Chennai: ಚೈನಿಂದ ಬಿಗಿದು, ಕತ್ತರಿಸಿ, ಬೆಂಕಿ ಹಚ್ಚಿ ಪ್ರೇಯಸಿಯ ಭೀಕರ ಕೊಲೆ
ಲಿಂಗಪರಿವರ್ತಿತ ಹುಚ್ಚುಪ್ರೇಮಿಯ ಕಿಡಿಗೇಡಿತನ ಮದುವೆಯಾಗಲು ಒಪ್ಪದ್ದಕ್ಕೆ ಚೆನ್ನೈಯಲ್ಲಿ ಘಾತಕ ಕೃತ್ಯ
Team Udayavani, Dec 25, 2023, 11:26 PM IST
ಚೆನ್ನೈ: ಜನ್ಮದಿನದ ಹಿಂದಿನ ದಿನದಂದು 24 ವರ್ಷದ ಮಹಿಳಾ ಐಟಿ ಉದ್ಯೋಗಿಯೊ ಬ್ಬರನ್ನು, ಮಾಜಿ ಸಹಪಾಠಿಯೊಬ್ಬ ಬ್ಲೇಡ್ನಿಂದ ಕತ್ತರಿಸಿ, ಪೆಟ್ರೋಲ್ನಿಂದ ಬೆಂಕಿಹಚ್ಚಿ ಬರ್ಬರ ವಾಗಿ ಹತ್ಯೆ ಮಾಡಲಾಗಿದೆ. ಈ ಭೀಕರ ಘಟನೆ ನಡೆದಿದ್ದು ತಮಿಳುನಾಡಿನ ಚೆನ್ನೈಯ ದಕ್ಷಿಣ ಉಪನಗರ ಕೆಳಂಬಕ್ಕಂ ಬಳಿಯ ತಲಂಬೂರ್ನಲ್ಲಿ. ಮೃತ ಯುವತಿಯನ್ನು ನಂದಿನಿ ಎಂದು ಗುರುತಿ ಸಲಾಗಿದೆ. ಈಕೆಯನ್ನು ಮದುವೆಯಾ ಗಲೆಂದೇ ಲಿಂಗಪರಿವರ್ತನೆ ಮಾಡಿಸಿಕೊಂಡಿದ್ದ, ಹಿಂದಿನ ಪಾಂಡಿ ಮಹೇಶ್ವರಿ, ಈಗಿನ ವೆಟ್ರಿ ಮಾರನ್(26) ಕೊಲೆ ಆರೋಪಿ. ವೇಟ್ರಿಯನ್ನು ಮದುವೆ ಯಾಗಲು ಸಾಧ್ಯವಿಲ್ಲ ಎಂದಿದ್ದೇ ಹತ್ಯೆಗೆ ಕಾರಣವಿರಬಹುದೆಂದು ಶಂಕಿಸಲಾಗಿದೆ.
ಮಧುರೈ ಮೂಲದ ಸಾಫ್ಟ್ವೇರ್ ಎಂಜಿನಿಯರ್ ನಂದಿನಿ, ಚೆನ್ನೈಯಲ್ಲಿ ಕೆಲಸದ ಸಲುವಾಗಿ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದರು. ಮಧುರೈನಲ್ಲಿ ಪಾಂಡಿ ಮಹೇಶ್ವರಿ ಮತ್ತು ನಂದಿನಿ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದರು. ಈ ನಡುವೆ ಪಾಂಡಿ ಮಹೇಶ್ವರಿ ಲಿಂಗ ಪರಿವರ್ತನೆ ಚಿಕಿತ್ಸೆಗೆ ಒಳಗಾಗಿದ್ದು, ವೆಟ್ರಿಮಾರನ್ ಎಂದು ಹೆಸರು ಬದಲಿಸಿ ಕೊಂಡಿದ್ದಳು. ಆದರೂ ಇಬ್ಬರ ನಡುವೆ ಸ್ನೇಹ ಮುಂದುವರಿದಿತ್ತು.
ನಂದಿನಿಯ ಹುಟ್ಟುಹಬ್ಬದ ಆಚರಣೆ ನಿಮಿತ್ತ ಆಕೆಯನ್ನು ರವಿವಾರ ಸಂಜೆ ವೆಟ್ರಿಮಾರನ್ ಕರೆಸಿಕೊಂಡಿದ್ದಾನೆ. ಅನಂತರ ಸಪ್ರೈಸ್ ನೀಡುವ ನೆಪದಲ್ಲಿ ಆಕೆಯ ಕಣ್ಣುಗಳನ್ನು ಬಟ್ಟೆಯಿಂದ ಕಟ್ಟಿ, ಚೈನ್ಗಳಿಂದ ಕೈ-ಕಾಲು ಕಟ್ಟಿ ಹಾಕಿದ್ದಾನೆ. ಅನಂತರ ಬ್ಲೇಡ್ನಿಂದ ಕುಯ್ದು ಹಿಂಸಿಸಿ, ಜೀವಂ ತವಾಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕ್ರೂರ ವಾಗಿ ಕೊಲೆ ಮಾಡಿದ್ದಾನೆ. ಪೊಲೀಸರು ಕ್ಷಿಪ್ರವಾಗಿ ಆರೋಪಿ ವೇಟ್ರಿಮಾರನ್ನನ್ನು ಬಂಧಿಸಿದ್ದಾರೆ ಮತ್ತು ಸದ್ಯ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
MUST WATCH
ಹೊಸ ಸೇರ್ಪಡೆ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ