Hunsur: ಹೃದಯಾಘಾತದಿಂದ ಚೆಸ್ಕಾಂ ಉದ್ಯೋಗಿ ಸಾವು
Team Udayavani, Jan 16, 2024, 8:48 PM IST
ಹುಣಸೂರು: ಹುಣಸೂರಿನ ಚೆಸ್ಕಾಂನ ಪವರ್ಮೆನ್ ನಿರಂಜನ್ ಕುಮಾರ್ (30) ಹೃದಯಾಘಾತದಿಂದ ನಿಧನರಾದರು.
ಅವಿವಾಹಿತರಾಗಿದ್ದ ಇವರಿಗೆ ಸಹೋದರಿ ಇದ್ದಾರೆ. ಇವರ ತಂದೆ ಜೈಕುಮಾರ್ ಲೈನ್ಮನ್ ಆಗಿದ್ದು, ಹೃದಯಾಘಾತದಿಂದಲೇ ನಿಧನರಾಗಿದ್ದು, ತಾಯಿ ಸಹ ಅನುಕಂಪದ ಆಧಾರದಲ್ಲಿ ಚೆಸ್ಕಾಂನಲ್ಲೇ ಕೆಲಸ ಮಾಡುತ್ತಿದ್ದ ಅವರು ಸಹ ಅನಾರೋಗ್ಯದಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪುತ್ರ ನಿರಂಜನ್ ನಾಲ್ಕು ವರ್ಷದ ಹಿಂದೆ ಅನುಕಂಪದ ಆಧಾರದಲ್ಲಿ ಪವರ್ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಸೋಮವಾರ ಮದ್ಯರಾತ್ರಿ ಎದೆ ನೋವು ಕಾಣಿಸಿಕೊಂಡು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಮೃತರ ಅಂತ್ಯಕ್ರಿಯೆಯು ಮಂಗಳವಾರ ನಡೆಯಿತು. ಶಾಸಕ ಹರೀಶ್ಗೌಡ, ಚೆಸ್ಕಾಂ ಇ.ಇ.ಮಹೇಶ್ಕುಮಾರ್, ಎ.ಇ.ಇ.ಸಿದ್ದಪ್ಪ ಹಾಗೂ ಸಹೋದ್ಯೋಗಿಗಳು ಅಂತಿಮ ದರ್ಶನ ಪಡೆದರು.