ಚಿಕಿತ್ಸೆಯ ವೆಚ್ಚದ ಕ್ಲೇಮು ನಿರಾಕರಣೆ: ಬಡ್ಡಿ ಸಹಿತ ಪಾವತಿಸಲು ವಿಮಾಸಂಸ್ಥೆಗೆ ಆದೇಶ
Team Udayavani, Feb 21, 2024, 11:18 PM IST
ಮಂಗಳೂರು: ಚಿಕಿತ್ಸಾ ವೆಚ್ಚದ ಕ್ಲೇಮು ನಿರಾಕರಿಸಿದ ವಿಮಾ ಸಂಸ್ಥೆಯೊಂದರ ವಿರುದ್ಧ ಮಂಗಳೂರಿನ ದ.ಕ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದ್ದು, ಬಡ್ಡಿ ಸಹಿತ ಮೊತ್ತವನ್ನು ಪಾವತಿಸುವಂತೆ ಆದೇಶಿಸಿದೆ.
ಮಂಗಳೂರಿನ ವಿವೇಕಾನಂದ ಪಡಿಯಾರ್ ವಿ. ಮತ್ತು ಅವರ ಪತ್ನಿ ಶಾಮಿನಿ ವಂದನಾ ಪಡಿಯಾರ್ ಅವರು ವಿಮಾ ಸಂಸ್ಥೆಯಲ್ಲಿ 5 ಲ.ರೂ. ಮೊತ್ತದ ವಿಮೆ ಮಾಡಿಸಿದ್ದರು. ಅನಂತರ ಶಾಮಿನಿ ವಂದನಾ ಪಡಿಯಾರ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಚಿಕಿತ್ಸೆಗೆ 5,09,676 ರೂ. ವೆಚ್ಚವಾಗಿದ್ದು, ವಿಮಾ ಮೊತ್ತವನ್ನು ಪಾವತಿಸುವಂತೆ ವಿಮಾ ಸಂಸ್ಥೆಯನ್ನು ಕೋರಿದ್ದರು.
ಆದರೆ ಅವರಿಗೆ ಈ ಹಿಂದೆ ಕಾಯಿಲೆಗಳು ಇರುವುದನ್ನು ವಿಮೆ ಮಾಡುವಾಗ ಬಚ್ಚಿಡಲಾಗಿತ್ತು, ಹಾಗಾಗಿ ವಿಮೆ ನೀಡಲು ಸಾಧ್ಯವಿಲ್ಲ ಎಂದು ಸಂಸ್ಥೆ ವಾದಿಸಿತ್ತು. ಆದರೆ ತಾವು ಎಲ್ಲ ಮಾಹಿತಿ ನೀಡಿರುವುದಾಗಿ ವಿಮೆ ಮಾಡಿಸಿದವರು ವಾದಿಸಿದ್ದರು. ಈ ಬಗ್ಗೆ ಗ್ರಾಹಕರ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಲಾಗಿತ್ತು. ಈ ಹಿಂದೆ ಕಾಯಿಲೆ ಇದ್ದುದನ್ನು ತಿಳಿಸದೆ ಇದ್ದ ಬಗ್ಗೆ ದಾಖಲೆ ನೀಡಲು ವಿಮಾ ಸಂಸ್ಥೆ ವಿಫಲವಾಗಿತ್ತು.
ಈ ಹಿನ್ನೆಲೆಯಲ್ಲಿ ಆಯೋಗವು ವಿಮಾ ಸಂಸ್ಥೆಯ ವಿರುದ್ಧ ತೀರ್ಪು ನೀಡಿದೆ. ವಿಮಾ ಸಂಸ್ಥೆಯು 5 ಲ.ರೂ.ಗಳಿಗೆ ಶೇ. 8 ಬಡ್ಡಿ, ವ್ಯಾಜ್ಯದ ಖರ್ಚು ಮತ್ತು ಪರಿಹಾರವಾಗಿ 35,000 ರೂ. ಸೇರಿದಂತೆ ಒಟ್ಟು 6,15,000 ರೂ. ಪಾವತಿಸುವಂತೆ ಆಯೋಗವು ಆದೇಶದಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ