ಹಂಸಲೇಖ- ಬರಗೂರು ಕಾಂಬಿನೇಶನ್ನಲ್ಲಿ ಕೋವಿಡ್ 19 ಹಾಡು
Team Udayavani, Jun 1, 2020, 7:00 AM IST
ಕೋವಿಡ್ 19 ಕುರಿತಾಗಿ ಈಗಾಗಲೇ ಸಾಕಷ್ಟು ಹಾಡುಗಳು, ಕಿರುಚಿತ್ರಗಳು ಬಂದಿವೆ. ಈ ಸಾಲಿಗೆ ಈಗ ಹೊಸದಾಗಿ ಮತ್ತೊಂದು ಆಲ್ಬಂ ಸೇರಿಕೊಳ್ಳುತ್ತಿದೆ. ಅದೇ ಹೊಸ ಅಧ್ಯಾಯ. ಹೌದು. ಹೊಸ ಅಧ್ಯಾಯ ಎಂಬ ಆಲ್ಬಂ ಒಂದು ಬಿಡುಗಡೆಯಾಗಿದೆ. ಈ ಆಲ್ಬಂನ ಹಿಂದಿರೋದು ಕನ್ನಡ ಚಿತ್ರರಂಗದ ಇಬ್ಬರು ಹಿರಿಯ ವ್ಯಕ್ತಿಗಳು.
ಹಿರಿಯ ಸಂಗೀತ ನಿದೇ್ಶಕ ಹಂಸಲೇಖ ಹಾಗೂ ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿ ಹೊಸ ಅಧ್ಯಾಯ ಎಂಬ ಕೋವಿಡ್ 19 ಕುರಿತಾದ ಆಲ್ಬಂ ಹೊರತಂದಿದ್ದಾರೆ. ದೇಶ ವಿದೇಶದ ಸಂಚಾರಿ ಕಣ್ಣಿಗೆ ಕಾಣದ ಸಂಹಾರಿ, ಅಂಟಿದ ನಂಟನು ತಂದವನು ಜೀವ ಜೀವನ ಕೊಂದವನು… ಎಂಬ ಅರ್ಥಪೂರ್ಣ ಸಾಲನ್ನು ಬರಗೂರು ರಾಮಚಂದ್ರಪ್ಪನವರು ರಚಿಸಿದ್ದು, ಈ ಹಾಡಿಗೆ ಹಂಸಲೇಖ ಅವರು ಧ್ಬನಿ ನೀಡುವ ಜೊತೆಗೆ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ.
ಈ ಹಾಡಿನಲ್ಲಿ ಕೋವಿಡ್ 19 ಪರಿಣಾಮ ಹಾಗೂ ಅದನ್ನು ಹಿಮ್ಮೆಟ್ಟಿಸುವ ಕುರಿತಾದ ಭರವಸೆಯನ್ನು ತುಂಬಲಾಗಿದೆ. ವಿಶ್ವಾಸ್ ಎನ್ನುವವರು ಈ ಹಾಡನ್ನು ಚಿತ್ರೀಕರಿಸಿದ್ದಾರೆ. ಈಗಾಗಲೇ ಹಂಸಲೇಖ ಹಾಗೂ ಅವರ ಕುಟುಂಬ ಕೋವಿಡ್ 19 ಕುರಿತು ತಮ್ಮದೇ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ