Brahmavar ಕುಕ್ಕುಡೆ: ಜುಗಾರಿ ನಿರತರ ಬಂಧನ
Team Udayavani, Aug 25, 2023, 8:40 PM IST
ಬ್ರಹ್ಮಾವರ: ಹಾರಾಡಿ ಕುಕ್ಕುಡೆ ಬಳಿ ಹಾಡಿಯಲ್ಲಿ ಗುರುವಾರ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಕೃಷ್ಣ ಪೂಜಾರಿ, ರಾಮಪ್ಪ, ಪ್ರಭಾಕರ ಶೆಟ್ಟಿಗಾರ್, ಸೈಯದ್ ಅಯಾಜ್ನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗದು 2,100 ಹಾಗೂ ಇತರ ಪರಿಕರಗಳನ್ನು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.