ಸಿಡಿಲಿನಿಂದ ಆಲಮಟ್ಟಿ ನೀರಾವರಿ ಜನರೇಟರ್ ಬೆಂಕಿ
Team Udayavani, Oct 8, 2019, 5:45 PM IST
ವಿಜಯಪುರ: ಸಿಡಿಲಿನಿಂದ ಕೃಷ್ಣಾ ಭಾಗ್ಯ ಜಲನಿಗಮದ ಆಲಮಟ್ಟಿ ಎಡದಂಡೆ ಶಾಖಾ ಕಾಲುವೆ ವಿಭಾಗ ಕಚೇರಿ ಆವರಣದಲ್ಲಿರುವ ಜನರೇಟರ್ ಗೆ ಸಿಡಿಲುಬಡಿದ ಪರಿಣಾಮ ಬೆಂಕಿಗೆ ಆಹುತಿಯಾಗಿದೆ.
ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಿಡಿಲು ಬಡಿದ ಕಾರಣ ಎ.ಎಲ್.ಬಿ.ಸಿ. ನೀರಾವರಿಯ ಜನರೇಟರ್ ಗೆ ಬೆಂಕಿ ಹೊತ್ತಿಕೊಂಡ ಕಾರಣ 5 ಲಕ್ಷ ರೂ. ಜನರೇಟರ್ ಸುಟ್ಟು ಬಸ್ಮವಾಗಿದೆ. ಜೊತೆಗೆ ಕೆ.ಬಿ.ಜೆ.ಎನ್.ಎಲ್. ಕಛೇರಿಯ ಕಂಪ್ಯೂಟರ ಹಾಗೂ ಇತರೆ ಸಲಕರಣೆಗಳು ಹಾನಿಯಾಗಿವೆ.
ಆಲಮಟ್ಟಿ ವಲಯ ಮುಖ್ಯ ಅಭಿಯಂತರ ಆರ್.ಪಿ. ಕುಲಕರ್ಣಿ ಅವರ ಮುಂಭಾಗದ ಕಚೇರಿ ಆವರಣದಲ್ಲಿ ಬೆಂಕಿ ಹೊತ್ತಿರುವದರಿಂದ ಮುಖ್ಯ ಅಭಿಯಂತರರು ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಲು ಯಶಸ್ವಿಯಾದರು.