ಕ್ರಿಕೆಟ್ ಅಕಾಡೆಮಿ: ಭುವನೇಶ್ವರ್ ಯೋಜನೆ
Team Udayavani, Jul 3, 2020, 5:43 AM IST
ಹೊಸದಿಲ್ಲಿ: ಉತ್ತರಪ್ರದೇಶದ ಮೀರಠ್ ನಗರದಲ್ಲಿ ಕ್ರಿಕೆಟ್ ಅಕಾಡೆಮಿಯೊಂದನ್ನು ತೆರೆಯುವುದು ತನ್ನ ಯೋಜನೆ ಎಂಬುದಾಗಿ ಭಾರತ ತಂಡದ ಪೇಸ್ ಬೌಲರ್ ಭುವನೇಶ್ವರ್ ಕುಮಾರ್ ಹೇಳಿದ್ದಾರೆ.
“ನನ್ನ ಕ್ರಿಕೆಟ್ ಬೆಳವಣಿಗೆಯಲ್ಲಿ ಮೀರಠ್ ನಗರದ ಪಾತ್ರ ಬಹಳ ದೊಡ್ಡದು. ಈ ನಗರದ ಋಣ ನನ್ನ ಮೇಲಿದೆ. ಇದಕ್ಕೆ ಮರಳಿ ಏನಾದರೂ ಕೊಡಬೇಕು.
ಇದಕ್ಕಾಗಿ ಇಲ್ಲಿ ಕ್ರಿಕೆಟ್ ಅಕಾಡೆಮಿಯೊಂದನ್ನು ಸ್ಥಾಪಿಸುವುದು ನನ್ನ ಯೋಜನೆ’ ಎಂಬುದಾಗಿ ಲಾಕ್ಡೌನ್ ಕಾರ್ಯಕ್ರಮವೊಂದರ ವೇಳೆ ಭುವಿ ಹೇಳಿದರು.
ಇದೇ ವೇಳೆ ಬಯೋಪಿಕ್ ಕುರಿತಾದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಭುವನೇಶ್ವರ್ ಕುಮಾರ್, “ಮುಂದೊಂದು ದಿನ ನನ್ನ ಕುರಿತಾದ ಚಿತ್ರ ನಿರ್ಮಾಣಗೊಳ್ಳುವುದಿದ್ದರೆ ರಾಜ್ಕುಮಾರ್ ರಾವ್ ನನ್ನ ಪಾತ್ರ ಮಾಡಲಿ; ನನಗೂ ಅವರಿಗೂ ಬಹಳ ಹೋಲಿಕೆ ಇದೆ ಎಂದು ಹೇಳಲಾಗುತ್ತಿದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ