ಸಾಕ್ಷಿ ನಾಶಕ್ಕೆ ಮೊಬೈಲ್ ಒಡೆದು ಹಾಕಿದ ದಿವ್ಯಾ ಹಾಗರಗಿ
Team Udayavani, May 1, 2022, 7:25 AM IST
ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಆರೋಪದಡಿ ಬಂಧಿತ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸಾಕ್ಷಿ ನಾಶಪಡಿಸಲು ತನ್ನ ಬಳಿಯಿದ್ದ ಮೊಬೈಲ್ ಅನ್ನು ಒಡೆದು ಹಾಕಿದ್ದಾರಂತೆ.
ಹನ್ನೊಂದು ದಿನಗಳ ಕಾಲ ಸಿಐಡಿ ವಶದಲ್ಲಿರುವ ಆಕೆ, ಶನಿವಾರ ವಿಚಾರಣೆ ವೇಳೆ ಮೊಬೈಲ್ ಎಸೆದಿರುವುದು, ಅಕ್ರಮದಲ್ಲಿ ತಮ್ಮ ಪಾತ್ರ ಸೇರಿದಂತೆ ಇತರ ಪ್ರಮುಖ ಅದರಲ್ಲೂ ಅಚ್ಚರಿ ಅಂಶಗಳನ್ನು ಬಾಯಿಬಿಟ್ಟಿದ್ದು ಅಧಿಕಾರಿಗಳು ದಾಖಲು ಮಾಡಿಕೊಳ್ಳುತ್ತಿದ್ದಾರೆ.
ಆಳವಾಗಿ ತನಿಖೆ
ಮೊಬೈಲ್ ಎಸೆದು ಒಡೆದು ಹಾಕಿರುವುದನ್ನು ಗಮನಿಸಿದರೆ ತನಿಖೆ ನಡೆಸುವವರಿಗೆ ಸಾಕ್ಷé ಸಿಗದಂತೆ ಮಾಡುವ ಶಂಕೆ ವ್ಯಕ್ತವಾಗಿದೆ. ಮೊಬೈಲ್ ಒಡೆದು ಹಾಕಿರುವ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹ ಜತೆಗೆ, ಈ ಮೊಬೈಲ್ ತುಣುಕುಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಸಿಐಡಿ ತಂಡ ಕಾರ್ಯೋನ್ಮುಖವಾಗಿದೆ. ಅಲ್ಲದೇ ದಿವ್ಯಾ ಅವರ ಕಳೆದ 18 ದಿನಗಳ ಮಾಹಿತಿಯನ್ನು ಸಂಪೂರ್ಣ ಕಲೆ ಹಾಕುವುದರ ಮೂಲಕ ತನಿಖೆಯ ಆಳ ವಿಸ್ತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಒದ್ದಾಡಿ ಅತ್ತರಂತೆ
ಪ್ರಕರಣ ದಾಖಲಾಗುತ್ತಿದ್ದಂತೆ ಮಹಾರಾಷ್ಟ್ರದ ಪುಣೆಯ ಹತ್ತಿರದಲ್ಲಿ ತಲೆಮರೆಸಿಕೊಂಡಿದ್ದ ದಿವ್ಯಾರನ್ನು ಬಂಧಿಸಲು ಸಿಐಡಿ ತಂಡ ಗುರುವಾರ ತಡರಾತ್ರಿ ಹೋಗಿದ್ದಾಗ ಆಕೆ ನೆಲಕ್ಕೆ ಬಿದ್ದು ಒದ್ದಾಡಿ ಅತ್ತಿದ್ದಾಳೆ. ಈಗ ಅತ್ತರೇನು ಪ್ರಯೋಜನ? ತಪ್ಪು ಮಾಡುವಾಗಲೇ ಪರಿಣಾಮ ಅರಿಯಬೇಕಿತ್ತು ಎಂದು ತಿಳಿ ಹೇಳಿ ಮಹಿಳಾ ಪೊಲೀಸ್ ಅಧಿಕಾರಿಗಳು ಕರೆ ತಂದರು ಎನ್ನಲಾಗಿದೆ.
ಪ್ರತ್ಯೇಕ ವಿಚಾರಣೆ
ದಿವ್ಯಾ ಮತ್ತು ಬಂಧಿತ ಅಕ್ರಮ ಮರಳು ದಂಧೆಕೋರ ಸುರೇಶ ಕಾಟೆಗಾಂವ್, ಸಹಾಯ ಮಾಡಿದ ಕಾಳಿದಾಸ, ಜ್ಞಾನಜ್ಯೋತಿ ಶಾಲೆ ಸಿಬಂದಿ ಅರ್ಚನಾ, ಸುನೀತಾ, ಚಾಲಕ ಸದ್ದಾಂ ಹಾಗೂ ನಗರಸಭೆ ಉದ್ಯೋಗಿ ಜ್ಯೋತಿ ಪಾಟೀಲ್ ವಿಚಾರಣೆಯನ್ನು ಸಿಐಡಿ ತಂಡದವರು ಪ್ರತ್ಯೇಕವಾಗಿ ನಡೆಸಿದರು. ಈ ವೇಳೆ ಹಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ ಎಂದು ಗೊತ್ತಾಗಿದೆ.
ನ್ಯಾಯಾಲಯ ಆದೇಶದಂತೆ 11 ದಿನ ಸಿಐಡಿ ಕಸ್ಟಡಿಗೆ ಪಡೆದ ಬೆನ್ನಲ್ಲೇ ಬಂಧಿತ ಮಹಿಳೆಯರನ್ನು ಶುಕ್ರವಾರ ರಾತ್ರಿ ನಗರದ ಆಳಂದ ರಸ್ತೆಯಲ್ಲಿರುವ ಮಹಿಳಾ ನಿಲಯದಲ್ಲಿ ವಾಸ್ತವ್ಯಕ್ಕೆ ಬಿಡಲಾಯಿತು. ಶನಿವಾರ ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆ ಮಾಡಿಸಿದ ಅನಂತರ ಐವಾನ್-ಇ-ಶಾಹಿ ಅತಿಥಿಗೃಹಕ್ಕೆ ಕರೆತಂದು ವಿಚಾರಣೆ ನಡೆಸಲಾಯಿತು. ಸಂಜೆಯಾಗತ್ತಲೇ ಮಹಿಳೆಯರನ್ನು ಮತ್ತೆ ಮಹಿಳಾ ನಿಲಯಕ್ಕೆ ಕಳುಹಿಸಿ ಕೊಟ್ಟರೆ, ಉಳಿದವರನ್ನು ಎಂ.ಬಿ. ನಗರ ಠಾಣೆ ಸೆಲ್ಗೆ ರವಾನಿಸಲಾಯಿತು.
ದಿವ್ಯಾಗೆ ಎಸಿ ಬೇಕಂತೆ
ಇನ್ನು ದಿವ್ಯಾ ಶುಕ್ರವಾರ ರಾತ್ರಿ ತಂಗಿದ್ದ ನಗರದ ಮಹಿಳಾ ನಿಲಯದಲ್ಲಿ ಫ್ಯಾನ್ ಮಾತ್ರ ಇದೆ. ಬೇಸಿಗೆ ಬಿಸಿಲು ಹೆಚ್ಚಿದ್ದರಿಂದ ಎಸಿ ಬೇಡಿಕೆ ಇಟ್ಟಿದ್ದರಂತೆ. ಇನ್ನೊಂದೆಡೆ ನ್ಯಾಯಾಲಯ ಆದೇಶದಂತೆ ದಿವ್ಯಾ, ಅರ್ಚನಾ, ಸುನಂದಾ, ಜ್ಯೋತಿ ಅವರನ್ನು ಶುಕ್ರವಾರ ರಾತ್ರಿ ಆಳಂದ ರಸ್ತೆಯ ಮಹಿಳಾ ನಿಲಯದಲ್ಲಿರಿಸಲು ಸಿಐಡಿ ತಂಡ ಕರೆದುಕೊಂಡು ಹೋಗುವಷ್ಟರಲ್ಲಿ ಅಲ್ಲಿಗೆ ಆಗಮಿಸಿದ್ದ ದಿವ್ಯಾ ಬೆಂಬಲಿಗರು, ಈ ನಿಲಯದಲ್ಲಿ ಫ್ಯಾನ್ ಮಾತ್ರ ಇದೆ. ಬೇಸಿಗೆಯಲ್ಲಿ ಅವರಿಗೆ ಕಷ್ಟವಾಗುತ್ತದೆ. ಕೂಲರ್ ಅಥವಾ ಎಸಿ ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ.
12 ಮಂದಿ ಬಂಧನ
ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ನಗರದಲ್ಲಿ 12 ಮಂದಿಯನ್ನು ಬಂಧಿಸಿದ್ದು, ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ದೊರೆತಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಬೆಂಗಳೂರು ಮತ್ತು ರಾಮನಗರ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಹನ್ನೆರಡು ಮಂದಿಯನ್ನು ಬಂಧಿಸಿದ್ದು, ಹತ್ತು ಜನರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.ಇದೇ ವೇಳೆ, 25 ಒಎಂಆರ್ ಶೀಟ್ಗಳಲ್ಲಿ ವ್ಯತ್ಯಾಸಕಂಡು ಬರುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಕಲಬುರಗಿ ಕೇಂದ್ರಕ್ಕೆ ಮಾತ್ರ ಸೀಮಿತವಾಗಿದ್ದ ಅಕ್ರಮ ಇದೀಗ ಬೆಂಗಳೂರು, ರಾಮನಗರ ಹಾಗೂ ರಾಜ್ಯದ ಇತರೆ ಕೇಂದ್ರಗಳ ವ್ಯಾಪ್ತಿಯಲ್ಲಿ ಪತ್ತೆಯಾಗುತ್ತಿದ್ದು ಹಗರಣದ ಆಳ-ಅಗಲ ತಿಳಿಯದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
MUST WATCH
ಹೊಸ ಸೇರ್ಪಡೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು