Politics: ರಾಹುಲ್ ಕ್ಷೇತ್ರದ ಮೇಲೆ ಸಿಪಿಐ ಕಣ್ಣು: ಬಿಟ್ಟುಕೊಡಲು ಒತ್ತಡ
ರಾಹುಲ್ ಅಮೇಠಿಯಿಂದ ಸ್ಪರ್ಧೆ ಚರ್ಚೆ ಬೆನ್ನಲ್ಲೇ ಹೊಸ ಬೆಳವಣಿಗೆ
Team Udayavani, Feb 7, 2024, 12:10 AM IST
ಹೈದರಾಬಾದ್: ರಾಹುಲ್ ಗಾಂಧಿ ಸದ್ಯ ಪ್ರತಿನಿಧಿ ಸುತ್ತಿರುವ ವಯನಾಡ್ ಲೋಕಸಭಾ ಕ್ಷೇತ್ರದ ಮೇಲೆ ಸಿಪಿಐ ಕಣ್ಣಿಟ್ಟಿದ್ದು, ಅದನ್ನು ತನಗೆ ನೀಡು ವಂತೆ ಕಾಂಗ್ರೆಸ್ಗೆ ಮನವಿ ಮಾಡುವ ಸಾಧ್ಯತೆಗಳು ಇವೆ. ಕೇರಳಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಇನ್ನೂ ಸ್ಥಾನಗಳ ಹೊಂದಾಣಿಕೆ ಬಗ್ಗೆ ಎಡಪಕ್ಷಗಳ ಜತೆಗೆ ಇನ್ನಷ್ಟೇ ಮಾತು ಕತೆ ನಡೆಸಬೇಕಾಗಿದೆ.
ಹೈದರಾಬಾದ್ನಲ್ಲಿ ನಡೆದಿದ್ದ ಪಕ್ಷದ ಸಭೆಯಲ್ಲಿ ವಯ ನಾಡ್ ಕ್ಷೇತ್ರದ ಬಗ್ಗೆ ಚರ್ಚೆ ನಡೆಸಲಾಗಿಲ್ಲ.
ಆದರೆ, ಕಾಂಗ್ರೆಸ್ ಬಳಿ ಸ್ಥಾನ ಬಿಟ್ಟು ಕೊಡುವಂತೆ ಕೇಳುವ ಸಾಧ್ಯತೆಗಳು ಅಧಿಕವಾ ಗಿವೆ ಎಂದು ಸಿಪಿಐ ನಾಯಕ ಡಿ.ರಾಜಾ ಹೇಳಿದ್ದಾರೆ. 2009, 2019ರಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯೇ ಜಯಗಳಿಸಿದ್ದರು. ಸಿಪಿಐ ಅಭ್ಯರ್ಥಿ ಸೋಲನುಭವಿಸಿದ್ದರು. ಕಳೆದ ಬಾರಿ ಸ್ಪರ್ಧಿಸಿದ್ದ ಡಿ.ರಾಜಾ ಪತ್ನಿ ಆ್ಯನಿಯೇ ವಯನಾಡ್ನಿಂದ ಸಿಪಿಐ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ. ರಾಹುಲ್ ಗಾಂಧಿ ಮುಂದಿನ ಲೋಕಸಭೆ ಚುನಾ ವಣೆಯಲ್ಲಿ ಸಾಂಪ್ರದಾಯಿಕ ಅಮೇಠಿ ಕ್ಷೇತ್ರ ದಿಂದಲೇ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳ ನಡು ವೆಯೇ ಸಿಪಿಐ ಸ್ಥಾನ ಬಿಟ್ಟುಕೊಡುವ ಬಗ್ಗೆ ಮಾತನಾಡಿದೆ.