500 ವಿಕೆಟ್‌ ಸಾಧಕರು… ಸ್ಟಂಪಿಂಗ್‌ ವಿಕೆಟ್‌ ಒಂದೇ ಒಂದು!


Team Udayavani, May 24, 2021, 6:50 AM IST

500 ವಿಕೆಟ್‌ ಸಾಧಕರು… ಸ್ಟಂಪಿಂಗ್‌ ವಿಕೆಟ್‌ ಒಂದೇ ಒಂದು!

ಬೌಲರ್‌ಗಳ ವಿಕೆಟ್‌ ಬೇಟೆಯಲ್ಲಿ ಕೀಪರ್‌ಗಳ ಪಾತ್ರ ಮಹತ್ವದ್ದು. ಕ್ಯಾಚ್‌, ಸ್ಟಂಪಿಂಗ್‌ ಜತೆಗೆ ರನೌಟ್‌ ಮೂಲಕವೂ ಕೀಪರ್‌ ವಿಕೆಟ್‌ ಪತನದಲ್ಲಿ ಕೈ ಆಡಿಸುತ್ತಾರೆ. ಆದರೆ ಕ್ರಿಕೆಟ್‌ ಚರಿತ್ರೆಯಲ್ಲಿ ಕೆಲವು ಬೌಲರ್‌ಗಳಿದ್ದಾರೆ, ಇವರು ಎಷ್ಟೇ ಆಟಗಾರರನ್ನು ಔಟ್‌ ಮಾಡಿದರೂ ಸ್ಟಂಪಿಂಗ್‌ ಮೂಲಕ ವಿಕೆಟ್‌ಸಿಕ್ಕಿದ್ದು ಅಪರೂಪ. ಇಲ್ಲಿ ಇಂಥ 5 ವೇಗದ ಬೌಲರ್‌ಗಳ ಪಟ್ಟಿಯಿದೆ. ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ವಿಕೆಟ್‌ ಕಿತ್ತರೂ ಸ್ಟಂಪಿಂಗ್‌ ಮೂಲಕ ಇವರಿಗೆ ಉರುಳಿಸಲು ಸಾಧ್ಯವಾದದ್ದು ಒಂದು ವಿಕೆಟ್‌ ಮಾತ್ರ. ನಮ್ಮ ಕಪಿಲ್‌ದೇವ್‌ ಮೂಲಕವೇ ಈ ಸ್ವಾರಸ್ಯವನ್ನು ಆರಂಭಿಸೋಣ.

ಕಪಿಲ್‌ದೇವ್‌ ಟೆಸ್ಟ್‌ನಲ್ಲಿ 434, ಏಕದಿನದಲ್ಲಿ 253 ವಿಕೆಟ್‌ ಕಿತ್ತ ಪರಾಕ್ರಮಿ. ಇದರಲ್ಲಿ ಸ್ಟಂಪಿಂಗ್‌ ಮೂಲಕ ಲಭಿಸಿದ್ದು ಒಂದು ವಿಕೆಟ್‌ ಮಾತ್ರ. ಇದು 1986ರ ಆಸ್ಟ್ರೇಲಿಯ ಎದುರಿನ ಹೈದರಾಬಾದ್‌ ಏಕದಿನ ಪಂದ್ಯದಲ್ಲಿ ಲಭಿಸಿತ್ತು. ಇವರ ಎಸೆತಕ್ಕೆ ಸ್ಟಂಪ್ಡ್ ಆದ ಆಟಗಾರ ಗ್ರೆಗ್‌ ರಿಚಿ. ಇವರನ್ನು ಸ್ಟಂಪೌಟ್‌ ಮಾಡಿದ ಕೀಪರ್‌ ಚಂದ್ರಕಾಂತ್‌ ಪಂಡಿತ್‌. ಸ್ವಾರಸ್ಯವೆಂದರೆ, ಇದನ್ನು ಕೆಲವು ಮಾಧ್ಯಮಗಳು ಕ್ಯಾಚ್‌ ಎಂದೇ ವರದಿ ಮಾಡಿದ್ದವು. ಆದರೆ ಆಗ ವೀಡಿಯೋ ದೃಶ್ಯಾವಳಿ ಇಲ್ಲದ ಕಾರಣ, ರಿಚಿ “ಬೀಟನ್‌’ ಆದುದನ್ನು ಹಾಗೂ ಕೀಪರ್‌ ಪಂಡಿತ್‌ ನಿಂತ ಭಂಗಿಯನ್ನು ಗಮನಿಸಿದ ಬಳಿಕ ಇದು ಸ್ಟಂಪಿಂಗ್‌ ಎಂಬುದು ಖಾತ್ರಿಯಾಗಿತ್ತು!

ಚಮಿಂಡ ವಾಸ್‌
ಶ್ರೀಲಂಕಾದ ಎಡಗೈ ವೇಗದ ಬೌಲರ್‌ ಚಮಿಂಡ ವಾಸ್‌ ಸಾಹಸ ಎಲ್ಲರಿಗೂ ತಿಳಿದ ಸಂಗತಿ. ಇವರ 761 ವಿಕೆಟ್‌ಗಳಲ್ಲಿ ಸ್ಟಂಪಿಂಗ್‌ ಮೂಲಕ ಔಟಾದ ಏಕೈಕ ಆಟಗಾರನೆಂದರೆ ವೆಸ್ಟ್‌ ಇಂಡೀಸ್‌ ಲೆಜೆಂಡ್‌ ಬ್ರಿಯಾನ್‌ ಲಾರಾ. ಸ್ಟಂಪಿಂಗ್‌ ಮಾಡಿದ ಹೆಗ್ಗಳಿಕೆ ಕುಮಾರ ಸಂಗಕ್ಕರ ಅವರದು.
ಅದು 2007ರ ವಿಶ್ವಕಪ್‌ ಟೂರ್ನಿಯ “ಸೂಪರ್‌ 8′ ಹಂತದ ಪಂದ್ಯವಾಗಿತ್ತು. ತೃತೀಯ ಅಂಪಾಯರ್‌ ಮೂಲಕ ಈ ತೀರ್ಪು ಬಂದಿತ್ತು.

ಟಿಮ್‌ ಸೌಥಿ
ನ್ಯೂಜಿಲ್ಯಾಂಡಿನ ಟಿಮ್‌ ಸೌಥಿ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರುವ ಬೌಲರ್‌. ಮೂರೂ ಮಾದರಿಗಳಲ್ಲಿ ಒಟ್ಟು 591 ವಿಕೆಟ್‌ ಹಾರಿಸಿದ್ದಾರೆ. ಆದರೆ ಸ್ಟಂಪ್ಡ್ ವಿಕೆಟ್‌ ಮಾತ್ರ ಒಂದೇ ಒಂದು. ಇದು ಒಲಿದದ್ದು 2011ರ ವಿಶ್ವಕಪ್‌ನಲ್ಲಿ. ಸ್ಟಂಪ್ಡ್ ಆದ ಆಟಗಾರ ಆಸೀಸ್‌ ಕಪ್ತಾನ ರಿಕಿ ಪಾಂಟಿಂಗ್‌. ಫ್ಲಿಕ್‌ ಶಾಟ್‌ ಬಾರಿಸಲು ವಿಫಲ ಪ್ರಯತ್ನ ಮಾಡಿದಾಗ ಕೀಪರ್‌ ಬ್ರೆಂಡನ್‌ ಮೆಕಲಮ್‌ ಮಿಂಚಿನ ವೇಗದಲ್ಲಿ ಬೇಲ್ಸ್‌ ಹಾರಿಸಿದ್ದರು. ಸ್ವಾರಸ್ಯವೆಂದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಂಟಿಂಗ್‌ ಸ್ಟಂಪ್ಡ್ ಆದದ್ದು ಇದೊಂದೇ ಸಲ!

ಗ್ಲೆನ್‌ ಮೆಕ್‌ಗ್ರಾತ್‌
ಆಸ್ಟ್ರೇಲಿಯದ ಸ್ಪೀಡ್‌ಸ್ಟಾರ್‌ ಗ್ಲೆನ್‌ ಮೆಕ್‌ಗ್ರಾತ್‌ ಅವರಿಗೂ ಸ್ಟಂಪಿಂಗ್‌ ಮೂಲಕ ಸಿಕ್ಕಿದ್ದು ಒಂದು ವಿಕೆಟ್‌ ಮಾತ್ರ. 2005ರ ನ್ಯೂಜಿಲ್ಯಾಂಡ್‌ ಪ್ರವಾಸದ ವೆಲ್ಲಿಂಗ್ಟನ್‌ ಏಕದಿನದಲ್ಲಿ ಕ್ರೆಗ್‌ ಮೆಕ್‌ಮಿಲನ್‌ ಆವರನ್ನು ಆ್ಯಡಂ ಗಿಲ್‌ಕ್ರಿಸ್ಟ್‌ ಸ್ಟಂಪ್ಡ್ ಮಾಡಿ ಮೆಕ್‌ಗ್ರಾತ್‌ಗೆ ಈ ವಿಕೆಟ್‌ ಲಭಿಸುವಂತೆ ಮಾಡಿದ್ದರು. ಅಂದಹಾಗೆ ಮೆಕ್‌ಗ್ರಾತ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬರೋಬ್ಬರಿ 949 ವಿಕೆಟ್‌ ಕಿತ್ತ ಸಾಹಸಿ!

ಶಾನ್‌ ಪೋಲಾಕ್‌
ಹರಿಣಗಳ ನಾಡಿನ ವೇಗಿ ಶಾನ್‌ ಪೋಲಾಕ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 829 ವಿಕೆಟ್‌ ಉಡಾಯಿಸಿದ್ದಾರೆ. 2005ರ ವೆಸ್ಟ್‌ ಇಂಡೀಸ್‌ ಪ್ರವಾಸದ ಕಿಂಗ್‌ಸ್ಟನ್‌ ಟೆಸ್ಟ್‌ನಲ್ಲಿ ಇವರಿಗೆ ಏಕೈಕ ಸ್ಟಂಪ್ಡ್ ವಿಕೆಟ್‌ ಲಭಿಸಿತ್ತು. ವಿಂಡೀಸ್‌ ಬ್ಯಾಟ್ಸ್‌ಮನ್‌ ರಾಮ್‌ನರೇಶ್‌ ಸರವಣ್‌ ಅವರನ್ನು ಮಾರ್ಕ್‌ ಬೌಷರ್‌ ಸ್ಟಂಪ್ಡ್ ಬಲೆಗೆ ಬೀಳಿಸಿದ್ದರು.

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

IPL ಮುಂಬೈ ಇಂಡಿಯನ್ಸ್‌ ತಂಡಕ್ಕೆ ದಂಡ: ಹಾರ್ದಿಕ್‌ಗೆ ನಿಷೇಧ ಭೀತಿ

IPL ಮುಂಬೈ ಇಂಡಿಯನ್ಸ್‌ ತಂಡಕ್ಕೆ ದಂಡ: ಹಾರ್ದಿಕ್‌ಗೆ ನಿಷೇಧ ಭೀತಿ

IPL ಮಾಯಾಂಕ್‌ಗೆ ಮತ್ತೆ ಗಾಯ: ಮುಂದಿನ ಪಂದ್ಯಗಳಿಗೆ ಅಲಭ್ಯ?

IPL ಮಾಯಾಂಕ್‌ಗೆ ಮತ್ತೆ ಗಾಯ: ಮುಂದಿನ ಪಂದ್ಯಗಳಿಗೆ ಅಲಭ್ಯ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.