ಸಾಮರ್ಥ್ಯವನ್ನು ಮೇಲ್ದರ್ಜೆಗೇರಿಸಲು, ದಾಳಿ ಸಾಮರ್ಥ್ಯ, ಯಾಂತ್ರೀಕೃತ ಪಡೆಗಳನ್ನು ಸದೃಢಗೊಳಿಸಲು ಡಿಎಸಿ ಈ ತೀರ್ಮಾನ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ