ದಾನಿಗಳ ವೀರ್ಯ ಮೂಲಕ ಮಗು ಪಡೆಯಲು ಅವಕಾಶ? ಸುಪ್ರೀಂ ಕೋರ್ಟ್ಗೆ ಕೇಂದ್ರ ಸರಕಾರದ ಅರಿಕೆ
Team Udayavani, Jan 11, 2024, 1:38 AM IST
ಹೊಸದಿಲ್ಲಿ: ದಾನಿಗಳ ವೀರ್ಯ ಅಥವಾ ಮಹಿಳೆಯ ಅಂಡಾಣುವಿನಿಂದ ಬಾಡಿಗೆ ತಾಯಿ ಮೂಲಕ ಮಗು ಪಡೆಯುವುದಕ್ಕೆ ಹೇರಿರುವ ನಿಷೇಧ ಪುನರ್ ಪರಿಶೀಲನೆ ಮಾಡಲಾಗುತ್ತದೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ತಜ್ಞರು ಮತ್ತು ಕಾನೂನು ಪರಿಣತರ ಜತೆಗೆ ಸಮಾಲೋಚನೆ ನಡೆಸಲಾಗುತ್ತಿದ್ದು, ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು ನ್ಯಾ| ಬಿ.ವಿ. ನಾಗರತ್ನ ಮತ್ತು ನ್ಯಾ| ಸಂಜಯ್ ಕರೋ ಲ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಅರಿಕೆ ಮಾಡಿದ್ದಾರೆ.
2023ರ ಮಾ. 14ರಂದು ಕೇಂದ್ರ ಸರಕಾರವು ಬಾಡಿಗೆ ತಾಯ್ತನ (ನಿಯಂತ್ರಣ) ತಿದ್ದುಪಡಿ ಕಾಯ್ದೆಯಲ್ಲಿ ಮಕ್ಕಳನ್ನು ಹೊಂದಲು ಬಯಸುವ ಪತಿಯ ವೀರ್ಯ, ಪತ್ನಿಯ ಅಂಡಾಣುವನ್ನು ಬಾಡಿಗೆ ತಾಯಿಗೆ ನೀಡಿ ಮಗುವನ್ನು ಹೊಂದಬೇಕು, ಬೇರೆ ದಾನಿಗಳಿಂದ ಪಡೆದ ಅಂಶವನ್ನು ಬಳಸು ವಂತಿಲ್ಲ ಹಾಗೂ ವಿಧವೆ ಬಾಡಿಗೆ ತಾಯಿ ಯು ದಾನಿಗಳ ಅಂಶದಿಂದಲೇ ಮಗು ಹೇರಬೇಕೆಂದು ತಿದ್ದುಪಡಿ ತಂದಿತ್ತು.
ಮರು ಪರಿಶೀಲನೆ ಏಕೆ ?: ಆರೋಗ್ಯ ಸಮಸ್ಯೆ ಇರುವ ಕೆಲವು ದಂಪತಿಯಲ್ಲಿ ವೀರ್ಯ, ಅಂಡಾಣುವನ್ನು ನೀಡಿ ಮಗು ಪಡೆಯಲು ಸಾಧ್ಯವಿಲ್ಲ. ಅಂಥ ಸಂದ ರ್ಭಗಳಲ್ಲಿ ದಾನಿಗಳ ನೆರವು ಬೇಕಾಗುತ್ತ ದೆ. ಆದರೆ ಸರಕಾರ ಅವಕಾಶ ನೀಡದ ಹಿನ್ನೆಲೆಯಲ್ಲಿ ಪೋಷಕರಾಗುವ ಅಭಿಲಾ ಶೆಗಳೇ ಮುದುಡಿ ಹೋಗಿವೆ ಎಂದು ಸುಪ್ರೀಂನಲ್ಲಿ ಅರ್ಜಿ ದಾಖಲಾಗಿದ್ದ ಕಾರ ಣ ಮರು ಪರಿಶೀಲನೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ