ರೈತರನ್ನು ಕಂಗಾಲು ಮಾಡಿದ ಅಂತರಗಂಗೆ : ಶಾಶ್ವತ ಪರಿಹಾರಕ್ಕಾಗಿ ಹೂಳೆತ್ತುವಂತೆ ಆಗ್ರಹ
Team Udayavani, Jul 17, 2021, 7:15 PM IST
ತೆಕ್ಕಟ್ಟೆ : ಕೆದೂರು ಗ್ರಾ.ಪಂ. ವ್ಯಾಪ್ತಿಯ ಹಲ್ತೂರು, ಉಳ್ತೂರು ಭಾಗಗಳಲ್ಲಿ ನೂರಾರು ಎಕರೆ ಕೃಷಿ ಭೂಮಿಯನ್ನು ಅಂತರಗಂಗೆ ಆವರಿಸಿರುವ ಪರಿಣಾಮ ಕೃಷಿಕರು ಕಂಗಾಲಾಗಿದ್ದಾರೆ.
ನಿರಂತರ ಮಳೆಯಿಂದಾಗಿ ಅಂತರಗಂಗೆ ಉಳ್ತೂರಿನ ಹಲ್ತೂರು ಕಿರು ಸೇತುವೆ ಬಳಿ ಅಪಾರ ಪ್ರಮಾಣದಲ್ಲಿ ಶೇಖರಣೆಯಾಗಿದೆ. ಮಳೆ ಪ್ರಮಾಣ ಕಡಿಮೆಯಾದರೆ ಹೊಳೆಸಾಲು ಸಮೀಪದಲ್ಲಿರುವ ಕೃಷಿ ಭೂಮಿಗಳಿಗೆ ಆವರಿಸಿ ಕೃಷಿ ಚಟುವಟಿಕೆಗೆತೀವ್ರ ತೊಂದರೆಯಾಗಲಿದೆ.
ಏನಿದು ಅಂತರಗಂಗೆ?
ನೀರಿನ ಮೇಲ್ಪದರದಲ್ಲಿ ದಟ್ಟವಾಗಿ ಬೆಳೆಯುವ ಈ ಗಿಡ ಆಮ್ಲಜನಕ ಹಾಗೂ ಸೂರ್ಯನ ಬೆಳಕು ನೀರಿನ ಆಳಕ್ಕೆ ಇಳಿಯದಂತೆ ತಡೆಯುವ ಮೂಲಕ ನೀರಿನಲ್ಲಿರುವ ಮೀನುಗಳು ಹಾಗೂ ಇತರ ಜಲಚರಗಳ ಸಾವಿಗೆ ಪರೋಕ್ಷ ಕಾರಣವಾಗುತ್ತದೆ.
ಆವರಿಸುತ್ತಿದೆ ಅಂತರಗಂಗೆ: ಉಳ್ತೂರು, ಮಲ್ಯಾಡಿ, ಬೇಳೂರು ಗ್ರಾಮೀಣ ಭಾಗಗಳಲ್ಲಿ ಕಳೆದ ಮೂರು ವರ್ಷಗಳಿಂದ ಅಂತರಗಂಗೆಯ ಸಮಸ್ಯೆ ತುಸು ಕಡಿಮೆಯಾಗಿತ್ತು. ಆದರೆ ಈ ಬಾರಿ ಅಂತರಗಂಗೆ ತೇಲಿ ಬರುತ್ತಿದ್ದು ಎಲ್ಲೆಡೆ ವ್ಯಾಪಿಸಿ ಕೃಷಿ ನಾಶವಾಗುವ ಭೀತಿ ಹೆಚ್ಚಾಗಿದೆ.
ಹೊಳೆ ಸಾಲು ಹೂಳೆತ್ತಬೇಕು: ಹಲ್ತೂರು ಬೈಲು, ಉಳ್ತೂರು ಮೂಡುಬೆಟ್ಟಿನಲ್ಲಿ ಈಗಾಗಲೇ ಅಂತರಗಂಗೆ ಕೃಷಿಭೂಮಿಯನ್ನು ವ್ಯಾಪಿಸಿದೆ. ಹಲ್ತೂರಿನ ಹುಣ್ಸೆಕಟ್ಟೆಯಿಂದ ತೆಂಕಬೆಟ್ಟಿನ ಬಟ್ಟೆಕೆರೆ ಬೈಲಿನ ವರೆಗೆ ಹೊಳೆ ಸಾಲನ್ನು ಹೂಳೆತ್ತಬೇಕು. ಇದರಿಂದ ನೀರಿನ ಒಳ ಹರಿವು ಹೆಚ್ಚಾದಾಗ ಗ್ರಾಮದಲ್ಲಿ ಕೃಷಿಕರ ಪಾಲಿಗೆ ಕಂಟಕವಾಗಿದ್ದ ಅಂತರಗಂಗೆ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕಂಡು ಕೊಳ್ಳಲು ಸಾಧ್ಯವಿದೆ ಎನ್ನುವುದು ಸ್ಥಳೀಯ ಕೃಷಿಕ ಪ್ರತಾಪ್ ಶೆಟ್ಟಿ ಉಳ್ತೂರು ಅವರ ಅಭಿಪ್ರಾಯ.
ಸುಲಭದಲ್ಲಿ ಸಾಯದು
ನೀರಿನಿಂದ ಹೊರತೆಗೆದು ದಂಡೆಗಳಲ್ಲಿ ಒಣಗಿಸಿ ಅನಂತರ ಕೆಲವೊಂದು ರಾಸಾಯನಿಕ ಸಿಂಪಡಣೆ ಅಥವಾ ಸುಟ್ಟಾಗ ಮಾತ್ರ ಶಾಶ್ವತವಾಗಿ ಅಂತರಗಂಗೆಯನ್ನು ನಾಶ ಮಾಡಲು ಸಾಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ