ದಿನಕ್ಕೆ ಮೂರು ಬಾರಿ ಈರುಳ್ಳಿ ತಿಂದರೆ ಕೊರೊನಾ ವೈರಸ್ ಬರಲ್ಲ: ಸಿಎಂ ಇಬ್ರಾಹಿಂ
Team Udayavani, Mar 10, 2020, 4:03 PM IST
ಬೆಂಗಳೂರು: ಕೊರೊನಾ ವೈರಸ್ ಭಾರತದಲ್ಲಿದಿನೇ ದಿನೇ ಹೆಚ್ಚಾಗುತ್ತಿದ್ದು, ಕರ್ನಾಟಕದಲ್ಲೂ ಇಂದು ಮತ್ತೆ ಮೂರು ಪ್ರಕರಣಗಳು ಖಚಿತವಾಗಿದೆ. ಇದರ ಮಧ್ಯೆ ಮಾಜಿ ಸಚಿವ ಸಿ ಎಂ ಇಬ್ರಾಹಿಂ ಕೊರೊನಾ ವೈರಸ್ ಗೆ ನಾಟಿ ಔಷಧಿ ಸಲಹೆ ನೀಡಿದ್ದಾರೆ.
ಈರುಳ್ಳಿಗೆ ಉಪ್ಪು ಹಾಕಿಕೊಂಡು ಸೇವನೆ ಮಾಡಿ. ಹೀಗೆ ದಿನಕ್ಕೆ ಮೂರು ಬಾರಿ ಈರುಳ್ಳಿ ತಿಂದರೆ ಕೊರೊನಾ ವೈರಸ್ ಬರುವುದಿಲ್ಲ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಕೋರಾನಾ ವೈರಸ್ ಅನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ತಪಾಸಣಾ ಕೇಂದ್ರಗಳಿಲ್ಲ. ಚೀನಾ ಸೇರಿದಂತೆ ಹೊರರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಕಂಡುಹಿಡಿಯಲು ತಪಾಸಣಾ ಕೇಂದ್ರಗಳಿವೆ. ನಮ್ಮ ರಕ್ತಪರೀಕ್ಷೆ ನಡೆಸಿ ಕೊರೊನಾ ವೈರಸ್ ಪತ್ತೆ ಹಚ್ಚುವುದರೊಳಗೆ ರೋಗಿ ಸಾವನ್ನಪ್ಪಿರುತ್ತಾನೆ ಎಂದರು.
ವಿಶೇಷವಾಗಿ ಗ್ರಾಮೀಣ ಪ್ರದೇಶಗಳತ್ತ ಹೆಚ್ಚಿನ ಗಮನ ಹರಿಸಬೇಕಾಗಿದೆ. ಅದಲ್ಲದೇ ನಮ್ಮ ದೇಶದ ಆರ್ಥಿಕತೆಗೂ ಕೊರೋನಾ ವೈರಸ್ ಬಂದಿದೆ. ಇದನ್ನು ಸರಿ ಮಾಡುವತ್ತ ಪ್ರಧಾನಿ ಮೋದಿ ಮುಂದಾಗಬೇಕು ಎಂದು ಸಿ ಎಂ ಇಬ್ರಾಹಿಂ ಒತ್ತಾಯಿಸಿದ್ದಾರೆ.