ಅಬಕಾರಿ ಪೊಲೀಸರ ಭೇಟೆ:10 ಲಕ್ಷ ರೂ ಮೌಲ್ಯದ ನಕಲಿ ಮದ್ಯ ವಶ;3 ಮಂದಿ ಬಂಧನ


Team Udayavani, Jan 22, 2022, 7:15 PM IST

1-wqqewe

ಕುಣಿಗಲ್ : ಪ್ರತ್ಯೇಕ ಎರಡು ಪ್ರಕರಣಗಳನ್ನು ಬೇಧಿಸಿದ ಕುಣಿಗಲ್ ಅಬಕಾರಿ ಪೊಲೀಸರು ಮೂರು ಮಂದಿ ಆರೋಪಿಗಳನ್ನು ಬಂಧಿಸಿ 10.93 ಲಕ್ಷ ರೂ ಬೆಲೆ ಬಾಳುವ 264 ಲೀಟರ್ ನಕಲಿ ಮದ್ಯ, ಮದ್ಯಕ್ಕೆ ಬಳಸುವ ಸಾಮಗ್ರಿ, ಸೀಲಿಂಗ್ ಮಶಿನ್‌ನನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ನಗರದ ವಾಸಿಗಳಾದ ಜನಾರ್ಧನ್ (೫೩), ಸುರೇಶ್ (೪೬) ಹಾಗೂ ಶ್ರೀನಿವಾಸ್ (೪೬) ಬಂಧಿತ ಆರೋಪಿಗಳು.

ಘಟನೆ ವಿವರ

ಅಬಕಾರಿ ಉಪ ಆಯುಕ್ತೆ ಶೈಲಜಾ.ಎ.ಕೋಟೆ, ನಿರ್ದೇಶನದಂತೆ ಅಬಕಾರಿ ಅಧೀಕ್ಷಕ ಕೆ.ಸಿ.ಸಿದ್ದಲಿಂಗಸ್ವಾಮಿ ಅವರ ನೇತೃತ್ವದಲ್ಲಿ ಕುಣಿಗಲ್ ಅಬಕಾರಿ ನೀರೀಕ್ಷಕ ಎ.ಕೆ.ನವೀನ್ ತಾಲೂಕಿನ ಎಡಿಯೂರು ಹೋಬಳಿ ರಾಷ್ಟ್ರೀಯಯ ೭೫ ರ ಸಿಂಗೋನಹಳ್ಳಿ ಅಗ್ರಹಾರ ಗೇಟ್ ಮೇನಕಾ ಫ್ಯಾಮಿಲಿ ಡಾಬ ಬಳಿ ಗಸ್ತಿನಲ್ಲಿ ಇದ್ದ ವೇಳೆ ಟಾಟಾ ಸುಮಾ ವಾಹನದಲ್ಲಿ ಬಂದ ಮೈಸೂರು ನಗರದ ವಾಸಿ ಜನಾರ್ಧನ್ ಅವರ ಬಗ್ಗೆ ಅನುಮಾನ ಬಂದು ಅಬಕಾರಿ ಪೊಲೀಸರು ವಾಹನವನ್ನು ತಡೆದು ಪರಿಶೀಲಿಸಿದ್ದಾಗ, ಅಕ್ರಮವಾಗಿ172  ಲೀಟರ್ ನಕಲಿ ಮಧ್ಯವನ್ನು ಮೈಸೂರಿನಿಂದ ನಾಗಮಂಗಲ ಮಾರ್ಗವಾಗಿ ನೆಲಮಂಗಲಕ್ಕೆ ಸರಬರಾಜು ಮಾಡುತ್ತಿರುವುದು ಪತ್ತೆ ಆಯಿತು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಅಬಕಾರಿ ಪೊಲೀಸರು, ಆರೋಪಿ ಜನಾರ್ಧನನ್ನು ವಿಚಾರಣೆಗೆ ಒಳಪಡಿಸಿದರು, ಮತ್ತೊಬ್ಬ ಆರೋಪಿ ಸುರೇಶ್ ಇರದಲ್ಲಿ ಪಾಲ್ಗೊಂಡಿದ್ದಾನೆ ಎಂಬ ಸುಳಿವಿನ ಮೇರೆಗೆ ಮೈಸೂರು ಗುರೂರು ಪಡಿಂತ್ ದೀನ್ ದಯಾಳ್ ಉಪಾಧ್ಯಾಯ ನಗರ, 5 ನೇ ಹಂತ ಮನೆ ನಂ 266  ರರಲ್ಲಿರುವ ಆರ್‌ಸಿಸಿ ಮನೆಯ ಮೇಲೆ ದಾಳಿ ನಡೆಸಲಾಗಿ ಸುರೇಶ್ ಅವರ ಮನೆಯಲ್ಲಿ 7000 ಓಲ್ಡ್ ಟವರಿನ್ ವಿಸ್ಕಿ, ನಕಲಿ ಖಾಲಿ ಟೆಟ್ರಾಪ್ಯಾಕ್‌ಗಳು, 7905 ನಕಲಿ ಅಡೆಸಿವ್ ಲೇಬರ್‌ಗಳು, 4.5 ಲೀಟರ್ ನಕಲಿ ಮದ್ಯ,650  ಲೀಟರ್ ಮಧ್ಯಸಾರ, 125  ಖಾಲಿ ರಟ್ಟಿನ ಪೆಟ್ಟಿಗೆ, 5  ಕಬ್ಬಿಣದ ಹೀಟ್, ಸೀಲಿಂಗ್ ಮಶಿನ್, 45  ಲೀಟರ್ ನಕಲಿ ಬ್ಲೆಂಡ್ ಮದ್ಯ, ನಕಲಿ ಮಧ್ಯ ತಯಾರಿಕೆಗೆ ಬಳಸುವ ಇತರೆ ಸಾಮಗ್ರಿಳು ಹಾಗೂ ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆದರು.

ಮತ್ತೊಂದು ಪ್ರಕರಣವನ್ನು ಭೇದಿಸಿದ ಅಬಕಾರಿ ಪೊಲೀಸರು ತಾಲೂಕಿನ ಎಡಿಯೂರು ಹೋಬಳಿ ಹೇಮಾವತಿ ಸರ್ಕಲ್‌ನ ಪಾಕಶಾಲ ಹೋಟೆಲ್ ಮುಂಭಾಗದ ರಸ್ತೆ ಪಕ್ಕದಲ್ಲಿ ಮೈಸೂರು ನಗರದ ಶ್ರೀನಿವಾಸ್ ಎಂಬುವನ್ನು ಆಟೋ ರಿಕ್ಷಾದಲ್ಲಿ ೮೬ ಲೀಟರ್ ನಕಲಿ ಮಧ್ಯ ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ವಾಹನ ಜಪ್ತಿ ಮಾಡಿಕೊಂಡು, ಅಬಕಾರಿ ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪ ನಿರೀಕ್ಷಕ ಕೆ.ಮಲ್ಲಿಕಾರ್ಜುನಯ್ಯ, ನಿರೀಕ್ಷಕರಾದ ಟಿ.ಜಿ.ದಿವ್ಯಶ್ರೀ, ಅರುಣ್‌ಕುಮಾರ್, ಮುಖ್ಯಪೇದೆಗಳಾದ ಕೆ.ಶಿವರಾಮ್, ಪ್ರಭಾಕರ್, ಲೀಲಾ, ಪೇದೆಗಳಾದ ಬಿ.ಎಂ.ಗಂಗಾಧರಯ್ಯ, ಜಿ.ವಿ.ತಿರುಮಲೇಗೌಡ, ವೈಜುನಾಥ ಮಲಘಾಣ, ಮಂಜುನಾಥ್, ಯೋಗಿಶ್, ಸಂತೋಷಕುಮಾರ್ ಇದ್ದರು.

ಟಾಪ್ ನ್ಯೂಸ್

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur; ನನ್ನನ್ನು ಬರಿಗೈಯಲ್ಲಿ ಕಳುಹಿಸಬೇಡಿ: ಸೋಮಣ್ಣ

Tumkur; ನನ್ನನ್ನು ಬರಿಗೈಯಲ್ಲಿ ಕಳುಹಿಸಬೇಡಿ: ಸೋಮಣ್ಣ

12-pavagada

Pavagada: ರಸ್ತೆ ಅಪಘಾತ; ವ್ಯಕ್ತಿ ಸ್ಥಳದಲ್ಲೇ ಸಾವು

ಮನೆಗೆ ಬರುತ್ತೇನೆಂದ ಸೋಮಣ್ಣಗೆ “ಬರಬೇಡಿ’ ಎಂದ ಮಾಧುಸ್ವಾಮಿ!

ಮನೆಗೆ ಬರುತ್ತೇನೆಂದ ಸೋಮಣ್ಣಗೆ “ಬರಬೇಡಿ’ ಎಂದ ಮಾಧುಸ್ವಾಮಿ!

1-qweqewq

Koratagere;ಕಾರು ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು: ಇಬ್ಬರು ಗಂಭೀರ

9-pavagada

Pavagada: ಪತ್ನಿಯನ್ನು ಹತ್ಯೆ ಮಾಡಿ ಪತಿ ಪರಾರಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.