Politics: ಗೀತಾ ಪಠಣ; ಬಿಜೆಪಿ-ಟಿಎಂಸಿ ನಡುವೆ ಹೊಸ ವಿವಾದದ ಕಿಡಿ
Team Udayavani, Dec 24, 2023, 11:12 PM IST
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭಾನುವಾರ ನಡೆದ ಭಗವದ್ಗೀತೆ ಸಾಮೂಹಿಕ ಪಠಣ ಕಾರ್ಯಕ್ರಮವು ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವೆ ಹೊಸ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಹಿಂದೂಗಳ ಐಕ್ಯತೆಗಾಗಿ ಈ ಕಾರ್ಯ ಕ್ರಮ ಎಂದು ಬಿಜೆಪಿ ಹೇಳಿಕೊಂಡರೆ, ಇದೊಂದು ರಾಜಕೀಯ ಕಾರ್ಯಕ್ರ ಮವೆಂದು ಟಿಎಂಸಿ ಕಿಡಿ ಕಾರಿದೆ. ವಿಧಾನಸಭೆ ವಿಪಕ್ಷ ನಾಯಕ ಸುವೇಂದು ಅಧಿ ಕಾರಿ, ಭಗವದ್ಗೀತೆ ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಕೊಡುಗೆ. ಇದರ ಮೇಲೆ ನಂಬಿಕೆ ಇಲ್ಲದವರು ಅಪಹಾಸ್ಯ ಮಾಡುತ್ತಾರೆ.
ಈ ಕಾರ್ಯಕ್ರಮ ಬರೀ ಗೀತೆ ಪಠಣಕ್ಕೆ ಸಾಕ್ಷಿಯಾಗಿಲ್ಲ, ವಿಭಜಕ ಶಕ್ತಿಗಳ ವಿರುದ್ಧ ಹಿಂದೂಗಳು ಒಂದಾಗುವುದಕ್ಕೆ ಮುನ್ನುಡಿಯಾಗಿದೆ ಎಂದಿದ್ದರು. ಇದಕ್ಕೆ ಟಿಎಂಸಿ ನಾಯಕ ಉದಯನ್ ಗುಹಾ , ಬಿಜೆಪಿಗೆ ಧರ್ಮದೊಂದಿಗೆ ರಾಜಕೀಯ ಬೆರೆಸುವ ಅಭ್ಯಾಸವಿದೆ. ಇದರ ಬದಲಿಗೆ ಫುಟ್ಬಾಲ್ ಪಂದ್ಯವನ್ನೇ ಆಯೋಜಿಸಬಹುದಿತ್ತು ಎಂದು ಟೀಕಿಸಿದ್ದಾರೆ.