ಮೀಸಲಾತಿ ನೆಚ್ಚಿಕೊಂಡು ಜೀವನ ಮಾಡಬೇಡಿ.. ನಿಮ್ಮ ಪ್ರಯತ್ನದಿಂದ ಮುಂದುವರೆಯಿರಿ : ಅಮರೇಗೌಡ
Team Udayavani, Apr 5, 2022, 2:02 PM IST
ಕುಷ್ಟಗಿ : ಮೀಸಲಾತಿ ನೆಚ್ಚಿಕೊಂಡು ಜೀವನ ಮಾಡಬೇಡಿ.. ನಿಮ್ಮ ವಿದ್ವಾತ್, ಚಾಣಕ್ಯತನದಿಂದ ಪ್ರಯತ್ನವಾದಿಗಳಾಗಿ ಮುಂದುವರೆಯಿರಿ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ತಾಲೂಕಾಡಳಿತ ತಾ.ಪಂ. ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಡಾ. ಬಾಬು ಜಗಜೀವನರಾಮ್ 115ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಯಾರ ಸ್ವತ್ತು ಅಲ್ಲ. ಸತತ ಪ್ರಯತ್ನದಿಂದ ಶೈಕ್ಷಣಿಕ ಸಾಧನೆಗೆ ಸಾಕಷ್ಟು ಅವಕಾಶವಿದೆ. ಬಾಬು ಜೀವನರಾಮ್ ಅವರ ತತ್ವಾದರ್ಶಗಳು ದಲಿತರಿಗೆ ಮೀಸಲು ಅಲ್ಲ, ಎಲ್ಲ ವರ್ಗಕ್ಕೂ ಮೀಸಲು ಎಂದರು. ಬಾಬು ಜಗಜೀವನರಾಮ್ ಅವರು ಕೃಷಿಗೆ ಒತ್ತು ನೀಡಿದ್ದರು. ದೇಶವನ್ನು ಕೃಷಿಯಲ್ಲಿ ಸ್ವಾವಲಂಬಿ ಸಾಧಿಸಲು ಅವರ ಬಾಬೂಜಿಯವರು ಸತತವಾಗಿ 30 ವರ್ಷ ಸಚಿವರಾಗಿ ಸೇವೆ ಸಲ್ಲಿಸಿ, ದೇಶದ ಉಪ ಪ್ರಧಾನಿಗಳಾಗಿದ್ದನ್ನು ಸ್ಮರಿಸಿದರು.
ತಹಶೀಲ್ದಾರ ಎಂ.ಸಿದ್ದೇಶ ಮಾತನಾಡಿ ಉದ್ಯೋಗ ಕ್ಷೇತ್ರಗಳಲ್ಲಿ ಹಲವು ದಾರಿಗಳಿದ್ದರೂ ಇದೆಲ್ಲವುದಕ್ಕೂ ಮೂಲ ಶಿಕ್ಷಣವಾಗಿದೆ ಎಂದರು.
ಸಿಆರ್ ಪಿ ಶರಣಪ್ಪ ತುಮರಿಕೊಪ್ಪ ಮಾತನಾಡಿ, ಬಾಬು ಜಗ ಜೀವನರಾಮ್ ಅವರು ಸೇರಿದಂತೆ ಹಲವು ಮಹಾನೀಯರ ದಿನಾಚರಣೆ ದಿನವೂ ಆಚರಣೆಯಾಗಬೇಕಿದೆ ಎಂದರು.
ಇದನ್ನೂ ಓದಿ : ರಾಜ್ಯ ಸರ್ಕಾರಿ ನೌಕರರಿಗೆ ಶೇ. 2.75 ತುಟ್ಟಿಭತ್ಯೆ ಹೆಚ್ಚಳ : ಜನವರಿಯಿಂದಲೇ ಪೂರ್ವಾನ್ವಯ
ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ತಾ.ಪಂ.ಇಓ ಹನುಮಂತಗೌಡ, ದಲಿತ ಮುಖಂಡ ಶುಖರಾಜ ತಾಳಕೇರಿ, ಪುರಸಭೆ ಸದಸ್ಯ ವಸಂತ ಮೇಲಿನಮನಿ, ಶಿವಪುತ್ರಪ್ಪ ಗುಮಗೇರಿ, ಪಂಚಾಯತ್ ರಾಜ್ ಇಂಜಿನೀಯರಿಂಗ್ ಇಲಾಖೆಯ ಎಇಇ ಕೈಲಾಸ್, ಬಿಇಒ ಸುರೇಂದ್ರ ಕಾಂಬ್ಳೆ, ಸಿಡಿಪಿಓ ಅಮರೇಶ ಹಾವಿನಾಳ, ಸಮಾಜ ಕಲ್ಯಾಣ ಅಧಿಕಾರಿ ಬಾಲಚಂದ್ರ ಸಂಗನಾಳ, ಗ್ರಾ.ಪಂ. ಸದಸ್ಯ ರಾಯಪ್ಪ ನಿಡಶೇಸಿ, ಶ್ರೈಶೈಲ ತುಮರಿಕೊಪ್ಪ, ವಿಶ್ವನಾಥ ರಾಠೋಡ್, ಟಿ. ಕೃಷ್ಣಮೂರ್ತಿ, ಮಾಜಿ ಸೈನಿಕ, ಯಲ್ಲಪ್ಪ ವಗ್ಗರ, ರಮೇಶ ಮೇಲಿನಮನಿ, ಬಾಳಪ್ಪ ಸೇಬಿನಕಟ್ಟಿ ಮತ್ತೀತರಿದ್ದರು.
ಪ್ರತಿಭಾನ್ವಿತರಾದ ಮಹೇಶ್ವರಿ ಟೆಂಗುಂಟಿ ಕನಕಪ್ಪ ಮಾದರ, ಅಶ್ಮೀತಾ ಬ್ರಹ್ಮಾವರ, ಗ್ಯಾನಪ್ಪ ಕಡೇಮನಿ ಅವರನ್ನು ತಾಲೂಕಾಡಳಿದಿಂದ ಸನ್ಮಾನಿಸಲಾಯಿತು. ದಲಿತ ಮುಖಂಡ ಶುಕರಾಜ ತಳಕೇರಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಲಾ 2ಸಾವಿರ ರೂ. ಪ್ರೋತ್ಸಾಹ ಧನ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಂಸದ ಶ್ರೀನಿವಾಸ್ ಪ್ರಸಾದ್ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
MUST WATCH
ಹೊಸ ಸೇರ್ಪಡೆ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
ಸಂಸದ ಶ್ರೀನಿವಾಸ್ ಪ್ರಸಾದ್ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು