Politics: ಟಿಡಿಪಿ ಮತ ಸೆಳೆಯಲು ಪೈಪೋಟಿ
Team Udayavani, Nov 6, 2023, 1:07 AM IST
ಚುನಾವಣ ರಾಜಕೀಯಕ್ಕೆ ಬಂದಾಗ ಯಾವುದೇ ಪಕ್ಷಗಳು ಸನ್ನಿವೇಶಕ್ಕೆ ತಕ್ಕಂತೆ ತಂತ್ರಗಾರಿಕೆಗೆ ಶರಣಾಗುತ್ತವೆ. ಪ್ರಸ್ತುತ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಅಂತಹದ್ದೊಂದು ಸಂದಿಗ್ಧ ಸನ್ನಿವೇಶವಿದೆ. ಆಂಧ್ರಪ್ರದೇಶವನ್ನು ಒಡೆದು ಕೊಂಡು ಹುಟ್ಟಿದ ತೆಲಂಗಾಣದಲ್ಲಿ, ಆಂಧ್ರದಿಂದ ಬಂದು ನೆಲೆಸಿ ಮತದಾರರಾಗಿರುವ ವ್ಯಕ್ತಿಗಳ ಸಂಖ್ಯೆ ದೊಡ್ಡದೇ ಇದೆ. ವಿಧಾನಸಭಾ ಚುನಾ ವಣೆಯಲ್ಲಿ, ಆ ಮತದಾರರನ್ನು ಸೆಳೆಯಲು ಕೆ.ಚಂದ್ರ ಶೇಖರ ರಾವ್ ನೇತೃತ್ವದ ಬಿಆರ್ಎಸ್, ಕಾಂಗ್ರೆಸ್ ಪಕ್ಷಗಳು ಪ್ರಬಲ ಯತ್ನ ನಡೆಸುತ್ತಿವೆ. ಅದಕ್ಕೆ ಸರಿಯಾಗಿ ಈ ಬಾರಿ ತೆಲಂಗಾಣ ಚುನಾ ವಣೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ. ಅವರು ಅ.31ರಂದು ಕೌಶಲಾಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ನಡೆಸಿದ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿದ್ದರು.
ಈಗ ತೆಲಂಗಾಣದಲ್ಲಿರುವ ಹೈದರಾಬಾದ್, ನಲ್ಗೊಂಡಾ, ಖಮ್ಮಮ್ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಆಂಧ್ರ ಮೂಲದ ಮತದಾರರರಿದ್ದಾರೆ. ಅಲ್ಲಿನ ಮತದಾರರ ಮೇಲೆ ಟಿಡಿಪಿ ಹಿಡಿತವಿದೆ. ಅವರನ್ನು ಸೆಳೆದುಕೊಳ್ಳಲು ಬಿಆರ್ಎಸ್, ಕಾಂಗ್ರೆಸ್ ನಾಯಕರು ಪೈಪೋಟಿ ಶುರು ಮಾಡಿದ್ದಾರೆ. ಹಿಂದೆ ಟಿಡಿಪಿಯಲ್ಲಿದ್ದ ಟಿ.ಶ್ರೀನಿವಾಸ್ ಯಾದವ್ (ತೆಲಂಗಾಣ ಸಚಿವ), ಚಂದ್ರಬಾಬು ಬಿಡುಗಡೆಗೆ ಆಗ್ರಹಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿನ ಸಾರಿಗೆ ಸಚಿವ ಅಜಯ್ ಕುಮಾರ್ ಪುವ್ವಡ ಚಂದ್ರಬಾಬುರನ್ನು ಹೊಗಳಿದ್ದಾರೆ. ಮತ್ತೂಬ್ಬ ತೆಲಂಗಾಣ ಸಚಿವ ಕೆ.ಟಿ.ರಾಮರಾವ್ ಕೂಡ ಚಂದ್ರಬಾಬು ಪರ ಮಾತನಾಡಿದ್ದಾರೆ. ಕಾಂಗ್ರೆಸ್ ನಾಯಕರಾದ ಮಧು ಯಾಶ್ಕಿ ಗೌಡ್, ತುಮ್ಮಲ ನಾಗೇಶ್ವರ ರಾವ್ ಕೂಡ ಚಂದ್ರಬಾಬು ಅವರ ಓಲೈಕೆಯಲ್ಲಿ ನಿರತರಾಗಿದ್ದಾರೆ. ಇವರೆಲ್ಲರ ಉದ್ದೇಶ ಟಿಡಿಪಿ ಮತಗಳನ್ನು ತಮ್ಮ ಪರವಾಗಿ ಸೆಳೆದುಕೊಳ್ಳುವುದಷ್ಟೇ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು