Covid: ಡಿ.9 ರಂದೇ ಕಾರವಾರ ಕ್ರಿಮ್ಸ್ನಲ್ಲಿ ಕೋವಿಡ್ ಪ್ರಕರಣ ಪತ್ತೆ-ತಡವಾಗಿ ಬೆಳಕಿಗೆ
ಇತರರಿಗೆ ಹರಡಿಲ್ಲ.. ಆದರೂ ಎಚ್ಛರಿಕೆಯಿಂದಿರುವಂತೆ ಆರೋಗ್ಯ ಇಲಾಖೆ ಸೂಚನೆ
Team Udayavani, Dec 19, 2023, 8:29 PM IST
ಕಾರವಾರ: ಡಿ.9 ರಂದೇ ಕಾರವಾರ ಕ್ರಿಮ್ಸ್ ನಲ್ಲಿ ಕೋವಿಡ್ ಪಾಜಿಟಿವ್ ಯುವಕನೋರ್ವನಿಗೆ ಪತ್ತೆಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸದಾಶಿವಗಡದ ಯುವಕ ಹಿಂದಿನ ಕೋವಿಡ್ ಯಲ್ಲಿ ಕೋವಿಡ್ ನಿಂದ ಮುಕ್ತನಾಗಿದ್ದ. ಈಚೆಗೆ ಡಿಸೆಂಬರ್ ಆರಂಭದಲ್ಲಿ ಜ್ವರ ಕಾಣಿಸಿಕೊಂಡಿತು. ಗೋವಾಕ್ಕೆ ಕೆಲಸಕ್ಕೆ ಹೋಗುವ ಮುನ್ನ ಕೋವಿಡ್ ನೆಗೆವಿಟ್ ಪ್ರಮಾಣ ಪತ್ರದ ಕಾರಣ ಮತ್ತೆ ಪರೀಕ್ಷೆಗೆ ಒಳಗಾದಾಗ ಆತನಿಗೆ ಕೋವಿಡ್ ಪಾಜಿಟಿವ್ ಕಾಣಿಸಿಕೊಂಡಿತು.
ಕಾರವಾರ ಮೆಡಿಕಲ್ ಕಾಲೇಜು( ಕ್ರಿಮ್ಸ) ಆಸ್ಪತ್ರೆಯಲ್ಲಿ ವಾರಗಳ ಕಾಲ ಐಸೋಲೇಶನ್ಗೆ ಒಳಗಾಗಿ, ಗುಣಮುಖನಾದ ಯುವಕ ನಂತರ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ಡಿಸೆಂಬರ್ 16 ರಂದು ಪಡೆದು ಗೋವಾದಲ್ಲಿ ಕೆಲಸಕ್ಕೆ ಹಾಜರಾದ. ಈ ನಡುವೆ ಆತನ ಮನೆಯವರು ಹಾಗೂ ಸುತ್ತಮುತ್ತಲಿನ ಮನೆಯವರ ಆರೋಗ್ಯ ತಪಾಸಣೆ ಮಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸದಾಶಿವಗಡ ಪರಿಸರದಲ್ಲಿ ಯಾರಿಗೂ ಕೋವಿಡ್ ಇಲ್ಲ ಎಂದು ಖಚಿತ ಮಾಡಿಕೊಂಡಿದೆ ಎಂದು ಡಿಎಚ್ಓ , ಡಾ. ನೀರಜ್ ಉದಯವಾಣಿಗೆ ತಿಳಿಸಿದ್ದಾರೆ.
ಕೊವಿಡ್ ಇತರರಿಗೆ ಹರಡಿಲ್ಲ. ಈ ಸಲದ ವೈರಸ್ ಪ್ರಭಾವಶಾಲಿ ಅಲ್ಲ. ಅದು ಮೈಲ್ಡ್ ಆಗಿದೆ. ಆದರೆ ಬಿಪಿ, ಶುಗರ್ ಇರುವವರು ಜಾಗೃತೆಯಿಂದ ಇರಬೇಕು. 60 ವರ್ಷ ಮೇಲ್ಪಟ್ಟವರು ಜ್ವರ,ನೆಗಡಿ ಬಂದರೆ ತಕ್ಷಣ ಪರೀಕ್ಷೆ ಮಾಡಿಸಿಕೊಂಡು, ಗುಣಮುಖರಾಗುವತನಕ ಐಸೋಲೇಟ್ ಆಗಬೇಕು ಎಂದರು.
ಸದಾಶಿವಗಡ ಯುವಕ ಆರೋಗ್ಯವಾಗಿದ್ದು, ಕೆಲಸಕ್ಕೆ ಹೋಗಿದ್ದಾನೆಂದು ಡಿಎಚ್ ಓ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ