ಕೋಡಿಯಲ್ಲಿ ನಿಲ್ಲದ ಉಪ್ಪುನೀರಿನ ಹರಿವು! ಕೃಷಿ ಮಾಡುವುದನ್ನೇ ನಿಲ್ಲಿಸಿದ ಅತಂತ್ರ ಕೃಷಿಕರು


Team Udayavani, Mar 4, 2021, 4:30 AM IST

ಕೋಡಿಯಲ್ಲಿ ನಿಲ್ಲದ ಉಪ್ಪುನೀರಿನ ಹರಿವು! ಕೃಷಿ ಮಾಡುವುದನ್ನೇ ನಿಲ್ಲಿಸಿದ ಅತಂತ್ರ ಕೃಷಿಕರು

ಕುಂದಾಪುರ: ಕೋಡಿ ಪ್ರದೇಶದಲ್ಲಿ ಉಪ್ಪುನೀರಿನ ಹರಿವು ತಡೆಗೆ ಸ್ಥಳೀಯಾಡಳಿತ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕೃಷಿ ಇಲ್ಲ
ಸಮುದ್ರದ ಉಬ್ಬರ -ಇಳಿತ ಸಂದರ್ಭ ಇಲ್ಲಿ ಹಿನ್ನೀರಾಗಿ ಉಪ್ಪು ನೀರು ಹರಿದುಬರುತ್ತದೆ. ಗದ್ದೆ, ತೋಟ, ಮನೆ ಎಂದು ನೋಡದೇ ಏಕಾಏಕಿ ನೀರು ಬರುವ ಕಾರಣ ಒಂದು ರೀತಿಯ ಅತಂತ್ರ ವಾತಾವರಣ ನಿರ್ಮಾಣವಾಗಿದೆ. ಕೆಲವು ವರ್ಷಗಳಿಂದ ಈ ಸಮಸ್ಯೆ ಇರುವ ಕಾರಣ ಈ ಭಾಗದ ಜನ ಕೆಲವು ಪ್ರದೇಶದಲ್ಲಿ ಕೃಷಿ ಮಾಡುವುದನ್ನೇ ನಿಲ್ಲಿಸಿದ್ದಾರೆ. ಮಾಡಿದ ಕೃಷಿ ಉಪ್ಪು ನೀರಿನ ದಾಂಗುಡಿಯಿಂದಾಗಿ ಫ‌ಸಲು ಕೈಗೆ ದೊರೆಯುತ್ತಿಲ್ಲ. ತೆಂಗಿನ ಮರಗಳು ಬರಿದಾಗಿವೆ. ಭತ್ತದ ಗದ್ದೆ ಬಿಕೋ ಎನ್ನುತ್ತಿದೆ.

ಕುಡಿಯುವ ನೀರು
ಸಣ್ಣ ಮೊತ್ತದಲ್ಲಿ ತಡೆಗೋಡೆ ರಚಿಸಿದರೆ ಉಪ್ಪು ನೀರು ಮನೆಗೆ ನುಗ್ಗುವುದನ್ನು ತಡೆಗಟ್ಟಬಹುದು. ಕೋಡಿಯಲ್ಲಿ ನಿರ್ಮಾಣವಾಗುತ್ತಿರುವ ಟ್ಯಾಂಕ್‌ ಪೂರ್ಣವಾಗಿದ್ದು ಕುಡಿಯುವ ನೀರಿನ ಯೋಜನೆ ಬೇಗ ಮುಕ್ತಾಯವಾದರೆ ಇಲ್ಲಿನ ಜನತೆಗೆ ಕುಡಿಯಲು ಶುದ್ಧ ನೀರಾದರೂ ದೊರೆಯುತ್ತದೆ. ಅದಿಲ್ಲವಾದರೆ ಇಲ್ಲಿನವರು ಕುಡಿಯುವ ನೀರಿಗಾಗಿ ದೂರ ಪ್ರದೇಶಕ್ಕೆ ತೆರಳುತ್ತಿದ್ದಾರೆ. ನಿಂತ ನೀರಿನಲ್ಲಿ ಸಂಜೆಯ ವೇಳೆಯಂತು ದೊಡ್ಡ ದೊಡ್ಡ ಗಾತ್ರದ ಸೊಳ್ಳೆಗಳ ಕಾಟ. ಹಾಗಾಗಿ ಮಕ್ಕಳು, ಹಿರಿಯರ ಆರೋಗ್ಯದ ಕುರಿತೂ ಜನ ತಲ್ಲಣಗೊಂಡಿದ್ದಾರೆ.

ಭರವಸೆ
ಇಲ್ಲಿನ ಸಮಸ್ಯೆಗಳ ಕುರಿತು ಉದಯವಾಣಿ ಸುದಿನ ವರದಿ ಮಾಡಿತ್ತು. ಪುರಸಭೆ ಅಧ್ಯಕ್ಷರ ನೇತೃತ್ವದ ತಂಡ ವಿವಿಧೆಡೆ ಭೇಟಿ ಮಾಡಿತ್ತು. ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಅಧಿಕಾರಿಗಳ ತಂಡವೂ ಪ್ರತ್ಯೇಕ ಭೇಟಿ ಮಾಡಿತ್ತು. ಪರಿಹಾರ ಕಲ್ಪಿಸುವ ಭರವಸೆ ದೊರೆತಿದೆ. ಅನುಷ್ಠಾನವೇ ಆಗಿಲ್ಲ. ಪುರಸಭೆ ಅಧ್ಯಕ್ಷರು ಶಾಸಕರಿಗೆ ಮನವಿ ನೀಡಿದ್ದು ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರು ಮಾಡಿಸುವುದಾಗಿ ಅವರು ಭರವಸೆ ನೀಡಿದ್ದರು. ಆದರೆ ಅದಕ್ಕೂ ಮುನ್ನ ಪುರಸಭೆ ತಾತ್ಕಾಲಿಕವಾಗಿಯಾದರೂ ಯಾವುದಾದರೂ ತುರ್ತು ಕ್ರಮ ಕೈಗೊಳ್ಳಲಿ ಎನ್ನುವುದು ಇಲ್ಲಿನವರ ಆಶಯ. ಪುರಸಭೆಗೆ ಹೊಸ ಆಡಳಿತ ಬಂದಿದ್ದು ಸ್ಥಳೀಯರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಿದೆ ಎಂಬ ನಂಬಿಕೆಯಲ್ಲಿ ಇಲ್ಲಿನ ಜನರಿದ್ದಾರೆ.

ಎಷ್ಟು ಹೇಳಿದರೂ ಅಷ್ಟೇ
ಅದೆಷ್ಟು ಬಾರಿ ಹೇಳಿದರೂ ಇಲ್ಲಿನ ಸಮಸ್ಯೆ ಇತ್ಯರ್ಥ ವಾಗುವಂತೆ ಕಾಣುತ್ತಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಣಾರೆ ನೋಡಿಯೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಉಬ್ಬರ ಇಳಿತದ ಸಂದರ್ಭ ಸಮಸ್ಯೆ ವಿಪರೀತ ವಾಗುತ್ತದೆ. ಮನೆಯೊಳಗೆ ನೀರು ನುಗ್ಗುತ್ತದೆ. ಸಣ್ಣ ಮೊತ್ತದಲ್ಲಿ ಆಗುವ ತಾತ್ಕಾಲಿಕ ಕಾಮಗಾರಿ ಮಾಡಿ ಸಮಸ್ಯೆಗೆ ಪರಿಹಾರ ಕಂಡು ಹುಡುಕಲು ಕೂಡಾ ಪುರಸಭೆ ಮನ ಮಾಡುತ್ತಿಲ್ಲ ಎನ್ನುವುದು ವಿಷಾದನೀಯ.
– ಕೋಡಿ ಅಶೋಕ್‌ ಪೂಜಾರಿ ಕೋಡಿ ನಿವಾಸಿ

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.