ಸಂಕಷ್ಟ ಪರಿಹಾರಕ್ಕೆ ಪಶುಪಾಲನೆ ಮುಖ್ಯ
Team Udayavani, May 1, 2020, 4:20 PM IST
ದೇವನಹಳ್ಳಿ: ರೈತರು, ತಮ್ಮ ಸಂಕಷ್ಟದಲ್ಲಿ ನೆರವಿಗೆ ಬರುವುದು ಪಶುಪಾಲನೆ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಬಿ.ಶ್ರೀನಿವಾಸ್ ತಿಳಿಸಿದರು. ತಾಲೂಕಿನ ದುದ್ದನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ಹಾಲು ಉತ್ಪಾದಕರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಿಸಿ ಮಾತನಾಡಿದರು. ಪಶು ಮೇವು ಹಾಕುವ ಸ್ಥಳಗಳನ್ನು ಶುಚಿ ಯಾಗಿಟ್ಟುಕೊಳ್ಳಬೇಕು.
ಹಾಲು ಶೇಖರಿಸುವ ಸ್ಟೀಲ್ ಕ್ಯಾನ್ ಬಿಸಿ ನೀರಿನಿಂದ ಸ್ವತ್ಛಗೊಳಿಸಬೇಕು. ತಾಲೂಕಿನ 181 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಮನೆಯಿಂದ ಬರುವಾಗಲೇ ಮಾಸ್ಕ್ ಧರಿಸಬೇಕು ಎಂದರು ಹೇಳಿದರು. ದುದ್ದನ ಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ಮುನಿ ಶಾಮಪ್ಪ, ಕಾರ್ಯದರ್ಶಿ ಆನಂದ್, ನಿರ್ದೇಶಕ ಡಿ.ವಿ.ರಂಗಸ್ವಾಮಿ, ನಾಗರಾಜ್, ಡಿಆರ್ ಚಂದ್ರಪ್ಪ, ಡಿ.ಎಂ.ಮಂಜುನಾಥ್, ಡಿ.ಕೆ. ರವಿಕುಮಾರ್, ಮುನಿಯಮ್ಮ, ತಾಲೂಕು ಹಾಲು ಒಕ್ಕೂಟದ ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಗಂಗಯ್ಯ, ವಿಸ್ತರಣಾಧಿಕಾರಿ ನಾಗರಾಜ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
IPL 2024; ಚೆನ್ನೈ ಕಿಂಗ್ಸ್ಗೆ ಚೇಸಿಂಗ್ ಕಿಂಗ್ ಸವಾಲು
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!