ಫೆ. 17-19: ವಂಡಾರು ಕೊಕ್ಕನಬೈಲು ದೇಗುಲ ಲೋಕಾರ್ಪಣೆ, ನಾಗಮಂಡಲ
ಬಾಯರಿ ಕುಟುಂಬಸ್ಥರ ಮೂಲ ನಾಗ ಸಾನ್ನಿಧ್ಯ
Team Udayavani, Feb 15, 2024, 11:51 PM IST
ಕೋಟ: ಬ್ರಹ್ಮಾವರ ತಾಲೂಕಿನ ಕೊಕ್ಕನಬೈಲು ವಂಡಾರಿನಲ್ಲಿರುವ ಬಾಯರಿ ಕುಟುಂಬಸ್ಥರ ಮೂಲ ನಾಗದೇವರ ಸಾನ್ನಿಧ್ಯದಲ್ಲಿ ಕಮಲಪುಷ್ಪ ಆಕಾರದ ಶಿಲಾಮಯ, ವಿಶೇಷ ಕಾಷ್ಠಶಿಲ್ಪದ ದೇಗುಲವನ್ನು ವಂಡಾರು ರಮೇಶ್ ಬಾಯರಿ ಅವರ ನೇತೃತ್ವದಲ್ಲಿ ನಿರ್ಮಿಸಿದ್ದು ಫೆ. 17ರಿಂದ 19ರ ವರೆಗೆ ಲೋಕಾರ್ಪಣೆ ಹಾಗೂ ಅಷ್ಟಪವಿತ್ರ ನಾಗಮಂಡಲೋತ್ಸವ ಜರಗಲಿವೆ.
ಫೆ. 17ರಂದು ಬೆಳಗ್ಗಿನಿಂದ ರಾತ್ರಿ ತನಕ ವಿವಿಧ ಹೋಮಗಳು, ಕಲಶಸ್ಥಾಪನೆ, ಬಿಂಬಶುದ್ಧಿ ಶಯ್ನಾಕಲ್ಪಾರಾಧನೆ ಜರಗಲಿದೆ. ಫೆ. 18ರಂದು ಬೆಳಗ್ಗೆ ಶ್ರೀನಾಗದೇವರ ಪುನಃ ಪ್ರತಿಷ್ಠಾ ಮಹೋತ್ಸವ, ಹೋಮಗಳು ಜರಗಲಿದ್ದು, ಸಂಜೆ 5.30ಕ್ಕೆ ಶೃಂಗೇರಿ ಜಗದ್ಗುರುಗಳಾದ ಕಿರಿಯ ಯತಿ ಶ್ರೀ ವಿಧುಶೇಖರಭಾರತಿ ಮಹಾಸ್ವಾಮೀಜಿ ಆಗಮನ, ಪ್ರಾಯಶ್ಚಿತ ಆಶ್ಲೇಷಾ ಬಲಿ, ಜಗದ್ಗುರುಗಳಿಂದ ಚಂದ್ರಮೌಳೀಶ್ವರ ದೇವರ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಫೆ. 19ರಂದು ಬೆಳಗ್ಗೆ ಜಗದ್ಗುರುಗಳಿಂದ ಶ್ರೀದೇವರಿಗೆ ಕುಂಭಾಭಿಷೇಕ ಪೂರ್ವಕ ಮಹಾಪೂಜೆ, ಶಿಖರಾಭಿಷೇಕ, ಪಾದಪೂಜೆ, ಭಿನ್ನವತ್ತಳೆ ಸಮರ್ಪಣೆ, ಆಶೀರ್ವಚನ, ಫಲಮಂತ್ರಾಕ್ಷತೆ ಮತ್ತು ಮಹಾ ಅನ್ನಸಂತರ್ಪಣೆ, ಹಾಲಿಟ್ಟು ಸೇವೆ, ಸಂಜೆ 5.30ರಿಂದ ಅಷ್ಟಪವಿತ್ರ ನಾಗಮಂಡಲೋತ್ಸವ ಸೇವೆ ನಡೆಯಲಿದ್ದು, ಅನಂತರ ಪ್ರಸಾದ ವಿತರಣೆ, ಆಶೀರ್ವಚನ, ಮಂತ್ರಾಕ್ಷತೆ ವಿತರಣೆ ನಡೆಯಲಿದೆ. ಫೆ. 19ರಂದು ಅಪರಾಹ್ನ ಪಂಡಿತ್ ಡಾ| ಪ್ರವೀಣ ಗೋಡ್ಕಿಂಡಿ ಅವರಿಂದ ಕೊಳಲು ವಾದನವಿದೆ ಎಂದು ದೇವಸ್ಥಾನದ ಮುಖ್ಯಸ್ಥ ವಂಡಾರು ರಮೇಶ್ ಬಾಯರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ