ಹಿಂದೂ ಧರ್ಮವೇ ವಂಚನೆ: SP ನಾಯಕ ಮೌರ್ಯ ವಿವಾದಿತ ಹೇಳಿಕೆ
ಕೆಲವರಿಗೆ ಅದು ಜೀವನೋಪಾಯ
Team Udayavani, Dec 27, 2023, 12:43 AM IST
ಹೊಸದಿಲ್ಲಿ: ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಸನಾತನ ಧರ್ಮ ವೈರಸ್ ಇದ್ದಂತೆ ಎಂದು ಹೇಳಿ ತೀವ್ರ ವಿವಾದಕ್ಕೆ ಕಾರಣವಾಗಿದ್ದರು. ಇದೀಗ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ, ಹಿಂದೂ ಧರ್ಮವಲ್ಲ, ಅದೊಂದು ವಂಚನೆ, ಕೆಲವರಿಗೆ ಜೀವನೋಪಾಯದ ಮಾರ್ಗ ಎಂದು ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಮಾತನಾಡಿದ ಅವರು, “ಹಿಂದೂ ಧರ್ಮ ಅನ್ನುವುದು ಒಂದು ಮೋಸ, 1955ರಲ್ಲಿ ಸರ್ವೋಚ್ಚ ನ್ಯಾಯಾಲಯ ಹಿಂದೂ ಒಂದು ಧರ್ಮವಲ್ಲ, ಜೀವನಪದ್ಧತಿ ಎಂದು ಹೇಳಿತ್ತು. ಹಿಂದೂ ಅನ್ನುವುದು 200 ಧರ್ಮಗಳ ಒಂದು ಒಕ್ಕೂಟ. ಮೋಹನ್ ಭಾಗವತ್, ಮೋದಿಯೂ ಹಿಂದೂ ಒಂದು ಧರ್ಮವಲ್ಲ ಎಂದಿದ್ದಾರೆ. ಕೆಲವರಿಗೆ ಇದು ಜೀವನಾಧಾರ’ ಎಂದರು.
ಎಸ್ಪಿ ನಾಯಕ ಮೌರ್ಯ ತುಳಸಿದಾಸರ ರಚನೆಯ ರಾಮಚರಿತ ಮಾನಸದಲ್ಲಿ ದಲಿತರು ಮತ್ತು ಆದಿವಾಸಿಗಳ ಮೇಲೆ ಆಕ್ಷೇಪಾರ್ಹ ಭಾಷೆ ಬಳಕೆ ಮಾಡಲಾಗಿದೆ ಎಂದಿದ್ದರು. ಜತೆಗೆ ನಾಲ್ಕು ಕೈಗಳನ್ನಿಟ್ಟುಕೊಂಡು ಲಕ್ಷ್ಮೀ ದೇವಿ ಹೇಗೆ ಜನಿಸಲು ಸಾಧ್ಯ? ಲಕ್ಷ್ಮೀಯನ್ನು ಪೂಜಿಸುವ ಬದಲು ನಿಮ್ಮ ಪತ್ನಿಯರನ್ನು ಗೌರವಿಸಿ ಎಂದಿದ್ದರು.
ಈಗ ನಾವು ಅವರನ್ನು ನಿರ್ಲಕ್ಷಿಸಬೇಕಾಗಿದೆ. ಅವರನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್ ಯಾದವ್ ಬೆಂಬಲಿಸಿ, ಬೆಳೆಸುತ್ತಿದ್ದಾರೆ.
ನರೇಂದ್ರ ಕಶ್ಯಪ್, ಉ.ಪ್ರ. ಬಿಜೆಪಿ ಒಬಿಸಿ ಮೋರ್ಚಾ ಮುಖ್ಯಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ