ಅರ್ಜುನಕ್ಕೆ ಅಂಕಿತಾ, ದಿವಿಜ್‌ ಹೆಸರು ಶಿಫಾರಸು


Team Udayavani, May 18, 2020, 5:50 AM IST

ಅರ್ಜುನಕ್ಕೆ ಅಂಕಿತಾ, ದಿವಿಜ್‌ ಹೆಸರು ಶಿಫಾರಸು

ಹೊಸದಿಲ್ಲಿ: ಪ್ರಸಕ್ತ ವರ್ಷದ ಅರ್ಜುನ ಪ್ರಶಸ್ತಿಗಾಗಿ ಏಷ್ಯನ್‌ ಗೇಮ್ಸ್‌ ಪದಕ ವಿಜೇತರಾದ ಅಂಕಿತಾ ರೈನಾ ಮತ್ತು ದಿವಿಜ್‌ ಶರಣ್‌ ಹೆಸರನ್ನು ನ್ಯಾಶನಲ್‌ ಟೆನಿಸ್‌ ಫೆಡರೇಶನ್‌ ಶಿಫಾರಸು ಮಾಡಿದೆ. ಜತೆಗೆ ಮಾಜಿ ಡೇವಿಸ್‌ ಕಪ್‌ ಕೋಚ್‌ ನಂದನ್‌ ಬಾಲ್‌ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಸೂಚಿಸಿದೆ.

27ರ ಹರೆಯದ ಅಂಕಿತಾ ರೈನಾ 2018ರ ಏಶ್ಯನ್‌ ಗೇಮ್ಸ್‌ ವನಿತಾ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಜಯಿ ಸಿದ್ದರು. ಬಳಿಕ ಫೆಡ್‌ ಕಪ್‌ ಟೆನಿಸ್‌ನಲ್ಲಿ ಅಮೋಘ ಪ್ರದ ರ್ಶನ ನೀಡಿದ್ದರು. ಭಾರತವನ್ನು ಮೊದಲ ಬಾರಿಗೆ ವಿಶ್ವ ಗ್ರೂಪ್‌ ಪ್ಲೇ-ಆಫ್‌ ಸುತ್ತಿಗೆ ಕೊಂಡೊಯ್ಯುವಲ್ಲಿ ಅಂಕಿತಾ ಆಟವೇ ನಿರ್ಣಾಯಕವಾಗಿತ್ತು.

ದಿವಿಜ್‌ ಬಂಗಾರದ ಸಾಧಕ
ದಿಲ್ಲಿಯ 34ರ ಹರೆಯದ ದಿವಿಜ್‌ ಶರಣ್‌ ಜಕಾರ್ತಾ ಏಶ್ಯಾಡ್‌ ಪುರುಷರ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಜತೆಗೂಡಿ ಚಿನ್ನದ ಪದಕ ಗೆದ್ದ ಹೆಗ್ಗಳಿಕೆ ಹೊಂದಿದ್ದಾರೆ. 2019ರಲ್ಲಿ ದೇಶದ ಅಗ್ರಮಾನ್ಯ ಡಬಲ್ಸ್‌ ಆಟಗಾರನೆಂಬ ಹಿರಿಮೆಗೂ ದಿವಿಜ್‌ ಪಾತ್ರರಾಗಿದ್ದರು.

ಕಳೆದ ವರ್ಷ ಎರಡು ಎಟಿಪಿ ಡಬಲ್ಸ್‌ ಪ್ರಶಸ್ತಿ ಗೆದ್ದ ಸಾಧನೆಯೂ ದಿವಿಜ್‌ ಶರಣ್‌ ಅವರದಾಗಿದೆ. ಪುಣೆಯಲ್ಲಿ ನಡೆದ ಟಾಟಾ ಓಪನ್‌ನಲ್ಲಿ ರೋಹನ್‌ ಬೋಪಣ್ಣ ಜತೆಯಲ್ಲಿ, ಸೇಂಟ್‌ ಪೀಟರ್ಬರ್ಗ್‌ನಲ್ಲಿ ಐಗರ್‌ ಝೆಲೆನಾಯ್‌ ಜತೆಗೂಡಿ ದಿವಿಜ್‌ ಈ ಸಾಧನೆ ಮಾಡಿದ್ದರು. “ಇವರಿಬ್ಬರೂ ಅರ್ಜುನ ಪ್ರಶಸ್ತಿಗೆ ಖಂಡಿತವಾಗಿಯೂ ಅರ್ಹರು’ ಎಂಬುದಾಗಿ ಅಖೀಲ ಭಾರತ ಟೆನಿಸ್‌ ಅಸೋಸಿಯೇಶನ್‌ನ (ಎಐಟಿಎ) ಕಾರ್ಯದರ್ಶಿ ಹಿರಣೊ¾àಯ್‌ ಚಟರ್ಜಿ ಹೇಳಿದ್ದಾರೆ.

ನಂದನ್‌ಗೆ ಒಲಿದೀತೇ?
60 ವರ್ಷದ ನಂದನ್‌ ಬಾಲ್‌ 1980-83ರ ಅವಧಿಯಲ್ಲಿ ಡೇವಿಸ್‌ ಕಪ್‌ ಪಂದ್ಯಾವಳಿಯಲ್ಲಿ ಆಡಿದ್ದರು. ಬಳಿಕ ಭಾರತದ ಡೇವಿಸ್‌ ಕಪ್‌ ತಂಡದ ಕೋಚ್‌ ಆಗಿ ಸುದೀರ್ಘ‌ ಕಾಲ ಸೇವೆ ಸಲ್ಲಿಸಿದ್ದರು.

ಈವರೆಗೆ ಕೇವಲ ಮೂವರು ಟೆನಿಸ್‌ ಕೋಚ್‌ಗಳಿಗಷ್ಟೇ ಅರ್ಜುನ ಪ್ರಶಸ್ತಿ ಒಲಿದು ಬಂದಿದೆ. 2014ರಲ್ಲಿ ಜೀಶನ್‌ ಅಲಿ, 2015ರಲ್ಲಿ ಎಸ್‌.ಪಿ. ಮಿಶ್ರಾ ಮತ್ತು ಕಳೆದ ವರ್ಷ ನಿತಿನ್‌ ಕೀರ್ತನೆ ಈ ಗೌರವಕ್ಕೆ ಪಾತ್ರರಾಗಿದ್ದರು.

ಟಾಪ್ ನ್ಯೂಸ್

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.