Pranab Mukherjee: ಅಧ್ಯಾದೇಶ ರಾಹುಲ್ ಹರಿದಿದ್ದು, ಯುಪಿಎಗೆ ಹೊಡೆದ ಕೊನೆಯ ಮೊಳೆ
ಮಗಳು ಶರ್ಮಿಷ್ಠಾ ಬರೆದ ಪ್ರಣವ್ ಮುಖರ್ಜಿ ಕುರಿತ ಪುಸ್ತಕದಲ್ಲಿ ಉಲ್ಲೇಖ
Team Udayavani, Dec 7, 2023, 12:23 AM IST
ಹೊಸದಿಲ್ಲಿ: ಮಾಜಿ ರಾಷ್ಟ್ರಪತಿ ದಿ| ಪ್ರಣವ್ ಮುಖರ್ಜಿ ಅವರ ಕುರಿತು ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಬರೆದಿರುವ ಪುಸ್ತಕ ಬಿಡುಗಡೆಗೆ ಸಿದ್ಧವಾಗಿದೆ. “ಪ್ರಣವ್, ಮೈ ಫಾದರ್: ಎ ಡಾಟರ್ ರಿಮೆಂಬರ್’ ಪುಸ್ತಕದಲ್ಲಿ ಅವರು ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದೊಂದಿಗೆ ಪ್ರಣವ್ ಮುಖರ್ಜಿ ಅವರು ಹೊಂದಿದ್ದ ಒಡನಾಟದ ಕುರಿತು ಪ್ರಸ್ತಾವಿಸಿದ್ದಾರೆ.
“ರಾಹುಲ್ ಗಾಂಧಿ ಅವರು ವಿನಯ ಶೀಲ. ತಲೆಯ ತುಂಬ ಪ್ರಶ್ನೆಗಳನ್ನೇ ಹೊಂದಿದ್ದಾರೆ. ಆದರೆ ರಾಜಕೀಯವಾಗಿ ಇನ್ನೂ ಪ್ರಬುದ್ಧತೆ ಹೊಂದಿಲ್ಲ. ಅಂತಹ ಯಾವುದೇ ಯೋಗ್ಯತೆ ಇಲ್ಲದಿದ್ದರೂ, ಗಾಂಧಿ- ನೆಹರೂ ಕುಟುಂಬದ ಎಲ್ಲ ದುರಹಂಕಾರಗಳನ್ನೂ ಅವರು ಹೊಂದಿದ್ದಾರೆ’ ಎಂದು ಪ್ರಣವ್ ಹೇಳಿದ್ದರು ಎಂದು ಪುಸ್ತಕದಲ್ಲಿದೆ. ಅಷ್ಟು ಮಾತ್ರವಲ್ಲ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಸರಕಾರ, ಅಪರಾಧಿಗಳೆಂದು ಸಾಬೀತಾದ ನಾಯಕರು ಅನರ್ಹರಾಗುವುದನ್ನು ತಪ್ಪಿಸಲು ಹೊರಡಿಸಿದ್ದ ಅಧ್ಯಾದೇಶವನ್ನು ಪತ್ರಿಕಾಗೋಷ್ಠಿ ಯಲ್ಲೇ ಹರಿದು ಹಾಕಿದ್ದರು. ಇದು ಯುಪಿಎ ಸರಕಾರದ ಮೇಲೆ ಹೊಡೆದ ಕೊನೆಯ ಮೊಳೆ ಎಂದೂ ಪ್ರಣವ್ಹೇಳಿದ್ದರೆಂದು ಪುಸ್ತಕದಲ್ಲಿದೆ.
“ಅವರು ತಮ್ಮನ್ನು ತಾವು ಏನೆಂದು ಭಾವಿಸಿದ್ದಾರೆ? ಸಂಪುಟದ ಸದಸ್ಯರಲ್ಲದ ಅವರು ಸಂಪುಟದ ತೀರ್ಮಾನದ ಪ್ರತಿಯನ್ನು ಹರಿಯಲು ಏನು ಅಧಿಕಾರವಿದೆ? ತಮ್ಮ ಕ್ರಿಯೆಯ ಪರಿ ಣಾಮ ವನ್ನು ಅವರು ಅರಿತಿಲ್ಲ. ಪ್ರಧಾನಿ ಯನ್ನು ಅವಮಾನಿಸಲು ಅವರಿಗೆ ಏನು ಹಕ್ಕಿದೆ?’ ಎಂದು ರಾಹುಲ್ ಬಗ್ಗೆ ಪ್ರಣವ್ ಕ್ರೋಧಗೊಂಡಿದ್ದರು ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
MUST WATCH
ಹೊಸ ಸೇರ್ಪಡೆ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ