Politics: “ವಿಪಕ್ಷಗಳ ಸಭೆಗೆ ಆಹ್ವಾನ ಇರಲಿಲ್ಲ”: ಮಮತಾ ಬ್ಯಾನರ್ಜಿ
Team Udayavani, Dec 7, 2023, 12:28 AM IST
ಹೊಸದಿಲ್ಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಆಯೋಜಿಸಲು ಯೋಜಿಸಿದ್ದ ವಿಪಕ್ಷಗಳ ಒಕ್ಕೂಟದ ಸಭೆಯ ಬಗ್ಗೆ ನನಗೆ ಯಾರೂ ತಿಳಿಸಿಯೇ ಇರಲಿಲ್ಲ ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಬುಧವಾರ ನಡೆಯಬೇಕಿದ್ದ ಇಂಡಿಯಾ ಒಕ್ಕೂಟದ ಸಭೆಯನ್ನು ಡಿ. 17ಕ್ಕೆ ಮುಂದೂಡಲಾಗಿದೆ.
ಈ ಕುರಿತಂತೆ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳು ಮಮತಾ ಅವರನ್ನು ಪ್ರಶ್ನಿಸಿದ್ದವು. ಉತ್ತರಿಸಿದ ಅವರು, ಸಭೆಗೆ 2 ದಿನಗಳ ಮುಂಚಿತವಾಗಿ ರಾಹುಲ್ ಗಾಂಧಿ ಅವರು ನನಗೆ ಕರೆ ಮಾಡಿದ್ದರು. ಆಗ ಸಭೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಹಿನ್ನೆಲೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆ ಎಂದು ತಿಳಿಸಿದ್ದೆ. ಈಗ ಸಭೆಯನ್ನು ಮುಂದೂಡಲಾಗಿದೆ ಅದರಲ್ಲಿ ಭಾಗಿಯಾಗುತ್ತೇವೆ. ಆದರೆ ಪ್ರತಿಯೊಬ್ಬ ವಿಪಕ್ಷಗಳ ನಾಯಕರಿಗೂ ಕನಿಷ್ಠ 8 ರಿಂದ 10 ದಿನಗಳ ಮುಂಚೆ ಮಾಹಿತಿ ನೀಡಬೇಕು ಎಂದು ಮಮತಾ ಹೇಳಿದ್ದಾರೆ.