ಮೂಲಭೂತ ಸೌಲಭ್ಯಗಳಿಗೆ ಒತ್ತು, ಮಾದರಿ ಪಂಚಾಯತ್ ಮಾಡುವುದೇ ಗುರಿ : ಅಧ್ಯಕ್ಷೆ ಮಂಜುಳ ಕುಮಾರ್
Team Udayavani, Mar 6, 2022, 12:23 PM IST
ಕುದೂರು: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯವನ್ನು ಗರಿಷ್ಟ ಮಟ್ಟದಲ್ಲಿ ಕಲ್ಪಿಸುವಂತೆ ಮಾಡಿ, ಮಾದರಿ ಪಂಚಾಯತಿಯಾಗಿಸುವುದೇ ನನ್ನ ಗುರಿ ಎಂದು ಮೋಟಗೊಂಡನಹಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆ ಎಂ.ಎನ್.ಮಂಜುಳ ಕುಮಾರ್ ಹೇಳಿದರು.
ಸೋಲೂರು ಹೋಬಳಿಯ ಮೋಟಾಗನಹಳ್ಳಿ ಗ್ರಾಮ ಪಂಚಾಯತಿ ಮುಂದಿನ ಅವಧಿಗೆ ಬಿಸಿಎಂ ಎ ಮೀಸಲಾತಿಯಿಂದ ಅವಿರೋಧವಾಗಿ ಆಯ್ಕೆಯಾಗಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಓಟ್ಟು 17 ಸದಸ್ಯ ಬಲವಿರುವ ಪಂಚಾಯತಿಯಲ್ಲಿ ಕಮಲಮ್ಮ ಪರಮೇಶ ಮೊದಲ ಅವಧಿಯಲ್ಲಿ ಅಧ್ಯಕ್ಷೆಯಾಗಿದ್ದರು, ಇದೀಗ ಎರಡನೇ ಅವಧಿಗೆ ನನ್ನನ್ನು ಅವಿರೋಧವಾಗಿ ಆಯ್ಕೆಮಾಡಿದ್ದಾರೆ, ವಿಧಾನ ಪರಿಷತ್ ನ ನೂತನ ಸದಸ್ಯರಾದ ಎಸ್.ರವಿಯವರು ಸೋಲೂರು ಹೋಬಳಿಗೆ 5 ಕೋಟಿ ಅನುದಾನ ನೀಡುವ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು, ನಮ್ಮ ಮೋಟಗಾನಹಳ್ಳಿಗೆ ಈ ಅನುದಾನದಲ್ಲಿ ಒಂದು ಕೋಟಿ ದೊರೆಯಲಿದೆ ಎಂಬುದು ಸಂತಸ ತಂದಿದೆ, ಎಲ್ಲಾ ಸದಸ್ಯರ ಮತ್ತು ಅಧಿಕಾರಿಗಳ ಸಹಕಾರದಿಂದ ಉತ್ತಮ ಆಡಳಿತ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆಗೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಕಾವ್ಯ ವರದರಾಜು, ಸದಸ್ಯರಾದ ಮೃತ್ಯಂಜಯ, ಶಾರದ, ಎಂ.ಆರ್.ಶಿವಕುಮಾರ್, ಚಿತ್ರಾ, ಪದ್ಮಾವತಿ , ಆಂಜಿನಪ್ಪ, ಎಂ.ಆರ್.ರತ್ನಮ್ಮ, ಜಗದೀಶ್, ಕಾಂತಮ್ಮ, ಎಂ.ಭಾಗ್ಯವತಿ, ಕುಮಾರಸ್ವಾಮಿ.ಬಿ.ಸಿ.ಶುಭ ಕೋರಿದರು.
ಇದನ್ನೂ ಓದಿ : ಒಬ್ಬ ಅಧಿಕಾರಿಯನ್ನು ಎಲ್ಲರೂ ಹೊಗಳುತ್ತಾರೆ ಎಂದರೆ ಅವರು ಸರಿಯಿಲ್ಲ ಎಂದೇ ಅರ್ಥ : ಗೃಹ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ