ಅರುಣಾಚಲ ಗಡಿ ಹೆದ್ದಾರಿ ನಿರ್ಮಾಣ ಶುರು-ಕಾಮಗಾರಿ ಪೂರ್ತಿ ಬಳಿಕ ಸೇನೆಯ ಸಂಚಾರ ಮತ್ತಷ್ಟು ಸುಗಮ
Team Udayavani, Jan 7, 2024, 12:36 AM IST
ಹೊಸದಿಲ್ಲಿ: ಚೀನದ ಗಡಿಭಾಗದಲ್ಲಿರುವ ಅರುಣಾಚಲಪ್ರದೇಶವನ್ನು ಸುರಕ್ಷಿತಗೊಳಿಸಲು ಭಾರತ ಬಲವಾದ ಹೆಜ್ಜೆಯಿಟ್ಟಿದೆ. ಅರುಣಾಚಲ ಗಡಿ ಹೆದ್ದಾರಿ (ಅರುಣಾಚಲ ಫ್ರಾಂಟಿಯರ್ ಹೈವೇ) ನಿರ್ಮಾಣ ಕಾಮಗಾರಿಗೆ ಕೇಂದ್ರ ಚಾಲನೆ ನೀಡಿದೆ. ಎರಡೂ ದೇಶಗಳ ನಡುವೆಯಿರುವ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ನೈಜ ಗಡಿನಿಯಂತ್ರಣ ರೇಖೆ)ಗೆ ಬಹಳ ಸನಿಹದಲ್ಲಿ ಅದನ್ನು ನಿರ್ಮಿಸಲಾಗುತ್ತದೆ. 2022, ಡಿ.9ರ ರಾತ್ರಿ ಭಾರತ-ಚೀನ ಯೋಧರ ನಡುವೆ ಭಾರೀ ಚಕಮಕಿಗೆ ಕಾರಣವಾಗಿದ್ದ ಯಾಂಗ್ತ್ಸೆ ಪ್ರದೇಶಕ್ಕೆ ಸನಿಹದಲ್ಲೇ ಈ ರಸ್ತೆ ಹಾದುಹೋಗುತ್ತದೆ. ಈ ಭಾಗದಲ್ಲಿ ಏನೇ ಮಾಡಲು ಹೊರಟರೂ ಖ್ಯಾತೆ ತೆಗೆಯುವ ಚೀನಕ್ಕೆ, ಭಾರತ ಬಲವಾದ ಉತ್ತರ ನೀಡಿದೆ.
ನೈಜ ಗಡಿನಿಯಂತ್ರಣ ರೇಖೆಯ ಭಾರತೀಯ ಭಾಗದಿಂದ ಕೇವಲ 20 ಕಿ.ಮೀ. ದೂರದಲ್ಲಿ ಈ ಹೆದ್ದಾರಿ ನಿರ್ಮಾಣ ವಾಗುತ್ತಿದೆ. ಇದರ ಒಟ್ಟು ದೂರ 1,859 ಕಿ.ಮೀ., ವೆಚ್ಚ 40,000 ಕೋಟಿ ರೂ. ಬಿಆರ್ಒ ಮತ್ತು ಕೇಂದ್ರ ಹೆದ್ದಾರಿ ಸಚಿವಾಲಯಗಳು ಒಗ್ಗೂಡಿ ರಸ್ತೆ ನಿರ್ಮಾಣಕ್ಕಿಳಿದಿವೆ.
ಮಹತ್ವವೇನು?: ಅರುಣಾಚಲವನ್ನು ಆಕ್ರಮಿಸುವ ಚೀನ ಆಗಾಗ ಕ್ಯಾತೆ ತೆಗೆಯುತ್ತಲೇ ಇರುತ್ತದೆ. ಇದಕ್ಕಾಗಿ 2022, ಡಿ.9ರಂದು ತವಾಂಗ್ನಲ್ಲಿರುವ ಯಾಂಗ್ತ್ಸೆ ಪ್ರದೇಶದಲ್ಲಿ ಭಾರತ-ಚೀನ ಯೋಧರ ನಡುವೆ ಸಂಘರ್ಷ ಸಂಭವಿಸಿತ್ತು. ಈ ಯಾಂಗ್ತ್ಸೆ ಸಮೀಪವೇ ಹೆದ್ದಾರಿ ಹಾದು ಹೋಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ