Veteran Actress Leelavathi ಆರೋಗ್ಯ ವಿಚಾರಿಸಿದ ನಟ ದರ್ಶನ್, ಅಭಿಷೇಕ್ ಅಂಬರೀಶ್
Team Udayavani, Nov 27, 2023, 9:49 PM IST
ನೆಲಮಂಗಲ: ಹಿರಿಯ ನಟಿ ಲೀಲಾವತಿ ಅವರಿಗೆ ವಯೋಸಹಜ ಅನಾರೋಗ್ಯ ಹಿನ್ನೆಲೆಯಲ್ಲಿ ನಟ ದರ್ಶನ್ ಹಾಗೂ ಅಭಿಷೇಕ್ ಅಂಬರೀಶ್ ಅವರು ಮನೆಗೆ ಭೇಟಿ ನೀಡಿ, ವಿನೋದ್ ರಾಜ್ ಅವರಿಂದ ಆರೋಗ್ಯ ವಿಚಾರಿಸಿದರು.
ತಾಲೂಕಿನ ಸೋಲದೇವನಹಳ್ಳಿಯ ಡಾ.ಲೀಲಾವತಿ ತೋಟದ ಮನೆಗೆ ಭೇಟಿ ನೀಡಿದ ನಟ ದರ್ಶನ್, ದೇವರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಲೀಲಾವತಿಯವರನ್ನು ಮಾತನಾಡಿಸಿ, ಆಶೀರ್ವಾದ ಪಡೆದುಕೊಂಡರು. ಇದೇ ಸಮಯದಲ್ಲಿ ಪುತ್ರ ವಿನೋದ್ರಾಜ್, ದರ್ಶನ್ ಬಂದಿದ್ದಾರೆ ಎಂದು ಹೇಳಿದಾಗ ಲೀಲಾವತಿಯವರು ಮಾತನಾಡುವ ಪ್ರಯತ್ನ ಮಾಡಿದ್ದು ಕಂಡುಬಂತು. ದರ್ಶನ್ ಭೇಟಿ ನಂತರ ಅಭಿಷೇಕ್ ಅಂಬರೀಶ್ ಹಾಗೂ ಅನೇಕ ಕಲಾವಿದರು ಬಂದು ಆರೋಗ್ಯ ವಿಚಾರಿಸಿದ್ದಾರೆ.
ಆರೋಗ್ಯದಲ್ಲಿ ಚೇತರಿಕೆ: 85 ವರ್ಷದ ಲೀಲಾವತಿಯವರ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡು ಬಂದಿದ್ದು ದ್ರವರೂಪದ ಆಹಾರವನ್ನು ಮುಂದುವರಿಸಿದ್ದಾರೆ. ಅಮ್ಮ ಚೇತರಿಕೆಯಾಗುತ್ತಿದ್ದು ಅವರ ಆರೈಕೆ ಮಾಡುತ್ತಿರುವುದಾಗಿ ವಿನೋದ್ರಾಜ್ ಹೇಳಿದ್ದಾರೆ.
ನಟ ದರ್ಶನ್ ಮಾತನಾಡಿ, ಕನ್ನಡ ಚಿತ್ರರಂಗಕ್ಕೆ ಲೀಲಾವತಿ ಅಮ್ಮನವರ ಕೊಡುಗೆ ಅಪಾರ. ಅವರ ಸಿನಿಮಾವನ್ನು ನೋಡಿಕೊಂಡು ಬೆಳೆದಿದ್ದೇವೆ. ಚಿತ್ರರಂಗದ ಜತೆಗೆ ಈ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಸ್ಪತ್ರೆ ಹಾಗೂ ಪ್ರಾಣಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಶು ಆಸ್ಪತ್ರೆ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದರು.
ನ.28 ರಂದು ಆಸ್ಪತ್ರೆ ಉದ್ಘಾಟನೆ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಲೀಲಾವತಿಯವರ ಕನಸಿನ ಆಸ್ಪತ್ರೆಯನ್ನು ನ.28ರ ಬೆಳಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ