Session: ಗ್ರಾ.ಪಂ. ಸದಸ್ಯರಿಗೆ “ಉಚಿತ ಬಸ್ ಪಾಸ್” ಪ್ರಸ್ತಾವ
Team Udayavani, Feb 14, 2024, 10:52 PM IST
ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತ್ ಸದಸ್ಯರುಗಳಿಗೆ ಉಚಿತ ಬಸ್ ಪಾಸ್ ನೀಡುವ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಾಂಗ್ರೆಸ್ನ ಮಂಜುನಾಥ್ ಭಂಡಾರಿ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮ ಪಂಚಾಯತ್ಗಳ ಸುಧಾರಣೆಗೆ ಸರಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಸದಸ್ಯರ ಗೌರವಧನ ಹೆಚ್ಚಿಸುವುದರ ಬಗ್ಗೆ ಕೂಡ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಪಿಡಿಒ ಸೇರಿದಂತೆ ಅಧಿಕಾರಿಗಳ ಹಸ್ತಕ್ಷೇಪ ತಡೆಯಲು ಕಾರ್ಯಸೂಚಿ ಒಳಗೊಂಡ ಕೈಪಿಡಿಯನ್ನು ತಯಾರು ಮಾಡಲಾಗಿದ್ದು ಪಂಚಾಯತ್ಗಳ ಕೈಸೇರಲಿದೆ ಎಂದರು.
ಸೋಲಾರ್ ಅಳವಡಿಕೆಗೆ ಚಿಂತನೆ
ಗ್ರಾಮ ಪಂಚಾಯತ್ಗಳಿಂದ 9 ಸಾವಿರ ಕೋಟಿ ರೂ. ಎಸ್ಕಾಂಗೆ ಬಾಕಿ ನೀಡಬೇಕಾಗಿದೆ. ಇದನ್ನು ಗಂಭೀರವಾಗಿ ಪರಿಣಿಸಲಾಗಿದ್ದು ಗ್ರಾಮ ಪಂಚಾಯತ್ಗಳಲ್ಲಿ ಸೋಲಾರ್ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ. ಸೋಲಾರ್ ದೀಪಗಳ ಅಳವಡಿಕೆಗೆ ಬಜೆಟ್ನಲ್ಲಿ ಸರಕಾರದ ಬಳಿ ಅನುದಾನ ಕೇಳಲಾಗಿದೆ. ಸೋಲಾರ್ ದೀಪಗಳ ಅಳವಡಿಕೆ ಪ್ರಾಯೋಗಿಕ ಯೋಜನೆ ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
472 ಅಧಿಕಾರಿಗಳ ಅಮಾನತು
ನಾನು ಅಧಿಕಾರ ವಹಿಸಿಕೊಂಡ ಮೇಲೆ ಸುಮಾರು 472 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಇ- ಹಾಜರಾತಿ ಪ್ರಕ್ರಿಯೆ ಅನಂತರ ಪಿಡಿಒಗಳ ಹಾಜರಾತಿ ಹೆಚ್ಚಾಗಿದ್ದು ಬಯೋಮೆಟ್ರಿಕ್ ಮಾಡಿದಷ್ಟು ದಿನ ಅವರಿಗೆ ಸಂಬಳ ನೀಡುವ ಕೆಲಸ ಕೂಡ ನಡೆಯಲಿದೆ. ಇ-ಸ್ವತ್ತಿನ ಬಗ್ಗೆ ಗಂಭೀರ ದೂರುಗಳು ಕೇಳಿಬಂದಿವೆ. ಕಂದಾಯ ಇಲಾಖೆ ಜತೆಗೆ ಬಗೆಹರಿಸುವ ಕೆಲಸ ನಡೆಯಲಿದೆ. ಬಾಪೂಜಿ ಸೇವಾ ಕೇಂದ್ರಕ್ಕೆ 72 ನಾಗರಿಕ ಸೇವೆಗಳನ್ನು ಅಳವಡಿಕೆ ಮಾಡಲಾಗಿದೆ ಎಂದರು.
ಗ್ರಾಮ ಪಂಚಾಯತ್ಗಳಿಗೆ ರೇಟಿಂಗ್
ಗ್ರಾಮ ಪಂಚಾಯತ್ಗಳಿಗೆ ಗ್ರೇಡಿಂಗ್ ಮತ್ತು ರೇಟಿಂಗ್ ನೀಡುವ ಕೆಲಸ ನಡೆಯಲಿದೆ. ಮೂಲ ಸೌಕರ್ಯ, ಗ್ರಾಮಸಭೆ, ಕಂದಾಯ ವಸೂಲಿ ಸೇರಿದಂತೆ ಮತ್ತಿತರ ಮಾನದಂಡಗಳನ್ನಿಟ್ಟುಕೊಂಡು ಯಾವುದು ಉತ್ತಮ ಪಂಚಾಯತ್ ಎಂದು ಗ್ರೇಡಿಂಗ್ ಮತ್ತು ರೇಟಿಂಗ್ ನೀಡುವ ಪ್ರಕ್ರಿಯೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ