ಮತ್ತೆರಡು ಹಡಗುಗಳ ಮೇಲೆ ಡ್ರೋನ್ ದಾಳಿ: ಭಾರತದ್ದಲ್ಲ ಎಂದು ನೌಕಾಪಡೆ ಸ್ಪಷ್ಟನೆ
ಎಂವಿ ಸಾಯಿಬಾಬಾ ಹಡಗು ಭಾರತದ್ದು ಎಂದಿದ್ದ ಅಮೆರಿಕ- ಅದು ಗ್ಯಾಬನ್ ದೇಶದ ಧ್ವಜ ಹೊಂದಿರುವಂಥದ್ದು ಎಂದ ಭಾರತ
Team Udayavani, Dec 24, 2023, 8:54 PM IST
ನ್ಯೂಯಾರ್ಕ್: ಕೆಂಪು ಸಮುದ್ರದಲ್ಲಿ ಮತ್ತೆ ಎರಡು ಹಡಗುಗಳು ಯೆಮೆನ್ನ ಹೌತಿ ಬಂಡುಕೋರರ ಡ್ರೋನ್ ದಾಳಿಗೆ ಒಳಗಾಗಿದೆ. ಈ ಪೈಕಿ ಒಂದು ಹಡಗು ಭಾರತದ್ದು ಎಂದು ಅಮೆರಿಕ ಹೇಳಿದ್ದು, ಅದನ್ನು ತಿರಸ್ಕರಿಸಿರುವ ಭಾರತೀಯ ನೌಕಾಪಡೆ, ಆ ಹಡಗು ಭಾರತದ್ದಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಹಡಗಿನಲ್ಲಿದ್ದ ಎಲ್ಲ 25 ಸಿಬ್ಬಂದಿಯೂ ಭಾರತೀಯರಾಗಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದೂ ಮಾಹಿತಿ ನೀಡಿದೆ.
ಕಚ್ಚಾ ತೈಲ ಹೊತ್ತೂಯ್ಯುತ್ತಿದ್ದ ಎಂವಿ ಸಾಯಿಬಾಬಾ ಹೆಸರಿನ ಹಡಗು ಮತ್ತು ಎಂ.ವಿ. ಬ್ಲಾಮನೇನ್ ಎಂಬ ಹಡಗುಗಳ ಮೇಲೆ ಬಂಡುಕೋರರು ಡ್ರೋನ್ ದಾಳಿ ನಡೆಸಿದ್ದರು. ಈ ವೇಳೆ ಎರಡೂ ನೌಕೆಗಳು ತಾವು ಅಪಾಯದಲ್ಲಿದ್ದೇವೆ ಎಂಬ ಸಂದೇಶವನ್ನು ಅಮೆರಿಕದ ನೌಕಾಪಡೆಗಳ ಕೇಂದ್ರ ಕಮಾಂಡ್ಗೆ ಕಳುಹಿಸಿದ್ದವು. ಬ್ಲಾಮನೇನ್ ಹಡಗು ನಾರ್ವೆ ಧ್ವಜವನ್ನು ಹೊಂದಿದ್ದರೆ, ಸಾಯಿಬಾಬಾ ಭಾರತದ ಧ್ವಜ ಹೊಂದಿದೆ. ಹೀಗಾಗಿ ಸಾಯಿಬಾಬಾ ಹಡಗು ಭಾರತದ್ದು ಎಂದು ಅಮೆರಿಕ ನೌಕಾಪಡೆ ಹೇಳಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ ಭಾರತದ ನೌಕಾಪಡೆ, “ಎಂವಿ ಸಾಯಿಬಾಬಾ ಹಡಗು ಭಾರತದ್ದಲ್ಲ. ಅದು ಮಧ್ಯ ಆಫ್ರಿಕಾದ ಗ್ಯಾಬನ್ ದೇಶಕ್ಕೆ ಸೇರಿದ್ದು. ಆದರೆ ಈ ಹಡಗು ಭಾರತದ ಶಿಪ್ಪಿಂಗ್ ನೋಂದಣಿ ಕೇಂದ್ರದಿಂದ ಪ್ರಮಾಣಪತ್ರ ಪಡೆದಿದೆ ಅಷ್ಟೆ’ ಎಂದು ಹೇಳಿದೆ. ಜಗತ್ತಿನ ಯಾವುದೇ ಹಡಗು ಯಾವುದೇ ದೇಶದ ನೋಂದಣಿ ಪ್ರಾಧಿಕಾರದಿಂದ ಪ್ರಮಾಣಪತ್ರ ಪಡೆಯಬಹುದಾಗಿದೆ.
ಈ ಎರಡು ಹಡಗುಗಳ ಪೈಕಿ ಬ್ಲಾಮನೇನ್ ನೌಕೆಯು ಸ್ವಲ್ಪದರಲ್ಲೇ ಡ್ರೋನ್ ದಾಳಿಯಿಂದ ತಪ್ಪಿಸಿಕೊಂಡಿದೆ. ಆದರೆ, ಸಾಯಿಬಾಬಾ ಹಡಗಿನ ಮೇಲೆ ಡ್ರೋನ್ ದಾಳಿ ನಡೆದರೂ, ಯಾವುದೇ ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿ ಆಗಿಲ್ಲ ಎಂದೂ ಅಮೆರಿಕ ಸ್ಪಷ್ಟಪಡಿಸಿದೆ.
ಮಂಗಳೂರಿಗೆ ಬರುತ್ತಿದ್ದ ಹಡಗಿನ ಮೇಲೆ ದಾಳಿ: ತನಿಖೆ ಶುರು
ಅರಬ್ಬೀ ಸಮುದ್ರದಲ್ಲಿ ಶನಿವಾರ ಮಂಗಳೂರಿಗೆ ಕಚ್ಚಾ ತೈಲ ಹೊತ್ತು ತರುತ್ತಿದ್ದ ಹಡಗಿನ ಮೇಲೆ ನಡೆದ ಡ್ರೋನ್ ದಾಳಿ ಕುರಿತು ಭಾರತೀಯ ನೌಕಾಪಡೆ ತನಿಖೆ ಆರಂಭಿಸಿದೆ. 20 ಮಂದಿ ಭಾರತೀಯ ಸಿಬ್ಬಂದಿಯಿದ್ದ ಎಂವಿ ಚೆಮ್ ಫ್ಲುಟೋ ಹಡಗು ಸದ್ಯ ಸುರಕ್ಷಿತವಾಗಿದ್ದು, ಭಾರತೀಯ ಕರಾವಳಿ ರಕ್ಷಕ ಪಡೆಯ ಐಸಿಜಿಎಸ್ ವಿಕ್ರಂ ನೌಕೆಯ ಭದ್ರತೆಯೊಂದಿಗೆ ಅದು ಈಗ ಮುಂಬೈ ಕರಾವಳಿಯತ್ತ ಸಂಚರಿಸಲು ಆರಂಭಿಸಿದೆ. ಡ್ರೋನ್ ದಾಳಿ ನಡೆಸಿದ್ದು ಯಾರು, ಹೇಗೆ ಎಂಬ ಬಗ್ಗೆ ನೌಕಾಪಡೆ ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಘಟನೆಯಲ್ಲಿ ಏನಾಯಿತು?
– 2 ಸರಕು ಹಡಗುಗಳ ಮೇಲೆ ಬಂಡುಕೋರರಿಂದ ದಾಳಿ.
– ತೊಂದರೆಗೆ ಒಳಾಗದವರಿಂದ ಅಮೆರಿಕ ನೌಕಾಪಡೆಗೆ ಸಂದೇಶ ರವಾನೆ
– ಅಮೆರಿಕ ಸರ್ಕಾರದಿಂದ ಒಂದು ಹಡಗು ಭಾರತದ್ದು ಎಂದು ಹೇಳಿಕೆ
– ಹೇಳಿಕೆ ನಿರಾಕರಿಸಿದ ಕೇಂದ್ರ ಸರ್ಕಾರ; ಹಡಗು ಗ್ಯಾಬನ್ ದೇಶದ್ದು ಎಂದು ಸ್ಪಷ್ಟನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್