ಅರಸೀಕೆರೆ ಕ್ಷೇತ್ರ: ಜೆಡಿಎಸ್ನಿಂದ ಅಶೋಕ್?
Team Udayavani, Feb 12, 2023, 11:43 PM IST
ಹಾಸನ: ಅರಸೀಕೆರೆ ಕ್ಷೇತ್ರದಲ್ಲಿ ಜಿ.ಪಂ. ಮಾಜಿ ಸದಸ್ಯ ಅಶೋಕ್ ಜೆಡಿಎಸ್ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಅವರು ಮೊದಲಿಂದಲೂ ಶಿವಲಿಂಗೇಗೌಡರ ರಾಜಕೀಯ ವಿರೋಧಿ.
ಕುರುಬ ಸಮುದಾಯದವರಾಗಿದ್ದು, ಬಾಣಾವರ ಜಿ.ಪಂ. ಕ್ಷೇತ್ರದಿಂದ ಜೆಡಿಎಸ್ನಿಂದ ಆಯ್ಕೆಯಾಗಿದ್ದರು. ಆದರೆ ಅವಧಿ ಪೂರ್ಣಗೊಳಿಸುವ ಮೊದಲೇ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು.
ಜಿಪಂ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋತಿದ್ದರು. ಶಿವಲಿಂಗೇಗೌಡರು ಜೆಡಿಎಸ್ನಿಂದ ಅಂತರ ಕಾಯ್ದುಕೊಳ್ಳತೊಡಗಿದ ಬಳಿಕ ಅಶೋಕ್ ಜೆಡಿಎಸ್ ಪ್ರವೇಶಿಸಿದರು.
ರವಿವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಸ್ವತಃ ಕುಮಾರಸ್ವಾಮಿ ಅವರೇ ಅಶೋಕ್ ಜೆಡಿಎಸ್ ಅಭ್ಯರ್ಥಿ ಎಂಬ ಮುನ್ಸೂಚನೆ ನೀಡಿದ್ದಾರೆ.